ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಒದಗಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ, ಡಿಸೆಂಬರ್ 9 ರಂದು ಎಲ್ಐಸಿ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಹಾಗಿದ್ರೆ ಏನಿದು ಹೊಸ ಯೋಜನೆ? ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ? ಅರ್ಹತೆಗಳೇನು? ಎಂಬುವುದನ್ನು ತಿಳಿಯೋಣ ಬನ್ನಿ..
ಹೌದು, ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಯೋಜನೆಯ ಮೂಲಕ ಗ್ರಾಮೀಣ ಮಹಿಳೆಯರಿಗೆ ವಿಮೆಯಾಗಿ ಕೆಲಸ ಮಾಡುವಂತಹ ಅವಕಾಶವನ್ನು ಮಾಡಿಕೊಂಡುವಂತಹ ಗುರಿಯನ್ನು ಹೊಂದಿದೆ.ಇದರ ಗ್ರಾಮೀಣ ಮಹಿಳೆಯರಿಗಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಈ ಯೋಜನೆ ಹೋದಿದೆ. ಈ ಬಿಮಾ ಸಖಿ ಯೋಜನೆಯಲ್ಲಿ ಕೆಲಸ ಮಾಡುವವರನ್ನು ಏಜೆಂಟ್ಗಳು, ಬಿಮಾ ಸಖೀಸ್ ಎಂದು ಕರೆಯಲಾಗುತ್ತದೆ.

ಬಿಮಾ ಸಖಿ ಯೋಜನೆ ಬಿಡುಗಡೆ ಕಾರ್ಯಕ್ರಮವು ಇಂದು ಹರಿಯಾಣದ ಪಾಣಿಪತ್ನಲ್ಲಿ ನಡೆಯಲಿದ್ದು, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಹಣಕಾಸು ಸಚಿವೆ. ನಿರ್ಮಲಾ ಸೀತಾರಾಮನ್ ಮತ್ತು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
ಈ ಯೋಜನೆಯ ಮೂಲಕ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನದೊಂದಿಗೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಈ ಯೋಜನೆಯಿಂದ ಗ್ರಾಮೀಣ ಮಹಿಳೆಯರಿಗೆ ಆಗುವಂತಹ ಪ್ರಯೋಜನಗಳು ಈ ಕೆಳಗಿನಂತಿವೆ.
ಮಹಿಳೆಯರಿಗೆ ಉದ್ಯೋಗಾವಕಾಶಗಳು
ಬಿಮಾ ಸಖಿ ಯೋಜನೆಯು ಗ್ರಾಮೀಣ ಮಹಿಳೆಯರು ವಿಮಾ ಏಜೆಂಟ್ಗಳಾಗಿ ಕೆಲಸ ಮಾಡುವಾಗ ಅವರಿಗೆ ಆರ್ಥಿಕ ಬೆಂಬಲವನ್ನು ಒದಗಿಸಲು ಈ ಯೋಜನೆಯನ್ನು ಅಭಿವೃದ್ದಿಪಡಿಸಾಗಿದೆ.ಈ ಯೋಜನೆಯು ಸ್ಥಿರವಾದ ಆದಾಯದ ಮೂಲವನ್ನು ಖಾತ್ರಿ ಪಡಿಸುವ, ಕಮಿಷನ್ ಆಧಾರಿತ ಪ್ರೋತ್ಸಾಹದ ಜೊತೆಗೆ ಸ್ಥಿರ ಮಾಸಿಕ ಆದಾಯವನ್ನು ಭರವಸೆ ನೀಡುತ್ತದೆ.
ಈ ಯೋಜನೆಯಿಂದ ಸಿಗುವ ಆದಾಯವೆಷ್ಟು..?
ಈ ಯೋಜನೆಯಲ್ಲಿ ಮೊದಲ ವರ್ಷದಲ್ಲಿ ಭಾಗವಹಿಸುವವರಿಗೆ ತಿಂಗಳಿಗೆ 7,000ರೂಪಾಯಿಗಳು,ಎರಡನೇ ವರ್ಷದಲ್ಲಿ ಮೊತ್ತವು ತಿಂಗಳಿಗೆ 6,000 ರೂಪಾಯಿ ಕಡಿಮೆಯಾಗುತ್ತದೆ. ಮೂರನೇ ವರ್ಷದ ವೇಳೆಗೆ,ಮಹಿಳೆಯರು ಮಾಸಿಕ 5,000 ರೂಪಾಯಿಗಳನ್ನುಗಳಿಸುತ್ತಾರೆ. ಇದರ ಜೊತೆಗೆ 2,100 ರೂಪಾಯಿಗಳ ಮೊತ್ತವನ್ನು ತಮ್ಮ ವಿಮಾ ಮಾರಾಟ ಗುರಿಗಳನ್ನು ಸಾಧಿಸುವ ಮಹಿಳೆಯರು ಕಮಿಷನ್ ಆಧಾರಿತ ಪ್ರತಿಫಲಗಳನ್ನು ಸಹ ಗಳಿಸುತ್ತಾರೆ.
ನೇಮಕಾತಿ
ಬಿಮಾ ಸಖಿ ಯೋಜನೆಯು ಆರಂಭಿಕ ಹಂತದಲ್ಲಿ ಪ್ರೋಗ್ರಾಂ 35,000 ಮಹಿಳೆಯರನ್ನು ವಿಮಾ ಏಜೆಂಟ್ಗಳಾಗಿ ನೇಮಿಸಿಕೊಳ್ಳುತ್ತದೆ. ನಂತರದ ಹಂತಗಳಲ್ಲಿ ಹೆಚ್ಚುವರಿ 50,000 ಮಹಿಳೆಯರಿಗೆ ಅವಕಾಶವನ್ನು ವಿಸ್ತರಿಸಲು ಯೋಜಿಸಲಾಗಿದೆ. ಆರಂಭದಲ್ಲಿ ಹರಿಯಾಣದಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ತದನಂತರ ದೇಶಾದ್ಯಂತ ವಿಸ್ತರಿಸಲಿದೆ.
ಈ ಯೋಜನೆಗೆ ಏನೆಲ್ಲಾ ಅರ್ಹತೆಗಳು ಇರಬೇಕು
ಈ ಯೋಜನೆಗೆ ವಯಸ್ಸಿನ ಮಿತಿ 18 ಮತ್ತು 50 ವರ್ಷಗಳು ಇರಬೇಕು.ಕನಿಷ್ಠ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಈ ಯೋಜನೆಯು ಗ್ರಾಮೀಣ ಮಹಿಳೆಯರಿಗೆ ವಿಮಾ ಏಜೆಂಟ್ಗಳಾಗಿ ವೃತ್ತಿಪರ ಪಾತ್ರಗಳನ್ನು ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications