ಭಾರತದ ಷೇರು ಮಾರುಕಟ್ಟೆಯಲ್ಲಿ ಸೋಮವಾರ (ಡಿಸೆಂಬರ್ 21, 2020) ಹೂಡಿಕೆದಾರರ ಸಂಪತ್ತು 7 ಲಕ್ಷ ಕೋಟಿ ರುಪಾಯಿ ಕೊಚ್ಚಿಹೋಯಿತು. ಜಾಗತಿಕ ಪ್ರಭಾವದಿಂದಾಗಿ ಪ್ರಾಫಿಟ್ ಬುಕ್ಕಿಂಗ್ ಕಂಡುಬಂದಿದ್ದರ ಹಿನ್ನೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿತು. ಸೆನ್ಸೆಕ್ಸ್ 1407 ಪಾಯಿಂಟ್ ಕುಸಿದು, 45,554 ಪಾಯಿಂಟ್ ತಲುಪಿತು. ನಿಫ್ಟಿ 432 ಪಾಯಿಂಟ್ ಕುಸಿದು, 13328 ಪಾಯಿಂಟ್ ತಲುಪಿತು.
ಬಿಎಸ್ ಇ ಲಿಸ್ಟೆಡ್ ಷೇರುಗಳ ಮೌಲ್ಯ ಶುಕ್ರವಾರ 185 ಲಕ್ಷ ಕೋಟಿ ರುಪಾಯಿ ಇದ್ದದ್ದು, ಸೋಮವಾರದ ದಿನದ ಕೊನೆಗೆ 178 ಲಕ್ಷ ಕೋಟಿ ರುಪಾಯಿಗೆ ಕುಸಿದಿಸಿದೆ. ಬಿಎಸ್ ಇ ಸೂಚ್ಯಂಕದಲ್ಲಿ 473 ಸ್ಟಾಕ್ ಗಳು ಲೋವರ್ ಸರ್ಕ್ಯೂಟ್ ಕಂಡಿತು. ಅದರಲ್ಲಿ ಪ್ರೋಜೋನ್ ಇಂಟು, ಸ್ಪೈಸ್ ಜೆಟ್, ಗ್ರಾಫೈಟ್ ಇಂಡಿಯಾ, ವಿಪುಲ್, ಟಾಟಾ ಸ್ಟೀಲ್ ಪಿಪಿ ಮತ್ತು ಹಿಂದೂಸ್ತಾನ್ ಕಾಪರ್ ಮತ್ತಿತರ ಷೇರುಗಳು ಲೋವರ್ ಸರ್ಕ್ಯೂಟ್ ಕಂಡವು.

ಈ ಮಧ್ಯೆಯೂ ಎನ್ ಎಸ್ ಇಯಲ್ಲಿ 105 ಷೇರುಗಳು 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿವೆ. ವೊಲಟಾಲಿಟಿ ಇಂಡೆಕ್ಸ್ ಅಥವಾ VIX 21.74% ಏರಿಕೆ ಕಂಡು, 22.76% ತಲುಪಿತು. ಹೀಗೆ ದಿಢೀರನೆ ವೊಲಟಾಲಿಟಿ ಸೂಚ್ಯಂಕ ಏರಿಕೆ ಕಂಡುಬಂದಿರುವುದು ಮಾರುಕಟ್ಟೆಯಲ್ಲಿ ಕರಡಿ ಹಿಡಿತವನ್ನು ಸೂಚಿಸುತ್ತದೆ.
ಎನ್ ಎಸ್ ಇಯಲ್ಲಿ ಟಾಪ್ ಐದು ಷೇರುಗಳ ಸಂಪತ್ತು ಒಟ್ಟಾರೆಯಾಗಿ 1.95 ಲಕ್ಷ ಕೋಟಿ ರುಪಾಯಿ ಇಳಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ 13.47 ಲಕ್ಷ ಕೋಟಿಯಿಂದ 12.26 ಲಕ್ಷ ಕೋಟಿಗೆ, ಐಸಿಐಸಿಐ ಬ್ಯಾಂಕ್ 3.57 ಲಕ್ಷ ಕೋಟಿಯಿಂದ 3.39 ಲಕ್ಷ ಕೋಟಿಗೆ, ಎಚ್ ಡಿಎಫ್ ಸಿ ಬ್ಯಾಂಕ್ 7.77 ಲಕ್ಷ ಕೋಟಿಯಿಂದ 7.61 ಲಕ್ಷ ಕೋಟಿಗೆ, ಐಟಿಸಿ 2.64 ಲಕ್ಷ ಕೋಟಿಯಿಮ್ದ 2.46 ಲಕ್ಷ ಕೋಟಿಗೆ, ಎಚ್ ಡಿಎಫ್ ಸಿ 4.46 ಲಕ್ಷ ಕೋಟಿಯಿಂದ 4.31 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.
More From GoodReturns

Stock Market Crash: ಮತ್ತೆ ಷೇರು ಮಾರುಕಟ್ಟೆಯಲ್ಲಿ ತಲ್ಲಣ; ಸೆನ್ಸೆಕ್ಸ್ 1000 ಪಾಯಿಂಟ್ಸ್ ಕುಸಿತ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications