ನವದೆಹಲಿ, ಫೆಬ್ರವರಿ 3: ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ಕರ್ನಾಟಕದ ಲೋಕಸಭಾ ಸದಸ್ಯರೊಬ್ಬರು ಕೊಟ್ಟಿರುವ ವಿವಾದಾತ್ಮಕ ಹೇಳಿಕೆ. ನಿಜಕ್ಕೂ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆಯಾ? ಲೋಕಸಭಾ ಸದಸ್ಯರು ಕೊಟ್ಟ ಹೇಳಿಕೆ ಎಷ್ಟು ಸರಿ ಎಷ್ಟು ತಪ್ಪು? ನಮ್ಮ ಕರ್ನಾಟಕದ ಕೆಲವು ಮಾಧ್ಯಮಗಳಿಗೆ ನಿಜವಾಗಿಯೂ ನಮ್ಮ ನೆಲ ಜಲ ನಾಡು ನುಡಿ ಮತ್ತು ನಮ್ಮ ಹಕ್ಕುಗಳ ಬಗ್ಗೆ ನಿಜಕ್ಕೂ ಬದ್ಧತೆ ಇದೆಯಾ ಅಥವಾ ಕೇವಲ ರಾಜಕೀಯ ಪಕ್ಷಗಳ ಮುಖವಾಣಿಗಳ? ಬನ್ನಿ ನೋಡೋಣ.
ಸ್ವಾತಂತ್ರ ನಂತರ ನಾವು ಉತ್ತರದವರ ಹಿಡಿತದಲ್ಲಿರುವ ಕೇಂದ್ರ ಸರ್ಕಾರಗಳಿಂದ ಹಲವಾರು ಬಾರಿ ತುಳಿತಕ್ಕೆ ಒಳಗಾಗುತ್ತಲೇ ಬಂದಿದ್ದೇವೆ ಅದರಲ್ಲೂ ನಮ್ಮ ಕರ್ನಾಟಕದ ಬದ್ಧತೆಯಿಲ್ಲದ ಕೇವಲ ಹೈ ಕಮಾಂಡ್ ಹೇಳುವಂತೆ ಕೇಳುವ ರಾಜಕಾರಣಿಗಳಿಂದ ನಾವು ನಮ್ಮ ಹಕ್ಕುಗಳನ್ನು ಪಡೆಯಲು ಸಾಹಸ ಪಡುತ್ತಲೇ ಬಂದಿದ್ದೇವೆ ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳು ಕೂಡ ಬದ್ಧತೆಯಿಲ್ಲದೆ ರಾಜಕೀಯ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುವವರಾಗಿದ್ದಾರೆ ಎಂಬುದೇ ವಿಪರ್ಯಾಸದ ಸಂಗತಿಯಾಗಿದೆ.

ರಾಜ್ಯಗಳಿಂದ ಕೇಂದ್ರ ಸರ್ಕಾರವು ಸಂಗ್ರಹಿಸುವ ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ಕೇಂದ್ರ ಹಣಕಾಸು ಆಯೋಗ ನಿಗದಿ ಮಾಡುತ್ತದೆ. ಹೀಗೆ 15 ನೇ ಹಣಕಾಸು ಆಯೋಗವು ನಿಗದಿ ಮಾಡಿದ ಪಾಲಿನಲ್ಲಿ ದೇಶದ ಬೇರೆಲ್ಲ ರಾಜ್ಯಗಳಿಗೆ ಹೆಚ್ಚು ಪ್ರಮಾಣದ ಲಾಭವಾಗಿದೆ.ಆದರೆ ನಮ್ಮ ಕರ್ನಾಟಕಕ್ಕೆ ಮಾತ್ರ ಭಾರಿ ಪ್ರಮಾಣದ ಅನ್ಯಾಯವಾಗಿದೆ.
ರಾಜ್ಯಗಳ ಜನಸಂಖ್ಯೆ, ತಲಾದಾಯ ಅಂತರ, ವಿಸ್ತೀರ್ಣ, ಮತ್ತಿತರ ಮಾನದಂಡಗಳನ್ನು ಬಳಸಿಕೊಂಡು ಅವುಗಳಿಗೆ ಎಷ್ಟು ಪ್ರಮಾಣದ ತೆರಿಗೆ ಪಾಲನ್ನು ನೀಡಬೇಕು ಎಂದು ಹಣಕಾಸು ಆಯೋಗವು ನಿರ್ಧರಿಸುತ್ತದೆ. ಹೀಗಾಗಿ ಕಡಿಮೆ ತೆರಿಗೆ ಪಾವತಿಸುವಂತಹ ಉತ್ತರ ಪ್ರದೇಶ, ಬಿಹಾರ್ , ಮಧ್ಯಪ್ರದೇಶ, ರಾಜಸ್ಥಾನ್, ಇತರ ದೊಡ್ಡ ಮತ್ತು ಅತಿ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಹೆಚ್ಚಿನ ತೆರಿಗೆ ಪಾಲು ಹಂಚಿಕೆಯಾಗುತ್ತಿದ್ದು, ಅತಿಹೆಚ್ಚು ತೆರಿಗೆ ಪಾವತಿಸುತ್ತಿರುವ ದಕ್ಷಿಣದ ರಾಜ್ಯಗಳಿಗೆ ವಿಸ್ತೀರ್ಣ ಮತ್ತು ಜನಸಂಖ್ಯೆ ಆದಾರದ ಮೇಲೆ ಕಡಿಮೆ ತೆರಿಗೆ ಹಂಚಿಕೆಯಾಗುತ್ತಿದೆ.
ಏಕೆ ಈ ತಾರತಮ್ಯ?:
14 ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಇದ್ದ 4.713% ಪಾಲನ್ನು ಇದೀಗ 15ನೇ ಹಣಕಾಸು ಆಯೋಗ 3.647% ಕ್ಕೆ ಇಳಿಸಿದೆ ಇದರ ಬಗ್ಗೆ ಪ್ರಶ್ನೆ ಮಾಡಿದ ಕರ್ನಾಟಕದ ಒಬ್ಬನೇ ಒಬ್ಬ ಸಂಸದನಿಗೆ ಕರ್ನಾಟಕದ ಮಾಧ್ಯಮಗಳು ತರಾಟೆಗೆ ತೆಗೆದುಕೊಂಡಿವೆ,ಮುಖ್ಯ ವಿಷಯವನ್ನು ಬಿಟ್ಟು ಅವರು ಹೇಳಿದ ಇನ್ನೊಂದು ವಿಷಯದ ಬಗ್ಗೆನೇ ದಿನ ಪೂರ್ತಿ ಚರ್ಚೆ ಮಾಡಿಕೊಂಡು ನಮ್ಮ ಕರ್ನಾಟಕಕ್ಕೇ ಆಗುತ್ತಿರುವ ಮೋಸವನ್ನು ಜನರಿಂದ ಮರೆಮಾಚುತ್ತಿವೆ ಎಂದೇ ಹೇಳಬಹುದು.
ತೆರಿಗೆ ಸಂಗ್ರಹದ ವಿಚಾರದಲ್ಲಿ ದೇಶದಲ್ಲೇ ಎರಡನೇ ಅತಿಹೆಚ್ಚು ತೆರಿಗೆ ಸಂಗ್ರಹ ಮಾಡಿಕೊಡುತ್ತಿರುವ ರಾಜ್ಯ ನಮ್ಮದು ಆದರೂ ನಮ್ಮ ಪಾಲನ್ನು ಅಂಗಲಾಚಿ ಬೇಡಿ ಪಡೆಯುವ ಸ್ಥಿತಿಗೆ ಬಂದಿರುವುದು ವಿಪರ್ಯಾಸವೇ ಸರಿ.ನಾವು ಕರ್ನಾಟಕದವರು ಕೂಡ ಮನೆ ತುಂಬಾ ಮಕ್ಕಳನ್ನು ಮಾಡಿಕೊಂಡು ಕೇವಲ ಜನಸಂಖ್ಯೆ ಅಭಿವೃದ್ಧಿ ಮಾಡಿಕೊಂಡು ಕಾಲಹರಣ ಮಾಡಿರುತ್ತಿದ್ದರೆ ಬಹುಶ ನಮಗೂ ಕೂಡ ಅತಿಹೆಚ್ಚು ಪಾಲು ಬರುತ್ತಿತ್ತೇನೋ???
ಮೋದಿ ತವರು ರಾಜ್ಯಕ್ಕೆ ಶೇಕಡಾ ೫೧ ಏರಿಕೆ:
ಈ ವಿಷಯದಲ್ಲಿ ಗುಜರಾತ್ ರಾಜಕಾರಣಿಗಳನ್ನು ಹೊಗಳಲೇಬೇಕು, ಇದೆ ಅವಧಿಯಲ್ಲಿ ಅತಿಹೆಚ್ಚು ತೆರಿಗೆ ಪಾಲು ಏರಿಕೆಯಾಗಿದ್ದು ಗುಜರಾತಿಗೆ 2018-2019ರಲ್ಲಿ ರೂ 23,489 ಕೋಟಿಯಷ್ಟು ಪಾಲು ಪಡೆದಿದ್ದ ಗುಜರಾತ್ 2022-2024 ರಲ್ಲಿ ರೂ 35,525 ಕೋಟಿ ಪಾಲು ಪಡೆಯಲಿದೆ. ಗುಜರಾತಿನ ತೆರಿಗೆ ಪಾಲು ಸುಮಾರು ರೂ 12,036 ಕೋಟಿಯಷ್ಟು ಅಂದರೆ ಶೇಕಡಾ 51 ರಷ್ಟು ಏರಿಕೆಯಾಗಿದೆ,ದೇಶದ ಬೇರೆ ಯಾವುದೇ ರಾಜ್ಯದ ತೆರಿಗೆ ಪಾಲು ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂಬುದು ಗಮನಿಸಬೇಕಾದ ವಿಷಯವಾಗಿದೆ.
ಇನ್ನು ಮುಂದೆಯಾದರು ಕರ್ನಾಟಕದ ರಾಜಕಾರಣಿಗಳು ರಾಜಕೀಯ ಕಚ್ಚಾಟ ಬಿಟ್ಟು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲನ್ನು ಘಟ್ಟಿ ಧ್ವನಿಯಿಂದ ಕೇಳಿ ಪಡೆಯಬೇಕು ಇದು ಪ್ರತಿಯೊಬ್ಬ ಕರ್ನಾಟಕದ ನಾಗರೀಕನ ಬಯಕೆಯಾಗಿದೆ. ಇದೆ ರೀತಿ ನಮ್ಮ ಮಾಧ್ಯಮಗಳು ಕೂಡ ನಾಡು ನುಡಿ ಎಂಬ ಬದ್ಧತೆಯೊಂದಿಗೆ ನಮ್ಮ ರಾಜಕಾರಣಿಗಳ ಪರವಾಗಿ ನಿಂತು (ಕರ್ನಾಟಕದ ವಿಷಯಕ್ಕೆ ಮಾತ್ರ) ನಮ್ಮ ಪಾಲಿಗೆ ಒತ್ತಾಯಿಸಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು ಇಲ್ಲದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ನಾವು ಉತ್ತರ ಭಾರತದ ಕೆಲವು ರಾಜ್ಯಗಳ ರೀತಿ ಹಿಂದುಳಿಯಬೇಕಾಗಬಹುದು.
ದೇಶ ಮೊದಲು ಎನ್ನುವ ಕೆಲವರಿಗೆ ನಾನು ಚೆನ್ನಾಗಿದ್ದರೆ ನನ್ನ ಕುಟುಂಬ,ನನ್ನ ಊರು ಚೆನ್ನಾಗಿದ್ದರೆ ದೇಶ ಕೂಡ ಚೆನ್ನಾಗಿರುತ್ತೆ ಎನ್ನುವುದು ಮನವರಿಕೆಯಾದರೆ ಸಾಕು.ಇಲ್ಲದಿದ್ದರೆ ಒಬ್ಬ ಭಿಕ್ಷುಕ ಬೀದಿಯಲ್ಲಿ ನಿಂತು ನನ್ನ ದೇಶ ಅತಿ ಶ್ರೀಮಂತ, ಮುಂದುವರೆದ ದೇಶ ಎಂದು ಹೇಳಿಕೊಳ್ಳುವುದರಲ್ಲಿ ಏನು ಅರ್ಥವಿಲ್ಲ ಎಂಬುದು ನನ್ನ ಅನಿಸಿಕೆ.
More From GoodReturns

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications