ನವದೆಹಲಿ, ಏಪ್ರಿಲ್ 28: ಭಾರತದ ಆಟೋಮೊಬೈಲ್ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿದ್ದು, ಅಮೆರಿಕ & ಯುರೋಪ್ ಕಂಪನಿಗಳಿಗೆ ಕೂಡ ನಮ್ಮ ದೇಶದ ಆಟೋಮೊಬೈಲ್ ಕಂಪನಿಗಳು ಪೈಪೋಟಿ ಕೊಡುವಷ್ಟು ಬಲಾಢ್ಯವಾಗಿ ಬೆಳೆದು ನಿಂತಿವೆ. ಈ ಪೈಕಿ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇದೀಗ, ತನ್ನ ಹೂಡಿಕೆದಾರರಿಗೆ ಸಿಹಿಸುದ್ದಿ ಹೊತ್ತು ತಂದಿದೆ.
ಕೊರೊನಾ ನಂತರ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಹೊಸ ಕ್ರಾಂತಿಕಾರಕ ಹೆಜ್ಜೆಯನ್ನು ಇಡುತ್ತಿದೆ. ಅದರಲ್ಲೂ ಮಾರುತಿ ಸುಜುಕಿ ಸಂಸ್ಥೆ ಎಲ್ಲಾ ಹಂತದಲ್ಲೂ ಬೆಳೆದು ನಿಂತಿದ್ದು, ತನ್ನ ಲಾಭದಲ್ಲಿಯೂ ಹೊಸ ಮೈಲಿಗಲ್ಲು ಸ್ಥಾಪನೆ ಮಾಡುತ್ತಿದೆ. ಈಗ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ 2023 & 24ನೇ ಹಣಕಾಸು ವರ್ಷದಲ್ಲಿ, ಮಾರ್ಚ್ ತ್ರೈಮಾಸಿಕದಲ್ಲಿ 3,877 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಲಾಭ ಕೂಡ ಭರ್ಜರಿಯಾಗಿ ಹೆಚ್ಚಾಗಿದ್ದು, ಈ ಸಿಹಿಸುದ್ದಿ ಹೂಡಿಕೆದಾರರಿಗೆ ಖುಷಿ ನೀಡಿದೆ.

ಮಾರಟದಲ್ಲೂ ಹೊಸ ಸಾಧನೆ
ಕಳೆದ ಬಾರಿ ಮಾರುತಿ ಸುಜುಕಿ ಸಂಸ್ಥೆ 2,623 ಕೋಟಿ ಲಾಭವನ್ನು ಗಳಿಸಿತ್ತು. ಈಗ ಎಂದರೆ 2023 & 24ನೇ ಸಾಲಿನಲ್ಲಿ 3,877 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. 2022 ಮತ್ತು 2023ರ ಇದೇ ಅವಧಿಯಲ್ಲಿ ಹೆಚ್ಚಿನ ಲಾಭ ಸಿಕ್ಕಿರಲಿಲ್ಲ. ಆದರೆ ಈ ಬಾರಿ, ಭರ್ಜರಿ ಲಾಭದ ಜೊತೆಗೆ ಮಾರಟದಲ್ಲಿಯೂ ಕ್ರಾಂತಿಕಾರಿ ಸುಧಾರಣೆ ಕಂಡುಬರುತ್ತಿದೆ. ಕಳೆದ ವರ್ಷಕ್ಕಿಂತಲು ಈ ಬಾರಿಯ ಲಾಭ ಶೇಕಡಾ 47.8ರಷ್ಟು ಏರಿಕೆ ಆಗಿದೆ. ಇದಕ್ಕೆಲ್ಲಾ ಕಾರಣ ಮಾರುತಿ ಸುಜುಕಿ ಸಂಸ್ಥೆಯ ಉತ್ಪನ್ನಗಳ ಮಾರಾಟ ಹೆಚ್ಚಳ.
ಪ್ರತಿ ಷೇರಿನ ಬೆಲೆ ₹12,687
ಕಳೆದ ಕೆಲ ತಿಂಗಳಿಂದ, ಷೇರು ಮಾರುಕಟ್ಟೆಯಲ್ಲಿ ಕೂಡ ಮಾರುತಿ ಸುಜುಕಿ ದೊಡ್ಡ ಸದ್ದು ಮಾಡುತ್ತಿದೆ. ಇದೀಗ ಹೆಚ್ಚಿದ ವಾಹನಗಳ ಮಾರಾಟದಿಂದ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪನಿ ಷೇರು ಪೇಟೆಗೆ ಮಾಹಿತಿ ನೀಡಿದೆ. ಮತ್ತೊಂದು ಕಡೆ ಇದೇ ಮೊದಲ ಬಾರಿ 2023 & 24ರ ಆರ್ಥಿಕ ವರ್ಷದಲ್ಲಿ ಕಂಪನಿ ವಾಹನಗಳ ಒಟ್ಟು ಮಾರಾಟ 20 ಲಕ್ಷ ದಾಟಿದೆ. ಸತತ ಮೂರನೇ ವರ್ಷ ಕೂಡ, ಈ ಮೂಲಕ ಮಾರುತಿ ಸುಜುಕಿ ಸಂಸ್ಥೆ ದೇಶದ ಅತಿದೊಡ್ಡ ರಫ್ತುದಾರನಾಗಿ ಹೆಸರು ಪಡೆದಿದೆ. ದೇಶದ ಒಟ್ಟು ಪ್ರಯಾಣಿಕ ವಾಹನದ ರಫ್ತಿನಲ್ಲಿ, ಈ ಕಂಪನಿ ಶೇ. 41 ರಷ್ಟು ಪಾಲು ಹೊಂದಿದ್ದು, ಇದೀಗ ಬಿಎಸ್ಇಯಲ್ಲಿ ಮಾರುತಿ ಸುಜುಕಿ ಕಂಪನಿಯ ಪ್ರತಿ ಷೇರಿನ ಬೆಲೆ ₹12,687ಕ್ಕೆ ತಲುಪಿ ಇತಿಹಾಸ ನಿರ್ಮಿಸುತ್ತಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications