ಬೆಂಗಳೂರು ನಾವಿಂದ್ರೆ ನೀವು ಎಂದ ಉತ್ತರ ಭಾರತೀಯಳಿಗೆ ಬೆಂಗಳೂರು ಬಿಟ್ಟು ತೊಲಗಿ ಎಂದ ನೆಟ್ಟಿಗರು

ಬೆಂಗಳೂರು, ಸೆಪ್ಟೆಂಬರ್‌ 23: ಬೆಂಗಳೂರಿನಲ್ಲಿ ವಾಸಿಸುತ್ತಿರುವ ಇನ್‌ಸ್ಟಾಗ್ರಾಮ್ ಬಳಕೆದಾರ ಉತ್ತರ ಭಾರತೀಯ ಮಹಿಳೆಯೊಬ್ಬರು ಇತ್ತೀಚೆಗೆ ನಡೆಯುತ್ತಿರುವ ನಾರ್ತ್ ವರ್ಸಸ್ ಸೌತ್ ಚರ್ಚೆಗೆ ತುಪ್ಪ ಸುರಿದಿದ್ದಾಳೆ. ಉತ್ತರ ಭಾರತೀಯರಿಲ್ಲದೆ ಬೆಂಗಳೂರು ಬದುಕಲು ಸಾಧ್ಯವಾಗುವುದಿಲ್ಲ ಎಂದು ಹೇಳುವ ಮೂಲಕ ತನ್ನ ಉದ್ಧಟತನವನ್ನು ತೋರಿದ್ದಾಳೆ.

ಇನ್‌ಸ್ಟಾಗ್ರಾಮ್ ಇನ್ಫುಯೆನ್ಸರ್‌ ಸುಗಂಧ್ ಶರ್ಮಾ ಎಂಬಾಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವಾರು ಕಾಮೆಂಟ್‌ಗಳು ಬಂದಿದೆ. ಅನೇಕ ಬಳಕೆದಾರರು ಅವರ ಹೇಳಿಕೆಗಳನ್ನು "ಅಜ್ಞಾನಿ" ಮತ್ತು "ಅಹಂಕಾರಿ" ಎಂದು ಕರೆದಿದ್ದಾರೆ.

ಉತ್ತರ ಭಾರತೀಯಳಿಗೆ ಬೆಂಗಳೂರು ಬಿಟ್ಟು ತೊಲಗಿ ಎಂದ ನೆಟ್ಟಿಗರು

ವೈರಲ್ ವೀಡಿಯೋದಲ್ಲಿ ಎಲ್ಲಾ ಉತ್ತರ ಭಾರತೀಯರು ನಿಜವಾಗಿಯೂ ನಗರವನ್ನು ತೊರೆದರೆ ಬೆಂಗಳೂರು ನಗರ ಬದುಕಲು ಸಾಧ್ಯವಿಲ್ಲ. ನೀವು ಬದುಕುತ್ತಿರುವುದರಿಂದ ನಮ್ಮಿಂದ ಎಂದು ಅಹಂಕಾರದ ಮಾತುಗಳನ್ನಾಡಿದ್ದಾರೆ. ಇಲ್ಲಿ ಪಿಜಿಗಳು ನಡೆಯುತ್ತಿರುವುದು ನಮ್ಮಿಂದ, ಕೋರಮಂಗಲದ ಪಬ್‌ಗಳು ನಡೆಯುತ್ತಿರುವುದು ನಮ್ಮಿಂದ ಎಂದು ಹೇಳಿದ್ದಾರೆ.

ಒಮ್ಮೆ ನೀವು ನಾವು ಬೆಂಗಳೂರು ಖಾಲಿ ಮಾಡಿದರೆ ನಿಮ್ಮ ಗತಿ ಪಿಜಿಗಳು, ಹೋಟೆಲ್‌ಗಳು, ಪಬ್‌ಗಳು, ಮಾರುಕಟ್ಟೆಗಳು, ಶಾಪಿಂಗ್‌ ಮಾಲ್‌ಗಳು ಖಾಲಿಯಾಗುತ್ತದೆ ಎಂದು ಹೇಳಿದ್ದಾರೆ. ಅವರ ವೀಡಿಯೊವನ್ನು ಶುಕ್ರವಾರ ಹಂಚಿಕೊಳ್ಳಲಾಗಿದ್ದು, ಸಾವಿರಾರು ವೀಕ್ಷಣೆಗಳು ಮತ್ತು ನೂರಾರು ಕಾಮೆಂಟ್‌ಗಳು ಬಂದಿದೆ. ಅವರಲ್ಲಿ ಹೆಚ್ಚಿನವರು ಶರ್ಮಾ ಅವರ ಅವಹೇಳನಕಾರಿ ಹೇಳಿಕೆಗಳಿಗಾಗಿ ಟೀಕಿಸಿದ್ದಾರೆ.

ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಚೈತ್ರ ಆಚಾರ್ ಅವರು ಸುಗಂಧ್ ಶರ್ಮಾ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ಶರ್ಮಾ ಅವರನ್ನು ನೀವು ಬೆಂಗಳೂರು ನಗರವನ್ನು ಬಿಟ್ಟು ತೊಲಗಿ "ಬೆಂಗಳೂರು ಹೇಗೆ ಖಾಲಿಯಾಗುತ್ತದೆ" ಎಂದು ನೋಡುವಂತೆ ತಿಳಿಸಿದರು.

"ನಿಜವಾಗಿಯೂ ನೀವು ಕೇವಲ ಒಂದು ಪ್ರಯೋಗವಾಗಿ ಹೊರಡಲು ಸಾಧ್ಯವಾದರೆ ಮತ್ತು ಬೆಂಗಳೂರು ಹೇಗೆ ಖಾಲಿಯಾಗುತ್ತದೆ ಎಂಬುದನ್ನು ನೋಡಿದರೆ, ನಾವು ಆ ಶೂನ್ಯತೆ ಮತ್ತು ಡ್ಯಾನ್ಸರ್‌ಗಳು ಕಡಿಮೆ ಪಬ್‌ಗಳೊಂದಿಗೆ ಬದುಕಲು ಸಿದ್ಧರಿದ್ದೇವೆ. ನಾವು ಅದರೊಂದಿಗೆ ನಿಜವಾಗಿಯೂ ಬದುಕಬಹುದು. ಉಳಿದೆಲ್ಲ ಉತ್ತರ ಭಾರತೀಯರನ್ನು ಮರೆತುಬಿಡಿ. ನೀವು ಸದ್ಯಕ್ಕೆ ಹೊರಡಿ ಮೇಡಂ, ಸದ್ಯಕ್ಕೆ ಸಾಕು" ಎಂದು ಚೈತ್ರ ಆಚಾರ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ನಟಿ ವರ್ಷಾ ಬೊಳ್ಳಮ್ಮ ಕೂಡ ಆಚಾರ್‌ಗೆ ಒಪ್ಪಿಗೆ ಸೂಚಿಸಿ, ದಯವಿಟ್ಟು ಹೊರಡಿ ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ನಟಿ ಅನುಪಮಾ ಗೌಡ, "ಬೆಂಗಳೂರು ಇದು ತಂಪಾಗಿದೆ ಎಂದು ನೀವು ಭಾವಿಸಿದರೆ, ಇಲ್ಲ. ನಿಮಗೆ ಎಲ್ಲಕ್ಕಿಂತ ಹೆಚ್ಚಾಗಿ ಬೆಂಗಳೂರು ಬೇಕು ಮತ್ತು ನೀವು ಬೆಂಗಳೂರನ್ನು ತೊರೆಯುವುದರಿಂದ ನಮ್ಮ ಊರಿಗೆ ಯಾವುದೇ ವ್ಯತ್ಯಾಸವಾಗಲ್ಲ ಮತ್ತು ನಮಗೆಲ್ಲರಿಗೂ ತಿಳಿದಿರುವಂತೆ ನೀವು ಬೆಂಗಳೂರನ್ನು ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕನ್ನಡದ ಸೆಲೆಬ್ರಿಟಿಗಳ ಹೊರತಾಗಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕನ್ನಡಿಗರು ಮತ್ತು ಉತ್ತರ ಭಾರತೀಯರ ನಡುವೆ ನಡೆಯುತ್ತಿರುವ ಚರ್ಚೆಯನ್ನು ಸಂಪೂರ್ಣವಾಗಿ ಆಧಾರರಹಿತವೆಂದು ಕರೆದರು ಮತ್ತು ಬೆಂಗಳೂರಿನಲ್ಲಿ ಎಲ್ಲರೂ ಹೇಗೆ ಶಾಂತಿಯುತವಾಗಿ ಬದುಕುತ್ತಿದ್ದಾರೆ ಎಂಬುದನ್ನು ಹೇಳಿದರು.

"ಒಬ್ಬ ಕನ್ನಡಿಗ ಮತ್ತು ಹೆಮ್ಮೆಯ ಬೆಂಗಳೂರಿಗನಾಗಿ, ನಾವು ನಮ್ಮ ಉತ್ತರ ಭಾರತೀಯ ಸ್ನೇಹಿತರೊಂದಿಗೆ ವಾಸ್ತವದಲ್ಲಿ ಯಾವುದೇ ಸಮಸ್ಯೆಗಳನ್ನು ಹೊಂದಿರಲಿಲ್ಲ. ಕೆಲವು ಇನ್ಫೋಯೆನ್ಸರ್‌ಗಳು ಮತ್ತು ಪುಟಗಳು ವೈಯಕ್ತಿಕ ಅಜೆಂಡಾವನ್ನು ಹೊಂದಿರುವಂತೆ ಭಾಸವಾಗುತ್ತಿದೆ. ನಿರಂತರವಾಗಿ 'ಉತ್ತರ ಭಾರತ ವಿರುದ್ಧ ಬೆಂಗಳೂರು' ವಿಷಯವನ್ನು ಪೋಸ್ಟ್ ಮಾಡುವ ಮೂಲಕ ಮತ್ತು ಅನಗತ್ಯ ದ್ವೇಷವನ್ನು ಹರಡುವ ಮೂಲಕ ಬೆಂಗಳೂರಿನತ್ತ ದ್ವೇಷ ಹರಡುತ್ತಿದ್ದಾರೆ. ಹೌದು, ಕೆಲವು ಘಟನೆಗಳು ಇರಬಹುದು, ಆದರೆ ಅದು ಎಲ್ಲರನ್ನೂ ಪ್ರತಿನಿಧಿಸುವುದಿಲ್ಲ. ನಾವೆಲ್ಲರೂ ಇಲ್ಲಿ ಸಹಬಾಳ್ವೆ ನಡೆಸುತ್ತೇವೆ ಮತ್ತು ನಾವು ವೈವಿಧ್ಯತೆಯನ್ನು ಸ್ವೀಕರಿಸುತ್ತೇವೆ. ನಾವು ಜನರನ್ನು ಸ್ವಾಗತಿಸುತ್ತೇವೆ, ಅವರಿಗೆ ಕನ್ನಡ ಕಲಿಯಲು ಸಹಾಯ ಮಾಡುತ್ತೇವೆ ಮತ್ತು ಅವರ ಜೀವನೋಪಾಯವನ್ನು ಸುಲಭಗೊಳಿಸುತ್ತೇವೆ " ಎಂದು ಯುಡಿಸ್ಟರ್ ನಾರಾಯಣ್ ಬರೆದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+