ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಶುಕ್ರವಾರ ಬಿಜಿಎಸ್ಟಿ ಮತ್ತು ಸಿಜಿಎಸ್ಟಿ ಕಾಯ್ದೆ 2017 ರ ಅಡಿಯಲ್ಲಿ ಬಿಹಾರದಿಂದ 290 ಕೋಟಿ ರೂಪಾಯಿ ಮೌಲ್ಯದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜೊತೆಗೆ ಬಡ್ಡಿ ಮತ್ತು ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ವಿನಿಮಯ ಫೈಲಿಂಗ್ ಮೂಲಕ ಮಾಹಿತಿ ನೀಡಿದೆ.
ಜಿಎಸ್ಟಿ ಅಪಲೇಟ್ ಟ್ರೈಬ್ಯೂನಲ್ಗೆ ನಿಗದಿತ ಸಮಯದೊಳಗೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ಸರ್ಕಾರಿ ಸ್ವಾಮ್ಯದ ವಿಮಾ ಗುಂಪು ಹೇಳಿದೆ. ಹಲವಾರು ನಿಯಮಗಳನ್ನು ಎಲ್ಐಸಿ ಉಲ್ಲಂಘನೆ ಮಾಡಿದೆ ಎಂದು ಆರೋಪ ಮಾಡಲಾಗಿದೆ.

ಒಟ್ಟು 2,90,49,22,609 ರೂಪಾಯಿಗಳ ಮೊತ್ತದಲ್ಲಿ ಜಿಎಸ್ಟಿ ಅಡಿಯಲ್ಲಿ, 1,66,75,78,995 ರೂಪಾಯಿಗಳನ್ನು, ಬಡ್ಡಿಯಾಗಿ 1,07,05,85,715 ರೂಪಾಯಿಗಳನ್ನು ಮತ್ತು ದಂಡವಾಗಿ 16,67,57,899 ರೂಪಾಯಿಗಳನ್ನು ಬಿಹಾರ ಕೋರಿದೆ.
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರಿನ ಬೆಲೆಯು ಕಳೆದ ಬಾರಿ ಶೇಕಡ 0.51 ರಷ್ಟು ಕಡಿಮೆಯಾಗಿ ಪ್ರತಿ ಷೇರಿಗೆ 651.20 ರೂಪಾಯಿ ಆಗಿದೆ. ಷೇರುಗಳು 52 ವಾರಗಳ ಗರಿಷ್ಠಮಟ್ಟ 754.40 ರೂಪಾಯಿ ಆಗಿದೆ. 52 ವಾರಗಳ ಕನಿಷ್ಠಮಟ್ಟ 530.20 ರೂಪಾಯಿ ಆಗಿದೆ. ಕಂಪನಿಯು ಇತ್ತೀಚೆಗೆ "ಗುಜರಾತ್ ಗ್ಯಾಸ್ ಲಿಮಿಟೆಡ್" ನಲ್ಲಿ ಕಾರ್ಪೊರೇಷನ್ ಷೇರುಗಳನ್ನು ಹೊಂದಿದೆ ಎಂದು ತಿಳಿಸಿತು.
ಜೂನ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಎಲ್ಐಸಿಯ ನಿವ್ವಳ ಲಾಭವು ಕಳೆದ ವರ್ಷದ ಅದೇ ತ್ರೈಮಾಸಿಕದಲ್ಲಿ 683 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ 9,544 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ, ಕಂಪನಿಯ ನಿವ್ವಳ ಪ್ರೀಮಿಯಂ ಆದಾಯವು 98,351 ಕೋಟಿ ರೂಪಾಯಿ ಆಗಿದೆ. ಇದಕ್ಕೂ ಒಂದು ವರ್ಷದ ಹಿಂದೆ ನಿವ್ವಳ ಆದಾಯವು ಸುಮಾರು 98,363 ಕೋಟಿ ರೂಪಾಯಿ ಆಗಿದೆ. ನಿವ್ವಳ ಲಾಭವು ಹಿಂದಿನ ತ್ರೈಮಾಸಿಕದಲ್ಲಿ ವರದಿಯಾದ 13,428 ಕೋಟಿ ರೂಪಾಯಿಯಿಂದ ಶೇಕಡ 29 ರಷ್ಟು ಇಳಿಕೆಯಾಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications