ಸರ್ಕಾರಿ ಸ್ವಾಮ್ಯದ ಒಎನ್ ಜಿಸಿ ಕಂಪೆನಿಯ ಷೇರುಗಳು ಸೋಮವಾರ ದಿನಾಂತ್ಯಕ್ಕೆ 100 ರುಪಾಯಿಯೊಳಗೆ ಬಂದಿದೆ. ದಿನದ ಕೊನೆಗೆ ರು. 99.95ಕ್ಕೆ ವಹಿವಾಟು ಮುಗಿಸಿದೆ. ಇದರ ಜತೆಗೆ ವಾರ್ಷಿಕ ಕನಿಷ್ಠ ಮಟ್ಟವಾದ ರು. 98.85 ಅನ್ನು ಮುಟ್ಟಿತು. ಆ ಮೂಲಕ 11 ವರ್ಷದಲ್ಲೇ ಕನಿಷ್ಠ ಮಟ್ಟವನ್ನು ತಲುಪಿತು.
ಡಿಸೆಂಬರ್ ಗೆ ಕೊನೆಯಾದ ತ್ರೈ ಮಾಸಿಕಕ್ಕೆ ದಾಖಲಿಸಿದ ಫಲಿತಾಂಶ ದುರ್ಬಲವಾಗಿದೆ. ಅಂದಹಾಗೆ ಒಎನ್ ಜಿಸಿ ಈ ಹಿಂದೆ 2008ರ ಅಕ್ಟೋಬರ್ ನಲ್ಲಿ ರು. 89.68 ತಲುಪಿತ್ತು. ಅದು ಈ ಹಿಂದಿನ ಕನಿಷ್ಠ ಮಟ್ಟವಾಗಿತ್ತು. ಕಳೆದ ಶುಕ್ರವಾರದಂದು ಷೇರು ಮಾರುಕಟ್ಟೆ ವ್ಯವಹಾರದ ಅವಧಿ ಮುಗಿದ ನಂತರ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ನ (ಒಎನ್ ಜಿಸಿ) ತ್ರೈ ಮಾಸಿಕ ಫಲಿತಾಂಶ ಬಂದಿತ್ತು.
ಆ ಫಲಿತಾಂಶದಲ್ಲಿ 49.75 ಪರ್ಸೆಂಟ್ ನಷ್ಟು ನಿವ್ವಳ ಲಾಭ ಕಡಿಮೆಯಾಗಿ, 4,151.63 ಕೋಟಿ ಲಾಭ ಗಳಿಸಿರುವುದಾಗಿ ಘೋಷಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಎನ್ ಜಿಸಿ 8,262.70 ಕೋಟಿ ರುಪಾಯಿ ಲಾಭವನ್ನು ದಾಖಲಿಸಿತ್ತು.

ಇನ್ನು ಈ ತ್ರೈಮಾಸಿಕದಲ್ಲಿ ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಕಂಪೆನಿಯ ಒಟ್ಟು ಆದಾಯ 16 ಪರ್ಸೆಂಟ್ ಕುಸಿತ ಕಂಡಿದೆ. ನಿರೀಕ್ಷೆ ಮಾಡಿದ್ದಕ್ಕಿಂತ ಮೂರನೇ ತ್ರೈಮಾಸಿಕದ ಫಲಿತಾಂಶವು ಬಹಳ ಕಡಿಮೆ ಇದೆ. ಅಂದ ಹಾಗೆ ಮಹಾರತ್ನ ಕಂಪೆನಿಗಳಲ್ಲಿ ಒಎನ್ ಜಿಸಿ ಕೂಡ ಒಂದು.
ಒಎನ್ ಜಿಸಿ ಷೇರು ಖರೀದಿಸಬಹುದಾ?
ಈಗ ಷೇರು ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ ಷೇರುಗಳು ಸತತವಾಗಿ ಇಳಿಕೆ ಕಾಣುತ್ತಿವೆ. ಆದ್ದರಿಂದ ವಾರ್ಷಿಕ ಕನಿಷ್ಠ ಮಟ್ಟಕ್ಕೆ ಬಂದಿದೆ ಅನ್ನೋ ಕಾರಣದಿಂದ ಮಾತ್ರ ಖರೀದಿಗೆ ಮುಗಿಬೀಳುವುದು ಸರಿಯಲ್ಲ ಎಂದು ಮಾರುಕಟ್ಟೆ ತಜ್ಞರು ಮತ್ತು ಅಂಕಣಕಾರರಾದ ಕೆ.ಜಿ. ಕೃಪಾಲ್ ಅವರು ಕನ್ನಡ ಗುಡ್ ರಿಟರ್ನ್ಸ್ ಗೆ ತಿಳಿಸಿದರು.
ಹಾಗೆ ನೋಡಿದರೆ ಒಎನ್ ಜಿಸಿಗಿಂತ ಆಯಿಲ್ ಇಂಡಿಯಾ ಷೇರುಗಳು ಆಕರ್ಷಕವಾಗಿ ಕಾಣುತ್ತಿವೆ. ಫೆಬ್ರವರಿ ಇಪ್ಪತ್ತನೇ ತಾರೀಕಿನ ತನಕ ಆ ಷೇರುಗಳನ್ನು ಇಟ್ಟುಕೊಂಡರೆ ತಲಾ 9 ರುಪಾಯಿಯಂತೆ ಡಿವಿಡೆಂಡ್ ಕೂಡ ದೊರೆಯುತ್ತದೆ ಎಂದು ಅವರು ಹೇಳಿದರು.
ಆದರೆ, ಈಗಿನ ಮಾರುಕಟ್ಟೆ ಸನ್ನಿವೇಶದಲ್ಲಿ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು. ಏಕೆಂದರೆ ಸರ್ಕಾರಿ ಸ್ವಾಮ್ಯದ ಷೇರುಗಳು ದಿನ ದಿನಕ್ಕೂ ವಾರ್ಷಿಕ ಕನಿಷ್ಠ ಮಟ್ಟದತ್ತ ಇಳಿಯುತ್ತಿದೆ. ಹಾಗಂತ ಈ ಕಂಪೆನಿಗಳು ಚೆನ್ನಾಗಿಲ್ಲ ಅಂತಲ್ಲ. ಮೂಲಭೂತವಾಗಿ ಬಲಿಷ್ಠವಾಗಿವೆ. ಆದರೆ ಇತರ ಅಂಶಗಳು ಪೂರಕವಾಗಿಲ್ಲ ಎಂದು ಕೆ.ಜಿ. ಕೃಪಾಲ್ ಅವರು ವಿವರಿಸಿದರು.
More From GoodReturns

Stock Market Crash: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕುಸಿತ..ಸೆನ್ಸೆಕ್ಸ್ 1000 ಪಾಯಿಂಟ್, ನಿಫ್ಟಿಯಲ್ಲಿ 300 ಅಂಕ ಪತನ!

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?



Click it and Unblock the Notifications