ನವದೆಹಲಿ, ಏಪ್ರಿಲ್ 11: ಆನ್ಲೈನ್ ಪೇಮೆಂಟ್ ಮೂಲಕ ಇಡೀ ದೇಶದ ಗಮನ ಸೆಳೆದು, ಜಾಗತಿಕವಾಗಿ ಬೆಳೆದಿದ್ದ 'ಪೆಟಿಎಂ' ಸಂಸ್ಥೆ ಈಗ ಮೂಲೆಗುಂಪಾಗಿ ನರಳುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಪೆಟಿಎಂ ಸಂಸ್ಥೆ ಪರಿಸ್ಥಿತಿ ಈಗ ಹೇಗಾಗಿದೆ ಎಂದರೆ ಕಂಪನಿ ಉಳಿಸಿಕೊಂಡರೆ ಸಾಕಪ್ಪಾ ಅಂತಿದ್ದಾರೆ ಉದ್ಯೋಗಿಗಳು. ಏಕೆಂದರೆ ಸಾಲು ಸಾಲು ಸಮಸ್ಯೆ ಎದುರಿಸುತ್ತಿರುವ 'ಪೆಟಿಎಂ' ಇನ್ನೇನು ಸಂಪೂರ್ಣ ಮುಳುಗಿ ಹೋಗುವ ಪರಿಸ್ಥಿತಿ ಕೂಡ ಎದುರಾಗುತ್ತಿದೆ ಎಂಬ ಆರೋಪಗಳು ಈ ಸಮಯದಲ್ಲಿ ಕೇಳಿಬರುತ್ತಿವೆ.

ಆರ್ಬಿಐ ನಿರ್ಬಂಧದ ನಂತರ 'ಪೆಟಿಎಂ' ಗ್ರಹಚಾರ ಕೂಡ ಬದಲಾಗಿ ಹೋಗಿದೆ. ಇದೇ ಕಾರಣಕ್ಕೆ 'ಪೆಟಿಎಂ' ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ಅಕ್ಷರಶಃ ನೆಲಕ್ಕೆ ಅಪ್ಪಳಿಸಿ, ಮತ್ತೆ ನಿಧಾನವಾಗಿ ಮೇಲೆ ಬಂದಿತ್ತು. ಆದರೆ ಈಗ ಮತ್ತೆ ಹೂಡಿಕೆದಾರರಿಗೆ ಆಘಾತ ಎದುರಾಗಿದೆ. 'ಪೆಟಿಎಂ' ಪೇಮೆಂಟ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ & ಸಿಇಒ ಹುದ್ದೆಗೆ ಸುರೀಂದರ್ ಚಾವ್ಲಾ ರಾಜೀನಾಮೆ ನೀಡಿದ ನಂತರ ಅಲ್ಲೋಲ ಕಲ್ಲೋಲ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಕೂಡ 'ಪೆಟಿಎಂ' ಷೇರುಗಳು ಮತ್ತೆ ಮಕಾಡೆ ಮಲಗುತ್ತಿವೆ.
ಪೆಟಿಎಂ ಷೇರುಗಳ ಕುಸಿತ
ಪಿಪಿಬಿಎಲ್ MD & CEO ಸುರೀಂದರ್ ಚಾವ್ಲಾ ವೈಯಕ್ತಿಕ ಕಾರಣ ಹೇಳಿ ತಮ್ಮ ರಾಜೀನಾಮೆಯ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆ ಹೊರತಾಗಿ ಜೂನ್ 26, 2024 ರಂದು ತಮ್ಮ ಕರ್ತವ್ಯದಿಂದಲೇ ಬಿಡುಗಡೆ ಆಗಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಈ ಬಗ್ಗೆ ಪೇಟಿಎಂ ಸಂಸ್ಥೆ ಪೋಷಕ ಸಂಸ್ಥೆ ಆಗಿರುವ One97 ಕಮ್ಯುನಿಕೇಷನ್ಸ್ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇಂದು ಬೆಳಗ್ಗೆಯೇ 'ಪೆಟಿಎಂ' ಷೇರುಗಳು ಮಕಾಡೆ ಮಲಗಿ ಹೂಡಿಕೆ ಮಾಡಿದ್ದವರಿಗೆ ಭಯ ಕೂಡ ಎದುರಾಗಿತ್ತು.
ಸಾಲು ಸಾಲು ವಿವಾದಗಳು
ಆರಂಭದಲ್ಲಿ 'ಪೆಟಿಎಂ' ಷೇರುಗಳು ಮಕಾಡೆ ಮಲಗಿದರೂ ನಂತರ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿವೆ. ಹೀಗಾಗಿ ಷೇರು ಪೇಟೆಯಲ್ಲಿ ಹೂಡಿಕೆದಾರರು ಒಂದಷ್ಟು ನಿಟ್ಟುಸಿರನ್ನು ಬಿಟ್ಟಿದ್ದಾರೆ. ಮತ್ತೊಂದು ಕಡೆ 'ಪೆಟಿಎಂ' ಸಂಸ್ಥೆಯ ಒಳಗೆ ಸಾಕಷ್ಟು ವಿವಾದಗಳು ಮತ್ತು ಬದಲಾವಣೆ ನಡೆಯುತ್ತಿರುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ಕೂಡ ಪೆಟಿಎಂ ಷೇರುಗಳ ಏರಿಳಿತ ಮಾಮೂಲಿ ಎಂಬ ಮಾತುಗಳೂ ಕೇಳಿಬರುತ್ತಿವೆ. ಇಷ್ಟೆಲ್ಲದರ ನಡುವೆ ಷೇರುಪೇಟೆ ಮಾತ್ರ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಾಗೇ ಹೂಡಿಕೆದಾರರು ಕೂಡ.
ಕೆಲವೇ ವರ್ಷಗಳ ಹಿಂದೆ 'ಪೆಟಿಎಂ' ಹೆಸರು ದೊಡ್ಡ ಪ್ರಮಾಣದಲ್ಲಿ ಹರಡಿತ್ತು. ಆನ್ಲೈನ್ ಪೇಮೆಂಟ್ ಅಂದ್ರೆ ಅದು ಪೆಟಿಎಂ ಮಾತ್ರ ಎನ್ನುವಷ್ಟರ ಮಟ್ಟಿಗೆ ಪೆಟಿಎಂ ಸಂಸ್ಥೆ ಹೆಸರು ಗಳಿಸಿತ್ತು. ಆದರೆ ಈಗ ಎಲ್ಲವೂ ಬದಲಾಗಿ ಹೋಗಿದೆ. ಹಾಗೇ 'ಪೆಟಿಎಂ' ಸಾಲು, ಸಾಲು ವಿವಾದದಲ್ಲಿ ಕೂಡ ಸಿಲುಕಿದೆ. ಆರ್ಬಿಐ ಕಠಿಣ ನಿರ್ಧಾರದ ಬಳಿಕ ಸಮಸ್ಯೆ ಎದುರಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications