ರಾಜ್ಯದ ರೈತರಿಗೆ ಶಾಕ್! ತೋತಾಪುರಿ‌ ಮಾವು ಬ್ಯಾನ್ ಮಾಡಿದ ಆಂಧ್ರಪ್ರದೇಶ.. ನಿಷೇಧ ಹಿಂಪಡೆಯುವಂತೆ ರಾಜ್ಯ ಸರ್ಕಾರ ಮನವಿ

ರಾಜ್ಯದ ರೈತರಿಗೆ ದೊಡ್ಡ ಆಘಾತ! ತೋತಾಪುರಿ ಮಾವು ಬ್ಯಾನ್ ಮಾಡಿ ಮಹಾ ಎಡವಟ್ಟು ಮಾಡಿದ ಆಂಧ್ರಪ್ರದೇಶ. ಅನ್ನದಾತರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಮನವಿ‌ ಮಾಡಿದ ಕರ್ನಾಟಕ ಸರ್ಕಾರ. ಹೌದು,ಇತರ ರಾಜ್ಯಗಳಿಂದ ಬರುವ ತೋತಾಪುರಿ ಮಾವಿನ ಹಣ್ಣುಗಳ ಪ್ರವೇಶಕ್ಕೆ ಚಿತ್ತೂರು ಜಿಲ್ಲಾಡಳಿತ ವಿಧಿಸಿರುವ ನಿಷೇಧವನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಂಗಳವಾರ ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿಯನ್ನು ಮಾಡಿಕೊಂಡಿದ್ದಾರೆ.

ಮಾವು ಬೆಳೆಗಾರರು ಅತಿ ಹೆಚ್ಚಾಗಿ ಚಿತ್ತೂರಿನಂತಹ ಗಡಿ ಪ್ರದೇಶಗಳಲ್ಲಿ ಸಂಸ್ಕರಣಾ ಘಟಕಗಳನ್ನೇ ಅವಲಂಬಿಸಿರುವುದರಿಂದ ಏಕಾಏಕಿ ಹೇರಲಾಗಿರುವ ನಿಷೇಧದಿಂದ ಅವರನ್ನು ತೀವ್ರ ಸಂಕಷ್ಟ ತಂದುವೊಡ್ಡಿ ಎಂದು ಶಾಲಿನಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಇಂತಹ ನಿರ್ಧಾರವು 'ಸಹಕಾರಿ ಒಕ್ಕೂಟದ ಮನೋಭಾವ'ಕ್ಕೆ ವಿರುದ್ಧವಾಗಿದೆ ಮತ್ತು 'ಪ್ರತೀಕಾರದ ಭಾವನೆಗಳನ್ನು ಪ್ರಚೋದಿಸುವ' ಅಪಾಯವನ್ನು ಹೊಂದಿದೆ ಎಂದು ಪತ್ರದಲ್ಲಿ ವಿವರಿಸಿ ಬರೆದಿದ್ದಾರೆ.

ರಾಜ್ಯದ ರೈತರಿಗೆ ಶಾಕ್! ತೋತಾಪುರಿ‌ ಮಾವು ಬ್ಯಾನ್ ಮಾಡಿದ ಆಂಧ್ರಪ್ರದೇಶ

ಕರ್ನಾಟಕದ ಗಡಿ ಪ್ರದೇಶಗಳಲ್ಲಿ ವ್ಯಾಪಕವಾಗಿ ತೋತಾಪುರಿ ಮಾವು ಬೆಳೆಯಲಾಗುತ್ತಿದೆ. ಈ ಭಾಗದ ರೈತರಿಗೆ ಚಿತ್ತೂರು ಮಾರುಕಟ್ಟೆಯೇ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಆದರೆ, ಚಿತ್ತೂರು ಮಾರುಕಟ್ಟೆಯಲ್ಲಿ ತೋತಾಪುರಿ ಮಾವಿಗೆ ನಿರ್ಬಂಧ ಹೇರುವ ಆಂಧ್ರ ಸರ್ಕಾರದ ನಡೆಯಿಂದ ಕರ್ನಾಟಕದ ರೈತರಿಗೆ ಆತಂಕ ಎದುರಾಗಿದೆ.

ಆಂಧ್ರ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕದ ರೈತರಲ್ಲಿ ಆತಂಕ

ಆಂಧ್ರ ಪ್ರದೇಶ ಸರ್ಕಾರದ ಈ ನಿರ್ಧಾರವು ನೆರೆಯ ರಾಜ್ಯಗಳ ರೈತರಿಗೆ ತೊಂದರೆಯುಂಟು ಮಾಡುತ್ತದೆ. ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಉಂಟಾಗುತ್ತದೆ.

ಆಂಧ್ರ ಸರ್ಕಾರದ ಕ್ರಮವು ಕರ್ನಾಟಕದ ರೈತರಿಗೆ ಆತಂಕ ತಂದಿದೆ. ಈ ವಿಷಯದಲ್ಲಿ ಆಂಧ್ರ ಸರ್ಕಾರವು ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಕೆ. ವಿಜಯಕುಮಾರ್ ಅವರಿಗೆ ಮನವಿ ಪತ್ರವನ್ನು ಶಾಲಿನಿ ಬರೆದಿದ್ದಾರೆ.

ಒಟ್ಟಾರೆಯಾಗಿ, ಆಂಧ್ರ ಪ್ರದೇಶ ಸರ್ಕಾರದ ಈ ನಿರ್ಧಾರವು ಕರ್ನಾಟಕದ ಮಾವು ಬೆಳೆಗಾರರಲ್ಲಿ ಆತಂಕವನ್ನು ಮೂಡಿಸಿದೆ. ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರವು ಆಂಧ್ರ ಸರ್ಕಾರವನ್ನು ಒತ್ತಾಯವನ್ನು ಮಾಡಿದೆ.

ಹಣ್ಣು ರಾಜ ಎಂದೇ ಕರೆಯಲ್ಲಡುವ ಮಾವಿನ ಹಣ್ಣು ಬಹಳ ಪ್ರಸಿದ್ಧವಾದ ಹಣ್ಣು.ಇದು ರಚಿಕರವಷ್ಟೇ ಅಲ್ಲದೇ
ಆರೋಗ್ಯಕ್ಕೂ ಬಹಳ ಒಳ್ಳೆಯದು. ಮಾವಿನ ಹಣ್ಣಿನಲ್ಲಿರುವ ವಿಟಮಿನ್‌ಗಳು ಮತ್ತು ಖನಿಜಗಳು ದೇಹಕ್ಕೆ ಅನೇಕ ಪ್ರಯೋಜವನ್ನು ನೀಡುತ್ತದೆ.

ಮಾವಿನ ಹಣ್ಣಿನಿಂದಾಗುವ ಅನುಕೂಲಗಳೇನು...?

ಮಾವಿನ ಹಣ್ಣಿನಲ್ಲಿ ಅತಿ ಹೆಚ್ಚಾಗಿ ವಿಟಮಿನ್ ಸಿ ಇದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹವನ್ನು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಮಾವಿನ ಹಣ್ಣಿನಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಹೆಚ್ಚು ಉಪಯೋಗಕಾರಿ. ಇದರಿಂದಾಗಿ ಮಲಬದ್ಧತೆ ನಿರ್ವಾಹರಣೆಯಾಗುವುದರ ಜೊತೆಗೆ ಕರುಳಿನ ಆರೋಗ್ಯವನ್ನು ಸಹ ಕಾಪಾಡುತ್ತದೆ.

ವಿಟಮಿನ್ ಎ ಮಾವಿನ ಹಣ್ಣಿನಲ್ಲಿ ಹೇರಳವಾಗಿದೆ, ಇದು ಕಣ್ಣುಗಳ ಆರೋಗ್ಯಕ್ಕೆ ಹೆಚ್ಚಿನ ಅನುಕೂಲ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಮಾವಿನ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಮಾವಿನ ಹಣ್ಣಿನಲ್ಲಿರುವ ಕೆಲವು ಅಂಶಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಈ ಹಣ್ಣು ಹೋಂದಿದೆ.

ಮಾವಿನ ಹಣ್ಣು ನಿಮ್ಮ ಸೌದರ್ಯಕ್ಕೂ ಕೂಡ ಸಹಾಯ ಮಾಡುತ್ತದೆ. ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚು ಮಾಡುತ್ತದೆ. ಮೊಡವೆಯಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ನಕಲಿ ಮಾವಿನ ಹಣ್ಣುಗಳ ಹಾವಳಿ
ಮಾವಿನ ಹಣ್ಣಿನ ಸೀಸನ್‌ ಆರಂಭವಾದ ತಕ್ಷಣ ನಕಲಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುವುದು ಸಾಮಾನ್ಯವಾಗಿದೆ. ಆದರೆ, ಈ ಬಾರಿ ಹೆಚ್ಚಿನ ನಕಲಿ ಹಣ್ಣುಗಳ ಪತ್ತೆ ಆಗಿರುವ ಸುದ್ದಿಗಳು ವರದಿಯಾಗುತ್ತವೆ.ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ನಕಲಿ ಮಾವಿನ ಹಣ್ಣುಗಳನ್ನು ಕೃತಕ ಬಣ್ಣಗಳು ಮತ್ತು ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗುತ್ತದೆ. ಇವುಗಳ ಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+