Namma Metro: 2 ಗಂಟೆಗಳ ರಸ್ತೆ ಪ್ರಯಾಣದ ಕಿರಿಕಿರಿ ಇರಲ್ಲ.. ಬೆಂಗಳೂರು ಗ್ರೀನ್ ಲೈನ್ ವಿಸ್ತರಣೆ.. ಮೆಟ್ರೋ ತುಮಕೂರಿಗೆ ಬರುತ್ತಾ?

ತುಮಕೂರಿನ ಜನರ ದೊಡ್ಡ ಕನಸು ನಮ್ಮ ಮೆಟ್ರೋ. ಇದು ನನಸಾದರೆ 2 ಗಂಟೆಗಳ ರಸ್ತೆ ಪ್ರಯಾಣದ ಕಿರಿಕಿರಿ ಇರಲ್ಲ! ಆದರೆ, ನಮ್ಮ ಮೆಟ್ರೋ ತುಮಕೂರಿಗೆ ಬರುತ್ತಾ? ಎನ್ನುವುದು ಯಕ್ಷ ಪ್ರಶ್ನೆ. ಬೆಂಗಳೂರು ಗ್ರೀನ್ ಲೈನ್ ಯೋಜನೆ ವಿಸ್ತರಣೆಯ ಮೂಲಕ ಇದು ಸಾಕಾರವಾಗಬಹುದು.

ಹೌದು, ಬೆಂಗಳೂರಿನಿಂದ ತುಮಕೂರಿಗೆ ಹೋಗಲು ಸುಮಾರು 2 ಗಂಟೆಗಳ ಬೇಕಾಗುತ್ತದೆ. ನಮ್ಮ ಮೆಟ್ರೋ ಜಾಲ ವಿಸ್ತರಣೆಯಾದ್ದರೆ ಸಂಚಾರ ದಟ್ಟಣೆಗೆ ಕೂಡ ಬ್ರೇಕ್‌ ಬೀಳುತ್ತೆ ಜೊತೆಗೆ ಯಾವುದೇ ಕಿರಿಕಿರಿ ಇಲ್ಲದೇ ಪ್ರಯಾಣವನ್ನು ಮಾಡಬಹುದು.

Metro: 2 ಗಂಟೆ ಪ್ರಯಾಣಕ್ಕೆ ಬ್ರೇಕ್! ತುಮಕೂರಿಗೆ ಮೆಟ್ರೋ ಬರುತ್ತಾ?

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ತನ್ನ ಮೆಟ್ರೋ ವ್ಯವಸ್ಥೆಯನ್ನು ನಗರದಾಚೆಗೆ ವಿಸ್ತರಿಸುವ ದಿಟ್ಟ ಯೋಜನೆಯನ್ನು ಹೊಂದಿದೆ. ಆದರೆ ಇದಕ್ಕೆ ಬಿಎಂಆರ್‌ಸಿಎಲ್ ಸಲ್ಲಿಸಿದ ಕಾರ್ಯಸಿದ್ದತಾ ವರದಿಗೆ ಅಮೋದನೆ ದೊರೆತರೆ, ಮಾದಾವರದಿಂದ (ನಗರದ ಹೊರವಲಯದಲ್ಲಿರುವ) ನಮ್ಮ ಮೆಟ್ರೋ ಹಸಿರು ಮಾರ್ಗವು ತುಮಕೂರಿಗೆ ವಿಸ್ತರಿಸುತ್ತದೆ. ಅನುಮೋದನೆ ಪಡೆದ ನಂತರ ಈ ಮಹತ್ವಾಕಾಂಕ್ಷೆಯ ಯೋಜನೆಯು ಕರ್ನಾಟಕದ ಮೊದಲ ಅಂತರ-ನಗರ ಮೆಟ್ರೋ ಸಂಪರ್ಕವಾಗಲಿದೆ.

ಈ ಮಾರ್ಗವು 59 ಕಿಲೋಮೀಟರ್‌ಗಳನ್ನು ವಿಸ್ತರಿಸಲಿದ್ದು, 25 ಎತ್ತರದ ನಿಲ್ದಾಣಗಳನ್ನು ಒಳಗೊಂಡಿರುತ್ತದೆ. ಇದು ಮಾದವರದಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದ ಬಳಿ ಪ್ರಾರಂಭವಾಗುತ್ತದೆ, ನೆಲಮಂಗಲ ತಾಲ್ಲೂಕಿನ ಪ್ರದೇಶಗಳ ಮೂಲಕ ಹಾದುಹೋಗುತ್ತದೆ ಮತ್ತು ತುಮಕೂರನ್ನು ಪ್ರವೇಶಿಸುವ ಮೊದಲು ದಾಬಸ್‌ಪೇಟೆಯನ್ನು ತಲುಪುತ್ತದೆ

ತುಮಕೂರಿನೊಳಗೆ, ಈ ಮಾರ್ಗವು ನಗರ ಕೇಂದ್ರ ಮತ್ತು ಹೊರ ಪ್ರದೇಶಗಳನ್ನು ಒಳಗೊಂಡಿದೆ. ನಾಗಣ್ಣ ಪಾಳ್ಯದಲ್ಲಿ ಸಂಪರ್ಕ ಕೊನೆಯಾಗಿತ್ತದೆ. ತುಮಕೂರಿನವರೆಗೂ ಕಾಮಗಾರಿ ಪೂರ್ಣಗೊಂಡರೆ ನಂತರದ ದಿನಮಾಣಗಳಲ್ಲಿ ವಸಂತ ನರಸಾಪುರ ಕೈಗಾರಿಕಾ ಪ್ರದೇಶದವರೆಗೂ ಮೆಟ್ರೋ ಜಾಲ ವಿಸ್ತರಿಸುವ ಗುರಿಯನ್ನು ಹೊಂದಿದೆ.

ಬಿಎಂಆರ್‌ಸಿಎಲ್ ಈಗಾಗಲೇ ದೂರದ ಮೆಟ್ರೋ ಹಳಿಗಳನ್ನು ನಿರ್ವಹಿಸುವ ಅನುಭವವನ್ನು ಹೊಂದಿದೆ.ಇದು ಪ್ರಸ್ತುತ ನಗರದ ಅತಿ ಉದ್ದದ ಮಾರ್ಗವಾದ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರ ಮತ್ತು ಹೆಬ್ಬಾಳ ಮೂಲಕ ವಿಮಾನ ನಿಲ್ದಾಣದವರೆಗಿನ 58 ಕಿ.ಮೀ. ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕೈಗಾರಿಕಾ ಕೇಂದ್ರವಾಗಿ ತುಮಕೂರು ಹೊರಹೊಮ್ಮುತ್ತಿದೆ

ತುಮಕೂರು ಜಿಲ್ಲೆ ಮುಂದಿನ ದಿನಮಾನಗಳಲ್ಲಿ ಕೈಗಾರಿಕಾ ಕೇಂದ್ರವಾಗಿವೇಗವಾಗಿ ಬೆಂಗಳೂರಿನಂತೆ ಬೆಳೆಯುತ್ತಿತ್ತದೆ. ತುಮಕೂರಿನಲ್ಲಿ ಹೂಡಿಕೆ ಮಾಡಲು ರಾಜಕಾರಣಿಗಳು ಮತ್ತು ಸರ್ಕಾರವೇ ಅದನ್ನು ಮೆಟ್ರೋ ಮೂಲಕ ಬೆಂಗಳೂರಿಗೆ ಸಂಪರ್ಕಿಸಲು ಒತ್ತಡ ಹೇರುತ್ತಿದೆ. ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವುದು ಮತ್ತು ಎರಡು ನಗರಗಳ ನಡುವಿನ ಪ್ರಯಾಣವನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ ಎಂದು ವರದಿಗಳು ಸಹ ಆಗಿವೆ.

ರಾಜ್ಯ ಸರ್ಕಾರ ಕೇಳಿದ ನಂತರ ಬಿಎಂಆರ್‌ಸಿಎಲ್ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಿತು. ಈ ಅಧ್ಯಯನವು ಯೋಜನೆಗೆ ಹಣಕಾಸು ಒದಗಿಸಲು ಎರಡು ಸಂಭಾವ್ಯ ಮಾರ್ಗಗಳನ್ನು ನೋಡಿದೆ. ಸುಮಾರು 20,650 ಕೋಟಿ ರೂ. ವೆಚ್ಚದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿ. ವಿಶೇಷ ಉದ್ದೇಶದ ವಾಹನ ಮಾದರಿ (ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಜಂಟಿ ಹಣಕಾಸು) ಅಂದಾಜು 18,670 ಕೋಟಿ ರೂ.ಗಳಾಗಿ ಅಂದಾಜು ಮಾಡಲಾಗಿದೆ.

ಕರಡು ವರದಿಯ ಪ್ರಕಾರ, ಈ ಯೋಜನೆಯು ತಾಂತ್ರಿಕವಾಗಿ ಸಾಧ್ಯ ಮತ್ತು ಒಂದು ದಿಕ್ಕಿನಲ್ಲಿ ಗಂಟೆಗೆ ಸುಮಾರು 15,000 ಪ್ರಯಾಣಿಕರನ್ನು ಮೆಟ್ರೋ ಸಾಗಿಸಬಲ್ಲದು. ಇದು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರುತ್ತದೆ. ಮೊದಲಿಗೆ, ರೈಲುಗಳು ಮೂರು ಬೋಗಿಗಳನ್ನು ಹೊಂದಿದ್ದು ಪ್ರತಿ 4-5 ನಿಮಿಷಗಳಿಗೊಮ್ಮೆ ಚಲಿಸುತ್ತವೆ. ಇನ್ನೂ ತುಮಕೂರು ಮಾರ್ಗಕ್ಕೆ ಎರಡು ನಿರ್ವಹಣಾ ಡಿಪೋಗಳನ್ನು ನಿರ್ಮಾಣ ಮಾಡಲು ಸಹ ಯೋಜಿಸಲಾಗಿದೆ. ಅದರಲ್ಲಿ
ಒಂದು ನೆಲಮಂಗಲದಲ್ಲಿ ಮತ್ತು ಇನ್ನೊಂದು ತುಮಕೂರಿನಲ್ಲಿ ಎಂದು ಪ್ಲಾನ್‌ ಮಾಡಿಕೊಳ್ಳಲಾಗಿದೆ.

2032 ರ ವೇಳೆಗೆ, ಮೆಟ್ರೋ ಮಾರ್ಗವು ಪ್ರತಿದಿನ ಸುಮಾರು 2.8 ಲಕ್ಷ (280,000) ಜನರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ, 2061ರ ವೇಳೆಗೆ ಈ ಸಂಖ್ಯೆ ದಿನಕ್ಕೆ 5 ಲಕ್ಷ ತಲುಪುವ ಸಾಧ್ಯತೆಯಿದೆ.

ರಿಯಲ್ ಎಸ್ಟೇಟ್ ಯೋಜನೆಗಳು ಹಣಕಾಸು ಬೆಂಬಲ
ಸರ್ಕಾರವು ಪಿಪಿಪಿ ಮಾದರಿಯನ್ನು ಆಯ್ಕೆಯನ್ನು ಮಾಡಿದ್ದರೆ ವರದಿಯ ಹಿಂದಿರುವ ಸಲಹಾ ಸಂಸ್ಥೆಯು ಕೆಲವು ಮೆಟ್ರೋ ನಿಲ್ದಾಣಗಳ ಸುತ್ತಲೂ 250 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸೂಚಿಸಿದೆ. ಇದರಲ್ಲಿ ಖಾಸಗಿ ಹೂಡಿಕೆದಾರರನ್ನು ಸಳೆಯಲು ವಸತಿ ಮತ್ತು ವಾಣಿಜ್ಯ ಕಟ್ಟಡಗಳು ಸೇರಿವೆ. ನಂತರ ರಾಜ್ಯ ಮತ್ತು ಖಾಸಗಿ ಪಾಲುದಾರರು ಈ ಅಭಿವೃದ್ಧಿಗಳಿಂದ ಬರುವ ಲಾಭವನ್ನು ಪಡೆದುಕೊಳ್ಳತ್ತಾರೆ.

ಈ ರಿಯಲ್ ಎಸ್ಟೇಟ್ ಅಭಿವೃದ್ಧಿಯನ್ನು ಮಾದವರ ಮತ್ತು ನೆಲಮಂಗಲ ನಡುವಿನ ಐದು ಪ್ರಮುಖ ಸ್ಥಳಗಳಲ್ಲಿ ಪ್ರಾರಂಭಿಸಲಾಗುತ್ತದೆ. ತುಮಕೂರಿನ ಒಂದು ಸ್ಥಳದಲ್ಲಿ ಪ್ರಸ್ತಾಪಿಸಲಾಗಿದೆ.

ಒಟ್ಟಾರೆಯಾಗಿ, ಈ ಹೊಸ ಅಭಿವೃದ್ಧಿಗಾಗಿಯ ಯೋಜನೆಗೆ ಸುಮಾರು 470 ಎಕರೆ ಭೂಮಿ ಬೇಕಾಗುತ್ತದೆ.ಆದರೆ ಮುಂದಿನ ಕ್ರಮಗಳು ಸರ್ಕಾರ ಏನು ನಿರ್ಧರಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+