ಯಾವುದೇ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದರೆ ಸರಿಯಾದ ನಿಯಂತ್ರಣ ಮತ್ತು ಪಾರದರ್ಶಕತೆಯ ಅನುಪಸ್ಥಿತಿಯು ಸಾಮಾನ್ಯವಾಗಿ ಖರೀದಿದಾರರು ಮತ್ತು ಡೆವಲಪರ್ಗಳಿಗೆ ವಿವಿಧ ಸಮಸ್ಯೆಗಳು ಮತ್ತು ಸವಾಲುಗಳಿಗೆ ಕಾರಣವಾಗಿತ್ತು. ಇವುಗಳನ್ನು ಪರಿಹರಿಸಲು ಮತ್ತು ಒಳಗೊಂಡಿರುವ ಎಲ್ಲಾ ಮಧ್ಯಸ್ಥಗಾರರ ಹಿತಾಸಕ್ತಿಗಳನ್ನು ರಕ್ಷಿಸಲು, ನಮ್ಮ ಸರ್ಕಾರವು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು (RERA) ಸ್ಥಾಪಿಸಿದೆ.
ಆದರೆ ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆಯ ನಿಯಮ ಉಲ್ಲಂಘಿಸುವ ಮೂಲಕ ಅನೇಕ ಗೃಹ ಖರೀದಿದಾರರ ಕನಸುಗಳನ್ನು ಬಿಲ್ಡರ್ಗಳು ನುಚ್ಚುನೂರು ಮಾಡುತ್ತಿರುವುದು ಹೊಸತಲ್ಲ. ಇದರ ವಿರುದ್ದ ದೂರು ಸಲ್ಲಿಸಿದರೆ, ಅಥವಾ ಎಸ್ಟೇಟ್ ಡೆವಲಪರ್ಗಳು, ಏಜೆಂಟ್ಗಳರ ಚಟುವಟಿಕೆಗಳನ್ನು ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ನಿಯಂತ್ರಕ ಸಂಸ್ಥೆಯು ನಿಯಮಗಳನ್ನು ಉಲ್ಲಂಘಿಸಿದ್ರೆ ದಂಡ ವಿಧಿಸುತ್ತದೆ.

ಆದರೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ವಿಧಿಸುವ ಪರಿಹಾರ ರೂಪದ ದಂಡದ ಮೊತ್ತ ವಸೂಲು ಮಾಡುವುದು ಸಂಸ್ಥೆಗೆ ಬಹು ದೊಡ್ಡ ಸವಾಲಾಗಿದೆ. ರಾಜ್ಯದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಹೊರಡಿಸಿದ ಹಲವಾರು ಕೋಟಿ ರೂಪಾಯಿಗಳ ದಂಡ ವಸೂಲಿ ಮಾಡಬೇಕಿದ್ದು, ಈ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದೆ.
ಕೆ-ರೇರಾ ವೆಬ್ಸೈಟ್ನ ಅಂಕಿಅಂಶಗಳ ಪ್ರಕಾರ, ಈವರೆಗೆ ಬಿಲ್ಡರ್ಗಳಿಂದ ಕೇವಲ ಶೇ. 11ರಷ್ಟು ದಂಡದ ಮೊತ್ತವನ್ನು ಮಾತ್ರ ವಸೂಲಿ ಮಾಡಿದೆ. ಇದು 'ಕೆ-ರೇರಾ'ದ ಅಸಹಾಯಕತೆ ಎತ್ತಿ ತೋರಿಸುವುದು ಮಾತ್ರವಲ್ಲದೇ ತನ್ನ ಆದೇಶಗಳ ಜಾರಿಗೆ ಬಿಲ್ಡರ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯನ್ನು ಸಾರುತ್ತದೆ.
ಕೆ-ರೇರಾ ವೆಬ್ಸೈಟ್ನ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 1539 ಪ್ರಕರಣಗಳಲ್ಲಿ ರೆವೆನ್ಯೂ ರಿಕವರಿ ಆದೇಶಗಳನ್ನು ಹೊರಡಿಸಿದೆ. ಬಿಲ್ಡರ್ಗಳಿಂದ 707 ಕೋಟಿ ರೂ. ವಸೂಲಾತಿ ಆಗಬೇಕಿದ್ದು, ಆದರೆ ಈ ಪೈಕಿ 185 ಪ್ರಕರಣಗಳಲ್ಲಿ ಕೇವಲ 79 ಕೋಟಿ ರೂ. ಮಾತ್ರ ವಸೂಲಾಗಿದೆ. ಉಳಿದಂತೆ 627.32 ಕೋಟಿ ರೂ. ರಿಕವರಿ ಮಾಡಬೇಕಾಗಿದೆ. ಬಿಲ್ಡರ್ಗಳು ತಮ್ಮ ಹಣವನ್ನು ಉಳಿಸಿಕೊಳ್ಳಲು ರೇರಾ ಕಾನೂನನ್ನು ಉಲ್ಲಂಘಿಸುತ್ತಿರುವುದರಿಂದ ಗೃಹ ಖರೀದಿದಾರರು ದೊಡ್ಡ ಮಟ್ಟದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.
ಗೃಹ ಖರೀದಿದಾರರ ಕನಸು ನನಸಿಗೆ ವಿಘ್ನ
'ಕೆ-ರೇರಾ' ಆದೇಶಗಳನ್ನು 60 ದಿನಗಳಲ್ಲಿ ಪಾಲಿಸಬೇಕೆಂದು ನಿಯಮಗಳಿವೆ, ಆದರೆ ಬಿಲ್ಡರ್ಗಳು ಈ ನಿಯಮಗಳನ್ನು ಗೌರವಿಸುವುದಿಲ್ಲ. ರೇರಾ ಆದೇಶಗಳನ್ನು ಜಾರಿಗೊಳಿಸಬೇಕಾದ ಜಿಲ್ಲಾಧಿಕಾರಿಗಳು ಅಥವಾ ತಹಶೀಲ್ದಾರ್ಗಳು ಇತರ ಕೆಲಸದ ಒತ್ತಡಗಳಿರುತ್ತವೆ. ಈ ಹಿನ್ನೆಲೆಯಲ್ಲಿ, ಗೃಹ ಖರೀದಿದಾರರ ಹಿತವನ್ನು ಸಾಧಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ.
ಫೋರಂ ಫಾರ್ ಪೀಪಲ್ಸ್ ಕಲೆಕ್ಟಿವ್ ಎಫರ್ಟ್ಸ್ (ಎಫ್ಪಿಸಿಇ) ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶಂಕರ್ ಅವರು, "ಬಿಲ್ಡರ್ಗಳಿಂದ ದಂಡ ವಸೂಲಿ ಮಾಡುವುದು ಕೆ-ರೇರಾಗೆ ಸವಾಲಿನ ಕೆಲಸವಾಗಿದೆ. ಜಿಲ್ಲಾಡಳಿತಗಳ ಮೇಲೆ ಹೆಚ್ಚಿನ ಹೊರೆ ಇರುವುದರಿಂದ ರೇರಾ ಆದೇಶಗಳು ಜಾರಿಯಾಗುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಕಂದಾಯ, ವಸತಿ ಮತ್ತು ರೇರಾ ಅಧಿಕಾರಿಗಳ ಜಂಟಿ ಸಭೆ ನಡೆಸಬೇಕು" ಎಂದು ಒತ್ತಾಯಿಸಿದ್ದಾರೆ.
ಹೆಸರಾಂತ ಬಿಲ್ಡರ್'ಗಳಿಂದಲೂ ಬಾಕಿ
ಕಂದಾಯ ರಿಕವರಿ ಆದೇಶಗಳ ಪಾಲನೆ ಮಾಡುವಲ್ಲಿ ವಿಫಲವಾಗಿರುವ 275 ಬಿಲ್ಡರ್ಗಳಲ್ಲಿ ಖ್ಯಾತ ಬಿಲ್ಡರ್ಗಳೂ ಇದ್ದಾರೆ ಎಂಬುದು ವಿಶೇಷ. ಇವರ ಬಹುತೇಕ ವಸತಿ ಯೋಜನೆಗಳು ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿವೆ. ಕೆಲವು ಬಿಲ್ಡರ್ಗಳಂತೂ 10-15 ಕೋಟಿ ರೂ.ಗಳನ್ನು ಗೃಹ ಖರೀದಿದಾರರಿಗೆ ಪಾವತಿಸಬೇಕಿದೆ. ಆದರೂ ಅವರು ಆ ರಿಕವರಿ ಅದೇಶಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅವುಗಳನ್ನು ಜಿಲ್ಲಾಡಳಿತಗಳು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿಲ್ಲ. ಹಾಗಾಗಿ ಅವರು ಆದೇಶಗಳ ಬಗ್ಗೆ ಕಿಂಚಿತ್ತೂ ಚಿಂತಿಸದೆ ತಮ್ಮ ಪಾಡಿಗೆ ತಾವಿದ್ದಾರೆ.
ಏಕೆ ವಸೂಲಾಗುತ್ತಿಲ್ಲ ದಂಡ?
ರೇರಾ ಆದೇಶಗಳನ್ನು ಜಾರಿಗೊಳಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ಗಳ ಮೇಲಿದೆ. ಆದರೆ, ಅವರು ಇತರ ಕೆಲಸಗಳಲ್ಲಿ ಬಹಳವಾಗಿ ನಿರತರಾಗಿರುವುದರಿಂದ ರೇರಾ ಆದೇಶಗಳನ್ನು ಜಾರಿಗೊಳಿಸಲು ವಿಳಂಬವಾಗುತ್ತಿದೆ. ಇದರಿಂದಾಗಿ ಬಿಲ್ಡರ್ಗಳು ದಂಡವನ್ನು ಪಾವತಿಸದೆ ತಪ್ಪಿಸಿಕೊಳ್ಳುತ್ತಿದ್ದಾರೆ.
ಏನು ಮಾಡಬೇಕು?
ಕಠಿಣ ಕ್ರಮ: ಬಿಲ್ಡರ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ರೇರಾ ಆದೇಶಗಳನ್ನು ಜಾರಿಗೊಳಿಸಬೇಕು.
ಜಿಲ್ಲಾಡಳಿತಗಳಿಗೆ ಹೆಚ್ಚಿನ ಅಧಿಕಾರ: ರೇರಾ ಆದೇಶಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತಗಳಿಗೆ ನೀಡುವುದರ ಜೊತೆಗೆ ಅವರಿಗೆ ಹೆಚ್ಚಿನ ಅಧಿಕಾರ ನೀಡಬೇಕು.
ಗೃಹ ಖರೀದಿದಾರರ ಸಹಕಾರ: ಗೃಹ ಖರೀದಿದಾರರು ಒಗ್ಗಟ್ಟಾಗಿ ಹೋರಾಟ ನಡೆಸುವ ಮೂಲಕ ತಮ್ಮ ಹಕ್ಕನ್ನು ಪಡೆಯಬೇಕು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ, ರಾಜ್ಯದ ರಿಯಲ್ ಎಸ್ಟೇಟ್ ವಲಯದಲ್ಲಿ ಗ್ರಾಹಕರ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕೆ-ರೇರಾವು ದಂಡ ವಸೂಲಿ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಸುಧಾರಿಸಬೇಕಾಗಿದ ಅನಿವಾರ್ಯತೆ ಇದೆ. ಇದಕ್ಕಾಗಿ ಸರ್ಕಾರದಿಂದ ಹೆಚ್ಚಿನ ಬೆಂಬಲವನ್ನು ಪಡೆಯಬೇಕಾಗಿದೆ. ಇವಿಷ್ಟೇ ಅಲ್ಲದೇ ಗೃಹ ಖರೀದಿದಾರರು ಕೂಡ ತಮ್ಮ ಹಕ್ಕುಗಳನ್ನು ತಿಳಿದುಕೊಂಡು ಬಿಲ್ಡರ್ಗಳ ಮೇಲೆ ಒತ್ತಡ ಹೇರಬೇಕಾಗುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications