ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಶಕ್ತಿ ಆರಂಭವಾಗಿ ನೂರು ದಿನಗಳು ಆಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಮೂರು ತಿಂಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನುಬ್ ಕುಮಾರ್ಗೆ ಪತ್ರ ಬರೆದಿದೆ. ಈ ಯೋಜನೆಯು ಎಸ್ಆರ್ಟಿಸಿ ಕಂಡಕ್ಟರ್ಗೆ ತಲೆನೋವಾಗಿದೆ ಎಂದು ಹೇಳಿದ್ದಾರೆ.
ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಕಂಡಕ್ಟರ್ಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೆಪ್ಟೆಂಬರ್ 19 ರಂದು ಬರೆದ ಪತ್ರದಲ್ಲಿ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ, "ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯು ಯಶಸ್ವಿಯಾಗಿ ಮೂರು ತಿಂಗಳು ಪೂರೈಸಿದೆ. ಆದರೆ, ಈ ಯೋಜನೆಯನ್ನು ಅನುಷ್ಠಾನಗೊಳಿಸುವಾಗ, ಕಂಡಕ್ಟರ್ಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ," ಎಂದು ತಿಳಿಸಿದರು.

ಕಂಡಕ್ಟರ್ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಸಲು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ತುರ್ತು ಸಭೆ ನಡೆಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಫೆಡರೇಶನ್ ಕೋರಿದೆ. ಕಂಡಕ್ಟರ್ಗಳ ಮೇಲೆ ನಡೆಯುತ್ತಿರುವ ಕಿರುಕುಳದ ಬಗ್ಗೆ ಉಲ್ಲೇಖಿಸಿದ ವಿಜಯಭಾಸ್ಕರ್, "ಸೆಪ್ಟೆಂಬರ್ 14 ರಂದು ಸಿಗಂದೂರಿನಿಂದ ಕೋಲಾರಕ್ಕೆ ಕೆಎಸ್ಆರ್ಟಿಸಿ ಬಸ್ ತೆರಳಿತ್ತು. ನಾಲ್ವರು ಮಹಿಳೆಯರು ಬಸ್ ಹತ್ತಿ ತಮ್ಮ ಸೀಟುಗಳನ್ನು ಕಾಯ್ದಿರಿಸಿದ್ದರು. ಎಂದಿನಂತೆ ಕಂಡಕ್ಟರ್ ರಾಮಣ್ಣ ರಿಸರ್ವೇಶನ್ ಟಿಕೆಟ್ ಪರಿಶೀಲಿಸಿ ಟಿಕೆಟ್ ಚಾರ್ಟ್ನಲ್ಲಿ ಗುರುತು ಮಾಡಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು," ಎಂದು ಹೇಳಿದ್ದಾರೆ.
"ಬಸ್ ರಿಪ್ಪನ್ಪೇಟೆ ದಾಟುತ್ತಿದ್ದಾಗ ತಪಾಸಣಾ ತಂಡ ಟಿಕೆಟ್ ಪರಿಶೀಲನೆ ಆರಂಭಿಸಿದ್ದು, ರಿಸರ್ವೇಶನ್ ಟಿಕೆಟ್ ನೀಡಿ ಒಳಗೆ ಬಂದ ನಾಲ್ವರು ಮಹಿಳೆಯರಿಗೆ 'ಶೂನ್ಯ ಟಿಕೆಟ್' ನೀಡದಿರುವುದು ಕಂಡು ಬಂದಿದೆ. ಕಂಡಕ್ಟರ್ಗೆ ಅಪರಾಧದ ಮೆಮೋ ನೀಡಲಾಗಿದೆ," ಎಂದು ತಿಳಿಸಿದರು. ಇಂತಹ ಹಲವಾರು ಪ್ರಕರಣಗಳು ನಡೆದಿದೆ ಎಂದು ಕೂಡಾ ಉಲ್ಲೇಖಿಸಿದ್ದಾರೆ.
"ಕಂಡಕ್ಟರ್ಗಳನ್ನು ಅಮಾನತುಗೊಳಿಸಿ ಬೇರೆ ಬಸ್ ಡಿಪೋಗೆ ವರ್ಗಾಯಿಸಬಹುದು. ಕಂಡಕ್ಟರ್ ತನ್ನ ನಿರಂತರ ಅಭ್ಯಾಸದಿಂದಾಗಿ ಶೂನ್ಯ ಟಿಕೆಟ್ಗಳನ್ನು ನೀಡಲಿಲ್ಲ. ತಮ್ಮ ವೈಯಕ್ತಿಕ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ," ಎಂದು ಹೇಳಿದ ವಿಜಯಭಾಸ್ಕರ್, "ಕಂಡಕ್ಟರ್ಗಳು ಹೊಸ ಯೋಜನೆಗೆ ಒಗ್ಗಿಕೊಳ್ಳುವವರೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬಾರದು. ಅವರಿಗೆ ಎಚ್ಚರಿಕೆ ನೀಡಬೇಕು ಮತ್ತು ಅವರ ಹಳೆಯ ಅಭ್ಯಾಸಗಳು ಬದಲಾಗುವವರೆಗೆ ಬಿಡಬೇಕು," ಎಂದು ಒತ್ತಾಯಿಸಿದರು.


Click it and Unblock the Notifications