ದೀಪಾವಳಿ ಹಬ್ಬದ ಸಮಯದಲ್ಲೇ ಒಂದು ಶಾಕಿಂಗ್ ಏದುರಾಗಿದೆ. ಅದೇನೆಂದರೆ ಕೇರಳದ ಕೊಚ್ಚಿ ಹಾಗೂ ತಮಿಳುನಾಡಿನ ಮದ್ರಾಸ್ನಲ್ಲಿ ಈಗ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕಾರಣ ಏನೆಂದರೆ ದಕ್ಷಿಣ ಪ್ರದೇಶದ ಬೃಹತ್ ಎಲ್ಪಿಜಿ ಸಾಗಣೆದಾರರ ಸಂಘದ ಕೆಲ ಸದಸ್ಯರು ತಮ್ಮ ಒಪ್ಪಂದದ ಅವಧಿ ಮುಗಿದ ಕಾರಣ ಕೆಲಸ ನಿಲ್ಲಿಸಿದ್ದಾರೆ. ಸಣ್ಣ ಟ್ರಕ್ ಮಾಲೀಕರು ನಿರ್ದಿಷ್ಟ ಟೆಂಡರ್ ಸಮಸ್ಯೆಯಿಂದ ಪ್ರಭಾವಿತರಾಗಿದ್ದು, ಹಳೆಯ ಟೆಂಡರ್ ಮುಂದುವರಿಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆ ಸಿಲಿಂಡರ್ ವಿತರಣೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲು ಕಾರಣವಾಗಿದೆ.

ಹಬ್ಬದ ದಿನಗಳಲ್ಲಿ ಸರಬರಾಜು ವ್ಯತ್ಯಯದ ಸಾಧ್ಯತೆ:
ಇಡೀ ದೇಶ ದೀಪಾವಳಿ ಹಬ್ಬವನ್ನ ಆಚರಿಸಲು ಕಾತುರದಿಂದ ಕಾಯುತ್ತಿದೆ. ಐದಾರು ದಿನಗಳಲ್ಲಿ ಎಲ್ಲೆಡೆ ದೀಪಾವಳಿ ಸಂಭ್ರಮಕ್ಕೆ ತಯಾರಿ ನಡೆಯುತ್ತಿದೆ. ಆದರೆ ಹಬ್ಬದ ಮುನ್ನವೇ ಲಭ್ಯವಿರುವ ಎಲ್ಪಿಜಿ ಸಿಲಿಂಡರ್ ಸ್ಟಾಕ್ ಸುಮಾರು ಮೂರು-ನಾಲ್ಕು ದಿನಗಳಷ್ಟೇ ಸಾಕಾಗಬಹುದು ಎಂಬ ಶಾಕಿಂಗ್ ಸಂಗತಿ ವರದಿಯಾಗಿದೆ. ಅಂದರೆ ಲೋಡ್ಗಳ ಅರ್ಧ ಭಾಗ ಮಾತ್ರ ಲಭ್ಯವಿದೆ ಎಂದು ಸಾಗಣೆದಾರರು ತಿಳಿಸಿದ್ದಾರೆ. ತಾತ್ಕಾಲಿಕವಾಗಿ ಕೆಲ ಗ್ರಾಹಕರು ತಮ್ಮ ಅಗತ್ಯವನ್ನು ತಲುಪಿಸಲು ತೊಂದರೆ ಅನುಭವಿಸಬಹುದು. ಹೀಗಾಗಿ, ಅಡುಗೆ ಅನಿಲದ ಕೊರತೆ ಅಥವಾ ವಿತರಣೆಯ ತಡ ಸಂಭವಿಸಬಹುದಾಗಿದೆ.
ಸರ್ಕಾರ ಮತ್ತು ತೈಲ ಕಂಪನಿಗಳ ನಿರ್ಧಾರಗಳು:
- ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು (ಒಎಂಸಿಗಳು) ಈ ವ್ಯತ್ಯಯದ ಕುರಿತು ಸ್ಪಷ್ಟಪಡಿಸುತ್ತವೆ:
- ಗ್ರಾಹಕರಿಗೆ ತಾತ್ಕಾಲಿಕ ಕೊರತೆ ಅಥವಾ ಅಡೆತಡೆ ಇಲ್ಲ.
- ಶೇಕಡಾ 25 ರಷ್ಟು ಭಾರೀ ಟ್ರಕ್ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ.
- ಹಬ್ಬದ ದಿನಗಳಲ್ಲಿ ಅಡುಗೆ ಅನಿಲದ ಲಭ್ಯತೆಯನ್ನು ನಿರಂತರವಾಗಿ ನೋಡಿಕೊಳ್ಳಲಾಗುತ್ತಿದೆ.
- ರಾಜ್ಯ ಸರ್ಕಾರ ಕೂಡ ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ತಕ್ಷಣ ಕ್ರಮಗಳನ್ನು ಕೈಗೊಂಡಿದೆ.
ಕರ್ನಾಟಕದಲ್ಲಿ ಸಂಭವನೀಯ ಪರಿಣಾಮಗಳು:
ಕೇರಳ ಹಾಗೂ ತಮಿಳುನಾಡಿದ ಅತೀ ಹತ್ತಿರದ ರಾಜ್ಯವಾದ ಕರ್ನಾಟಕಕ್ಕೂ ಈ ಸಿಲಿಂಡರ್ ಕೊರತೆಯ ಬಿಸಿ ತಟ್ಟಬಹುದು ಎನ್ನಲಾಗಿದೆ. ನಗರ ಪ್ರದೇಶವಾದ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮುಂತಾದ ನಗರಗಳಲ್ಲಿ ಜನರು ಹೆಚ್ಚು ಎಲ್ಪಿಜಿ ಸಿಲಿಂಡರ್ ಅವಲಂಬಿತರಾಗಿರುವುದರಿಂದ, ತಾತ್ಕಾಲಿಕವಾಗಿ ಸರಬರಾಜು ತಡವಾಗುವ ಸಾಧ್ಯತೆ ಇದೆ. ಅಲ್ಲದೇ ದಕ್ಷಿಣ ಕರ್ನಾಟಕ ಮತ್ತು ಹಳ್ಳಿಗಳಲ್ಲಿ, ಟ್ರಕ್ಗಳ ಲಭ್ಯತೆ ಕಡಿಮೆ ಇರುವ ಕಾರಣ ಸಿಲಿಂಡರ್ ತಡವಾಗಿ ತಲುಪಬಹುದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಡುಗೆ ಅನಿಲದ ಕೊರತೆ ಹಬ್ಬದ ಆಚರಣೆಗೆ ತಾತ್ಕಾಲಿಕ ಅಡೆತಡೆ ಉಂಟುಮಾಡಬಹುದು. ಅಡುಗೆ ಅನಿಲದ ತಾತ್ಕಾಲಿಕ ಲಭ್ಯತೆಯ ಕಡಿತವು ಮನೆಯ ಒಳಗಿನ ರೋಟಿ, ತಿಂಡಿ ಹಾಗೂ ಇತರೆ ದಿನನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.
ಗ್ರಾಹಕರು ಏನು ಮಾಡಬೇಕು?
ಸದ್ಯಕ್ಕೆ ಎಲ್ಪಿಜಿ ಸಿಲಿಂಡರ್ ಬುಕಿಂಗ್ ಮಾಡುವ ಅಗತ್ಯವಿಲ್ಲ.
ಲಭ್ಯವಿರುವ ಸ್ಟಾಕ್ಗಳೊಂದಿಗೆ ಸರಬರಾಜು ನಿರ್ವಹಣೆ ಆಗುತ್ತಿದೆ, ಆದ್ದರಿಂದ ತಕ್ಷಣದ ಅಗತ್ಯವಿದ್ದವರಿಗೆ ಮಾತ್ರ ಮಾರಾಟ.
ಹಬ್ಬದ ದಿನಗಳಲ್ಲಿ ತೈಲ ಕಂಪನಿಗಳು ಮತ್ತು ಸಾಗಣೆದಾರರು ಸರಬರಾಜಿನಲ್ಲಿ ತಡ ತಪ್ಪಿಸಲು ಕ್ರಮ ಕೈಗೊಂಡಿದ್ದಾರೆ.
ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಅಡುಗೆ ಅನಿಲದ ಕೊರತೆ ಇಲ್ಲದೆ ಜನರ ಹಬ್ಬವನ್ನು ಖುಷಿಯಿಂದ ಆಚರಿಸಲು ಸರ್ಕಾರ ಮತ್ತು ತೈಲ ಕಂಪನಿಗಳು ತಕ್ಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಗ್ರಾಹಕರು ಆತಂಕಪಡದೆ, ಲಭ್ಯವಿರುವ ಸ್ಟಾಕ್ ಮತ್ತು ಸರಬರಾಜಿನ ಮಾಹಿತಿಯನ್ನು ಗಮನಿಸಬೇಕು.
More From GoodReturns

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

LPG Gas Cylinder: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ, ಹೋಟೆಲ್ ಉದ್ಯಮಕ್ಕೆ ಅಡ್ಡಿ; ಪ್ರಧಾನಿಗೆ ಪತ್ರ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

LPG cylinder Price: ದೇಶದ ಜನರಿಗೆ ಅಡುಗೆ ಅನಿಲ ದರ ಶಾಕ್… LPG ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications