ಈ ಹಿಂದೆ ಕಾಲುವೆಯಲ್ಲಿ ಸಿಲುಕುವ ಮೂಲಕ ಭಾರೀ ಸುದ್ದಿಯಾಗಿದ್ದ ತೈವಾನ್ ಮೂಲದ ಹಡಗು ಸಂಸ್ಥೆ ಎವರ್ಗ್ರೀನ್ ಈಗ ತನ್ನ ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್ ನೀಡುವ ಮೂಲಕ ಸುದ್ದಿಯಾಗಿದೆ. ಹೌದು ಎವರ್ಗ್ರೀನ್ ತಮ್ಮ ಉದ್ಯೋಗಿಗಳಿಗೆ ಬರೋಬ್ಬರಿ 4 ವರ್ಷದ ಅಂದರೆ 52 ವಾರಗಳ ವೇತನವನ್ನು ಬೋನಸ್ ಆಗಿ ನೀಡುತ್ತಿದೆ. ಕೆಲವು ಉದ್ಯೋಗಿಗಳಿಗೆ ಮಾತ್ರ ಸಂಸ್ಥೆಯು ಈ ವರ್ಷಾಂತ್ಯದ ಬೋನಸ್ ಅನ್ನು ನೀಡುತ್ತಿದೆ.
ಉದ್ಯೋಗಿಗಳ ಕಾರ್ಯವೈಖರಿಯನ್ನು ನೋಡಿಕೊಂಡು ಉತ್ತಮ ಕಾರ್ಯ ನಿರ್ವಹಣೆ ಮಾಡಿದ ಉದ್ಯೋಗಿಗಳನ್ನು ಗುರುತಿಸಿ ಸಂಸ್ಥೆಯು ಈ ಬೋನಸ್ ಅನ್ನು ನೀಡಿದೆ. ಹಾಗೆಯೇ ಇದು ತೈವಾನ್ ಆಧಾರಿತ ಉದ್ಯೋಗ ಒಪ್ಪಂದವನ್ನು ಹೊಂದಿರುವವರಿಗೆ ಮಾತ್ರ ಈ ಬೋನಸ್ ಅನ್ನು ನೀಡಲಾಗಿದೆ. ಆದರೆ ಕಾರ್ಯವೈಖರಿಯನ್ನು ನೋಡಿಕೊಂಡು ಬೋನಸ್ ಅನ್ನು ನಮ್ಮ ಸಂಸ್ಥೆಯಲ್ಲಿ ನೀಡಲಾಗುತ್ತದೆ ಎಂದು ಎವರ್ಗ್ರೀನ್ ಮರೈನ್ ಹೇಳಿದೆ.
ಇನ್ನು ಶಾಂಘೈ ಮೂಲದ ಉದ್ಯೋಗಿಗಳಿಗೆ ಸಂಸ್ಥೆಯು ಮಾಸಿಕ ವೇತನದ ಸುಮಾರು 5ರಿಂದ 8 ಪಟ್ಟನ್ನು ಬೋನಸ್ ಅನ್ನು ನೀಡಿದೆ. ಈ ತಾರತಮ್ಯವನ್ನು ಗಮನಿಸಿ ಈ ಸಿಬ್ಬಂದಿಗಳು ದೂರು ನೀಡಿದ್ದಾರೆ ಎಂದು ಸ್ಥಳೀಯ ಸಂಸ್ಥೆ ಕೈಕ್ಸಿನ್ ವರದಿ ಮಾಡಿದೆ. ಆದರೆ ಸಂಸ್ಥೆ ಮಾತ್ರ ನಾವು ಕಾರ್ಯಕ್ಷಮತೆ ಆಧಾರದಲ್ಲಿ ಬೋನಸ್ ನೀಡಿದ್ದೇವೆ ಎಂದು ತಿಳಿಸಿದೆ.

ಕಾಲುವೆಯಲ್ಲಿ ಸಿಲುಕಿದ್ದ ಎವರ್ಗ್ರೀನ್ ಸಂಸ್ಥೆಯ ಹಡಗು
2021ರ ಆರಂಭದಲ್ಲಿ ಎವರ್ಗ್ರೀನ್ ಸಂಸ್ಥೆಯ ಮಾಲೀಕತ್ವದಲ್ಲಿರುವ ಹಡಗೊಂದು ಕಾಲುವೆಯಲ್ಲಿ ಸಿಲುಕಿತ್ತು. ಇದು ಜಾಗತಿಕವಾಗಿ ಭಾರೀ ದೊಡ್ಡ ಸುದ್ದಿಯಾಗಿತ್ತು. ಸೂಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಹಡಗು ಹಲವಾರು ದಿನಗಳ ಕಾಲ ಅಲ್ಲೇ ಬಾಕಿಯಾಗಿತ್ತು. ಇದರಿಂದಾಗಿ ಜಾಗತಿಕವಾಗಿ ಸರಬರಾಜು ವ್ಯವಸ್ಥೆಗೆ ಪೆಟ್ಟು ಬಿದ್ದಿತ್ತು.
ಇದಕ್ಕಾಗಿ ಸುಮಾರು 91.6 ಕೋಟಿ ಡಾಲರ್ ಅಥವಾ 6,813.07 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಸೂಯೆಜ್ ಕಾಲುವೆ ಪ್ರಾಧಿಕಾರ ಆಗ್ರಹಿಸಿತ್ತು. ಬಳಿಕ ಮಾತುಕತೆ ನಡೆಸಿ ಈ ಮೊತ್ತವನ್ನು 55.5 ಕೋಟಿ ಡಾಲರ್ 4,127.89 ಕೋಟಿ ರೂಪಾಯಿಗೆ ಇಳಿಸಲಾಗಿತ್ತು.
ಸಂಸ್ಥೆಯ ಆದಾಯ ಹೇಗಿದೆ ನೋಡಿ
ಎವರ್ಗ್ರೀನ್ ಸಂಸ್ಥೆಯು 2021ರಲ್ಲಿ ಸುಮಾರು ಶೇಕಡ 250ರಷ್ಟು ಲಾಭವನ್ನು ಗಳಿಸಿದೆ. ಷೇರು ಮಾರುಕಟ್ಟೆಯಲ್ಲಿಯೂ ಸಂಸ್ಥೆ ಎವರ್ಗ್ರೀನ್ ಆಗಿ ಉಳಿದಿದ್ದು, ಷೇರು ಮೌಲ್ಯ ಸುಮಾರು ಶೇಕಡ 54ರಷ್ಟು ಹೆಚ್ಚಾಗಿದೆ. ಈ ನಡುವೆ 2022ರಲ್ಲಿ ಎವರ್ಗ್ರೀನ್ ಸಂಸ್ಥೆಯ ಆದಾಯ 20.7 ಶತಕೋಟಿಗೆ ಹೆಚ್ಚಾಗುವ ಸಾಧ್ಯತೆಯಿದೆ.
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications