ಕರ್ನಾಟಕ ಸರ್ಕಾರವು ಹೊಸ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುವ ಹೆಜ್ಜೆ ಇಟ್ಟಿದೆ. ಈ ನೀತಿಯ ಮುಖ್ಯಾಂಶವೆಂದರೆ ಪ್ರಾಥಮಿಕ ಶಿಕ್ಷಣದ 5ನೇ ತರಗತಿಯವರೆಗೆ ಕನ್ನಡ ಅಥವಾ ಮಕ್ಕಳು ಮಾತನಾಡುವ ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸುವುದು. ಈ ತೀರ್ಮಾನವನ್ನು 2023ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿತ್ತು. ಇದೀಗ ಯುಜಿಸಿಯ ಮಾಜಿ ಅಧ್ಯಕ್ಷ ಸುಖದೇವ್ ಥೋರತ್ ನೇತೃತ್ವದ ಸಮಿತಿ ಈ ನೀತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಿದೆ.

ದ್ವಿಭಾಷಾ ಬೋಧನೆ ಮತ್ತು ಶಿಕ್ಷಕರ ತರಬೇತಿ:
ನೂತನ ನೀತಿಯ ಪ್ರಕಾರ, ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ/ಮಾತೃಭಾಷೆ.. ಈ ಎರಡೂ ಭಾಷೆಗಳಲ್ಲಿ ಬೋಧನೆ ನಡೆಯಬೇಕು. ಇದಕ್ಕಾಗಿ ಶಿಕ್ಷಕರಿಗೆ ದ್ವಿಭಾಷಾ ಬೋಧನಾ ತರಬೇತಿಯನ್ನು ನೀಡುವ ಹಾಗೂ ಭಾಷಾ ಕಲಿಕಾ ಕೇಂದ್ರಗಳನ್ನು ಸ್ಥಾಪಿಸುವ ಶಿಫಾರಸು ಇದೆ.
ಶಾಲಾ ಶಿಕ್ಷಣದಲ್ಲಿ 2+8+4 ಮಾದರಿ:
ಶಿಕ್ಷಣ ವ್ಯವಸ್ಥೆಯನ್ನು 2+8+4 ಮಾದರಿಯಲ್ಲಿ ರೂಪಿಸುವುದು ಈ ನೀತಿಯ ಇನ್ನೊಂದು ಮಹತ್ವದ ಅಂಶ. ಅಂದರೆ 2 ವರ್ಷ ಪೂರ್ವಪ್ರಾಥಮಿಕ, 8 ವರ್ಷ ಪ್ರಾಥಮಿಕ ಮತ್ತು 4 ವರ್ಷ ಮಾಧ್ಯಮಿಕ ಶಿಕ್ಷಣ. ಇದು ರಾಷ್ಟ್ರೀಯ ಶಿಕ್ಷಣ ನೀತಿಯ 5+3+3+4 ಮಾದರಿಯಿಂದ ಭಿನ್ನವಾಗಿದೆ. ಈ ಬದಲಾವಣೆಯಿಂದ ಕರ್ನಾಟಕದ ಶಾಲಾ ವ್ಯವಸ್ಥೆಯಲ್ಲಿ ವಿಶೇಷ ಬದಲಾವಣೆಗಳು ಸಂಭವಿಸಬಹುದು.
ಪ್ರವೇಶ ವಯಸ್ಸಿನ ಪರಿಷ್ಕರಣೆ:
ಮಕ್ಕಳಿಗೆ ಶಾಲೆಗೆ 6 ವರ್ಷ ವಯಸ್ಸಿಗಿಂತ ಮೊದಲೇ ಪ್ರವೇಶ ನೀಡುವಂತೆ, 1 ರಿಂದ 6 ವರ್ಷ ವಯಸ್ಸಿನವರೆಗೂ ಶಾಲಾ ಪ್ರವೇಶ ಮಂಜೂರು ಮಾಡುವಂತೆ ಈ ನೀತಿ ಶಿಫಾರಸು ಮಾಡಿದೆ. ಇದರಿಂದ ಸಣ್ಣ ಶಾಲೆಗಳನ್ನು ಉಳಿಸಿ ಅನಿಯಂತ್ರಿತ ಮುಚ್ಚುವಿಕೆಗಳನ್ನು ತಪ್ಪಿಸುವ ಸಾಧ್ಯತೆ ಹೆಚ್ಚುತ್ತದೆ.
ಬಾಲ್ಯದ ಆರೈಕೆ ಮತ್ತು ಪೂರ್ವಪ್ರಾಥಮಿಕ ಶಿಕ್ಷಣ:
ಬಾಲ್ಯಕಾಲದ ಆರೈಕೆ ಮತ್ತು ಶಿಕ್ಷಣ (ECCE) ವಿಭಾಗವನ್ನು ಬಲಪಡಿಸಲು, ಪ್ರಾಥಮಿಕ ಶಾಲೆಗಳಲ್ಲಿ ಎರಡು ವರ್ಷಗಳ ಪೂರ್ವಪ್ರಾಥಮಿಕ ತರಗತಿಗಳನ್ನು ಸೇರಿಸುವುದು, ECCE ಮಂಡಳಿಯನ್ನು ಸ್ಥಾಪಿಸುವುದು ಹಾಗೂ ಖಾಸಗಿ ಪೂರ್ವಶಾಲೆಗಳಿಗೆ ನಿಯಂತ್ರಣ ವ್ಯವಸ್ಥೆ ತರಬೇಕಾಗಿದೆ ಎಂದು ಈ ನೀತಿ ಸೂಚಿಸುತ್ತದೆ.
ಪಠ್ಯಕ್ರಮ ಮತ್ತು ಸ್ಥಳೀಕರಣ:
ಪಠ್ಯಕ್ರಮದಲ್ಲಿ NCERT ಪುಸ್ತಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಮಕ್ಕಳ ಸಾಂಸ್ಕೃತಿಕ ಹಾಗೂ ಭಾಷಿಕ ಪಾರಂಪರ್ಯಗಳಿಗೆ ಹೊಂದಿಕೆಯಾಗುವ ಸ್ಥಳೀಯ ವಿಷಯಗಳನ್ನು ಅಳವಡಿಸುವುದು ಮುಖ್ಯ. ಸಾಂವಿಧಾನಿಕ ಮೌಲ್ಯಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು.
ಖಾಸಗಿ ಶಾಲೆಗಳ ಶುಲ್ಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಅನ್ವಯಿಸುವ ಉದ್ದೇಶ ಈ ನೀತಿಯಲ್ಲಿದೆ. ಸಾರ್ವಜನಿಕ ಶಾಲೆಗಳ ಗುಣಮಟ್ಟವನ್ನು ಸುಧಾರಿಸುವುದರ ಮೇಲೆ ವಿಶೇಷ ಗಮನ ನೀಡಲಾಗಿದೆ.
ಆರ್ಥಿಕ ಹೂಡಿಕೆ ಮತ್ತು ಮುಕ್ತ ಶಾಲಾ ವ್ಯವಸ್ಥೆ:
ಶಾಲಾ ಶಿಕ್ಷಣಕ್ಕೆ ರಾಜ್ಯದ ಒಟ್ಟು ದೇಶೀಯ ಉತ್ಪನ್ನದ ಕನಿಷ್ಠ 3% ಮೀಸಲಿಡಬೇಕೆಂದು ಶಿಫಾರಸು ಮಾಡಲಾಗಿದೆ. ಬಜೆಟ್ನ ಈ ಹೂಡಿಕೆ 30% ವರೆಗೆ ಹೆಚ್ಚಿಸುವ ಗುರಿಯೂ ಇದೆ. ಕರ್ನಾಟಕ ರಾಜ್ಯ ಮುಕ್ತ ಶಾಲಾ ವ್ಯವಸ್ಥೆ (KIOS) ಸ್ಥಾಪಿಸಿ, ಕನ್ನಡ ಆಧಾರಿತ ಪಠ್ಯಕ್ರಮ ಮತ್ತು ಡಿಜಿಟಲ್ ವಿಷಯಗಳನ್ನು ಅಭಿವೃದ್ಧಿಪಡಿಸುವುದೂ ಈ ನೀತಿಯ ಭಾಗವಾಗಿದೆ.
More From GoodReturns

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Heavy Rain: ರಾಜ್ಯದಲ್ಲಿ ಮುಂದಿನ 4 ದಿನ ಮಳೆಯಬ್ಬರ ಶುರು; ಈ ಭಾಗದಲ್ಲಿ ಹೆಚ್ಚು

Karnataka Rain: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆಯಾರ್ಭಟ ಫಿಕ್ಸ್; ಜನರೇ ಎಚ್ಚರ!

KOMUL Milk Price: ಕೋಲಾರ ರೈತರಿಗೆ ಯುಗಾದಿ ಗಿಫ್ಟ್; ಕೋಮುಲ್ ಹಾಲು ದರ 39.85 ರೂ.ಗೆ ಏರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!



Click it and Unblock the Notifications