ತೀರದ ಸಾಲ..ಸಾಲಕ್ಕೆ ಮುಂದಾದ ಸಿದ್ದರಾಮಯ್ಯ! ಶೇ.15 ರಷ್ಟು ಪ್ರಯಾಣ ದರ ಹೆಚ್ಚಳ ಮಾಡಿದ್ದರೂ ಸಾಲ ತಗೆದುಕೊಳ್ಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮುಂದಾಗಿದೆ ಹೌದು,ಭವಿಷ್ಯ ನಿಧಿ (ಪಿಎಫ್) ಹಾಗೂ ಇಂಧನ ಖರೀದಿ ಮಾಡಿದ ಬಾಕಿ ಹಣವನ್ನು ಪಾವತಿ ಮಾಡಲು 624 ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ತೆಗೆದುಕೊಳ್ಳಲು ಸಿದ್ದವಾಗಿದೆ. ಹಾಗಿದ್ರೆ ಬ್ಯಾಂಕ್ ಸಾಲಕ್ಕೆ ಯಾವ ದಾಖಲೆಗಳನ್ನು ಒತ್ತೆ ಇಡಬೇಕು? ಯಾವ ಬ್ಯಾಂಕ್ನಲ್ಲಿ ಸಾಲ ? ಮರುಪಾವತಿ ಯಾವಾಗ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಸರ್ಕಾರದ ಆದೇಶದಂತೆ ಕೆಎಸ್ಆರ್ಟಿಸಿ ಈ ಸಾಲವನ್ನು ಪಡೆಯುತ್ತಿದೆ. ಭವಿಷ್ಯ ನಿಧಿ ಮತ್ತು ಡೀಸೆಲ್ಗೆ ಸಂಬಂಧಿಸಿದ ಬಾಕಿ ಬಾಕಿಗಳನ್ನು ತೀರಿಸಲು ಎಲ್ಲಾ ಆರ್ಟಿಸಿಗಳು 2,000 ಕೋಟಿ ರೂ. ಸಾಲವನ್ನು ಪಡೆಯುತ್ತವೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಮಾಹಿತಿ ತಿಳಿಸಿದ್ದಾರೆ.

623.8 ಕೋಟಿ ರೂ.ಗಳ ಟರ್ಮ್ ಲೋನ್
ಸಾಲವನ್ನು ಪಡೆಯಲು ಸರ್ಕಾರಿ ಸಾರ್ವಜನಿಕ ಸಾರಿಗೆ ಸಂಸ್ಥೆಯು 623.8 ಕೋಟಿ ರೂ.ಗಳ ಟರ್ಮ್ ಲೋನ್ಗಾಗಿ ಹಣಕಾಸು ಸಂಸ್ಥೆಗಳಿಂದ ಹಾಗೂ ವಾಣಿಜ್ಯ ಬ್ಯಾಂಕುಗಳಿಗೆ ಆಹ್ವಾನವನ್ನು ನೀಡಿದೆ. ಸಾಲವನ್ನು ಒಂದೇ ಕಂತಿನಲ್ಲಿ ಪಡೆಯಲಿದೆ. ಸಾಲದ ಮರುಪಾವತಿಗೆ ಏಳು ವರ್ಷಗಳ ಕಾಲಾವಕಾಶವನ್ನು ನೀಡಲಾಗಿದೆ.
ನಾಲ್ಕು ನಿಗಮಗಳಿಂದ ಇರುವ ಸಾಲದ ಬಾಕಿಯೆಷ್ಟು?
ಸಾರಿಗೆ ಇಲಾಖೆಯಿಂದ ನಾಲ್ಕು ನಿಗಮಗಳಿಮದ ಒಟ್ಟು ಸುಮಾರು 4,800 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದೆ. ಬಾಕಿ ಮೊತ್ತ 3,000 ಕೋಟಿ ಆಗಿದೆ. ಈಗಾಗಲೇ ಸರ್ಕಾರ ಸಾರಿಗೆ ಇಲಾಖೆಗೆ 2,000 ಕೋಟಿ ರೂ.ಗಳ ಸಾಲವನ್ನು ಅನುಮೋದಿಸಿದೆ.ಈ ಸಾಲವನ್ನು ಸರ್ಕಾರ ಖಾತರಿಪಡಿಸುವುದರಿಂದ ನಾವು ಯಾವುದೇ ಸ್ವತ್ತುಗಳನ್ನು ಒತ್ತೆ ಇಡುತ್ತಿಲ್ಲ ಎಂದು ಅವರು ಸಾಲದ ದಾಖಲೆಯ ಬಗ್ಗೆ ಮಾಹಿತಿಯನ್ನು ತಿಳಿಸಿದ್ದರು.
ಶೇ.15 ರಷ್ಟು ಪ್ರಯಾಣ ದರ ಹೆಚ್ಚಳವಾದರೂ ತೀರದ ಸಾಲ
ಜನವರಿ 2 ರಂದು, ಕರ್ನಾಟಕ ಸಚಿವ ಸಂಪುಟವು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕು ರಾಜ್ಯ ಸಾರಿಗೆ ನಿಗಮಗಳಿಗೆ ಶೇ.15 ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಅನುಮೋದನೆ ಸಹ ನೀಡಲಾಗಿತು.
ಇನ್ನೂ ನವೆಂಬರ್ 2024ರ ತಿಂಗಳಲ್ಲಿ ಭವಿಷ್ಯ ನಿಧಿ(ಇಪಿಎಫ್) ಮತ್ತು ಇಂಧನ ಪಾವತಿಗಳಂತಹ ಬಾಕಿ ಇರುವ ಶಾಸನಬದ್ಧ ಬಾಕಿಗಳನ್ನು ತೆರವುಗೊಳಿಸಲು ಹಣಕಾಸು ಸಂಸ್ಥೆಗಳಿಂದ 2,000 ಕೋಟಿ ರೂ.ಗಳ ಸಾಲವನ್ನು ಖಾತರಿಪಡಿಸುವ ಪ್ರಸ್ತಾವನೆಯನ್ನು ಸಹ ಸಂಪುಟವು ಒಪ್ಪಿಗೆಯನ್ನು ಸೂಚಿಸಿತ್ತು. ಆದರೂ ಸಹ ಸಾಲ ಮಾತ್ರ ಹಾಗೇಯೇ ಉಳಿದಿದೆ.
ಜನವರಿ ತಿಂಗಳಲ್ಲಿ ಬಸ್ ಟಿಕೆಟ್ ದರ ಹೆಚ್ಚಳವಾದರೂ ಸಹ ಸಾರಿಗೆ ಇಲಾಖೆ ಸಾಲದಲ್ಲಿ ಮುಳುಗಿ ಹೋಗಿದೆ. ಶಕ್ತಿ ಯೋಜನೆ ಎಫೆಕ್ಟ್ ನಿಂದ ಸಾರಿಗೆ ಇಲಾಖೆ ಸಾಲು ಸಾಲು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ನವೆಂಬರ್ 2024 ರ ವೇಳೆಗೆ ನಾಲ್ಕು ಆರ್ಟಿಸಿಗಳು ಪಿಎಫ್ ನಿಧಿ ಬಾಕಿಗಳು, ಗ್ರಾಚ್ಯುಟಿ, ಇಂಧನ ಪೂರೈಕೆ ಬಾಕಿಗಳು, ಪಿಂಚಣಿ ಹೊಣೆಗಾರಿಕೆಗಳು ಮತ್ತು ಇತರ ಬಾಧ್ಯತೆಗಳು ಸೇರಿದಂತೆ 6,330.25 ಕೋಟಿ ರೂ.ಗಳ ಸಂಯೋಜಿತ ಹೊಣೆಗಾರಿಕೆಗಳನ್ನು ಹೊಂದಿದ್ದಾವೆ ಎಂದರು.
ಭವಿಷ್ಯ ನಿಧಿ ವರ್ಗಾವಣೆ, ಪಿಂಚಣಿ ಮತ್ತು ಇತರ ಬಾಕಿಗಳ ಪಾವತಿಗಳನ್ನು ಮುಂದೂಡಲಾಗಿದೆ. ಭವಿಷ್ಯ ನಿಧಿ ಬಾಕಿಯಲ್ಲಿ 2,901.5 ಕೋಟಿ ರೂ. ಮತ್ತು ಇಂಧನ ಬಾಕಿಯಲ್ಲಿ 827.37 ಕೋಟಿ ರೂ. ಸೇರಿದಂತೆ ಎಲ್ಲಾ ಬಾಕಿಗಳನ್ನು ಸರಿದೂಗಿಸಲು ಒಟ್ಟು 5,527.4 ಕೋಟಿ ರೂ. ಅಗತ್ಯವಿದೆ. ಇದರಲ್ಲಿ ಸರ್ಕಾರದಿಂದ 3,728.9 ಕೋಟಿ ರೂ.ಗಳನ್ನು ಕೋರಲಾಗಿದೆ.
ಖಾಸಗಿ ಬಸ್ಗಿಂತ ಕೆಎಸ್ಆರ್ಟಿಸಿ ಟಿಕೆಟ್ ದರವೇ ದುಬಾರಿಯಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications