ಯಾರ ಬಳಿ ಕ್ಯಾಶ್ ಲೆಸ್ ಇನ್ಷೂರೆನ್ಸ್ ಇದೆಯೋ ಅಂಥವರು ಕೊರೊನಾ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದಲ್ಲಿ ಸಿಕ್ಕಾಪಟ್ಟೆ ಬಿಲ್ ಮಾಡಲಾಗುತ್ತಿದೆ ಎಂದು ನಾನ್- ಲೈಫ್ ಇನ್ಷೂರೆನ್ಸ್ ಕಂಪೆನಿಗಳ ಒಕ್ಕೂಟವಾದ ದ ಜನರಲ್ ಇನ್ಷೂರೆನ್ಸ್ ಕೌನ್ಸಿಲ್ ಆರೋಪ ಮಾಡಿದೆ. ಹೆಲ್ತ್ ಕೇರ್ ಶುಲ್ಕಗಳಿಗೆ ನಿಯಂತ್ರಣ ಹೇರಬೇಕು ಎಂದು ಒತ್ತಾಯಿಸಲಾಗಿದ್ದು, ಕೊರೊನಾ ಕ್ಯಾಶ್ ಲೆಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ಅರ್ಜಿದಾರ ಆಗುವುದಾಗಿ ಸುಪ್ರೀಂ ಕೋರ್ಟ್ ನಲ್ಲಿ ಕೇಳಿಕೊಂಡಿದೆ.
ಕೌನ್ಸಿಲ್ ಮುಖ್ಯಸ್ಥ ಎಂ.ಎನ್. ಶರ್ಮಾ ಟೈಮ್ಸ್ ಆಫ್ ಇಂಡಿಯಾದ ಜತೆ ಮಾತನಾಡಿ, ಆಸ್ಪತ್ರೆಗಳು ಕೃತಕವಾಗಿ ದರ ಏರಿಕೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಈಗ ನಿಯಂತ್ರಣ ಇರುವುದರಿಂದ ಇನ್ಷೂರೆನ್ಸ್ ಕಂಪೆನಿಗಳು ದಾವೆ ಹೂಡಲು ಆಗಲ್ಲ. ನಾವು ವಿತರಿಸುವ ಪ್ರತಿ ಪಾಲಿಸಿಗೂ ದರವನ್ನು IRDAI ಮಂಜೂರು ಮಾಡಿರುತ್ತದೆ. ಒಂದು ವೇಳೆ ಆಸ್ಪತ್ರೆಯವರು ಸಿಕ್ಕಾಪಟ್ಟೆ ದರ ಏರಿಕೆ ಮಾಡಿದರೂ ನಮ್ಮ ಪ್ರಾಡಕ್ಟ್ ಗಳಿಗೆ ನ್ಯಾಯಸಮ್ಮತ ಅಲ್ಲದ ದರ ನಿಗದಿ ಮಾಡಲು ಆಗಲ್ಲ ಎಂದಿದ್ದಾರೆ.
ಕೊರೊನಾ ಚಿಕಿತ್ಸೆಗೆ ದರ ನಿಗದಿ ಮಾಡಬೇಕು
ಕೊರೊನಾ ಚಿಕಿತ್ಸೆಗೆ ದರ ಮಿತಿ ನಿಗದಿ ಮಾಡಬೇಕು ಎಂದು ಕೌನ್ಸಿಲ್ ನಿಂದ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ. ಆಸ್ಪತ್ರೆಗಳು ಒಬ್ಬೊಬ್ಬ ರೋಗಿಗೆ ಒಂದೊಂದು ಬಗೆಯಲ್ಲಿ ದರ ವಿಧಿಸುತ್ತಿವೆ. ಆದ್ದರಿಂದ ಸುಪ್ರೀಂ ಕೋರ್ಟ್ ನಲ್ಲಿ ಹಾಕಿಕೊಂಡಿರುವ ಅರ್ಜಿಗೆ ಅರ್ಜಿದಾರ ಆಗಲು ಬಯಸುತ್ತದೆ ಎಂದು ತಿಳಿಸಲಾಗಿದೆ.
ಜನಸಾಮಾನ್ಯರ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ PIL
ಈ ಮಧ್ಯೆ ಇನ್ಷೂರೆನ್ಸ್ ಇರುವ ರೋಗಿಗಳಿಗೆ ಒಂದು, ಇಲ್ಲದವರಿಗೆ ಮತ್ತೊಂದು ದರ ಹಾಕುವುದು ಗಮನಕ್ಕೆ ಬಂದಿದೆ ಎಂದು ತಿಳಿಸಲಾಗಿದೆ. ಅಂದ ಹಾಗೆ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಹಾಕಿರುವವರು ಆಸ್ಪತ್ರೆ ಸಂತ್ರಸ್ತ, ಕೋಲ್ಕತ್ತಾ ಮೂಲದ ಅವಿಷೇಕ್ ಗೋಯೆಂಕಾ. ಜನಸಾಮಾನ್ಯರ ಎದುರಿಸುತ್ತಿರುವ ಸಮಸ್ಯೆಗಳ ಪರ ಅವರು ಅರ್ಜಿ ಹಾಕಿಕೊಂಡಿದ್ದಾರೆ. ಇದೀಗ ಕೌನ್ಸಿಲ್ ಕೂಡ ಗೋಯೆಂಕಾ ಅರ್ಜಿಯಲ್ಲಿ ಸೇರಿಕೊಳ್ಳುವ ಸಾಧ್ಯತೆ ಇದೆ.
ಇನ್ಷೂರ್ಡ್ ಮೊತ್ತವನ್ನು ಗಮನಿಸಿ ಆಸ್ಪತ್ರೆಗಳಿಂದ ಚಿಕಿತ್ಸಾ ವಿಧಾನ
ಪಿಐಎಲ್ ನಲ್ಲಿ ತಿಳಿಸಿರುವ ಪ್ರಕಾರ, ಇನ್ಷೂರೆನ್ಸ್ ಇರುವ ಮತ್ತು ಇಲ್ಲದಿರುವ ರೋಗಿಗಳ ಮಧ್ಯೆ ಆಸ್ಪತ್ರೆ ದರದಲ್ಲಿ ವ್ಯತ್ಯಾಸ ಇದೆ. "ನಮ್ಮ ಗಮನಕ್ಕೆ ಬಂದಿರುವುದೇನೆಂದರೆ, ಇನ್ಷೂರ್ಡ್ ಮೊತ್ತವನ್ನು ಗಮನಿಸಿ, ಆಸ್ಪತ್ರೆಗಳು ಚಿಕಿತ್ಸಾ ವಿಧಾನವನ್ನು ಅನುಸರಿಸುತ್ತಿವೆ. ಉದಾಹರಣೆಗೆ, ಒಟ್ಟು ಇನ್ಷೂರೆನ್ಸ್ ಮೊತ್ತ 5 ಲಕ್ಷ ಇದ್ದಲ್ಲಿ 4.9 ಲಕ್ಷ ರುಪಾಯಿ ತನಕ ಆಸ್ಪತ್ರೆ ದರಗಳನ್ನು ಹಾಕುತ್ತಿವೆ. ಯಾರ ಬಳಿ ಇನ್ಷೂರೆನ್ಸ್ ಇರುವುದಿಲ್ಲವೋ ಅಂಥವರಿಗೆ ಆ ಮೊತ್ತ ಅರ್ಧ ಅಥವಾ ಕಾಲು ಭಾಗ ಮಾತ್ರ ಹಾಕಲಾಗುತ್ತಿದೆ" ಎಂದು ಆರೋಪಿಸಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications