ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2.0, ತನ್ನ ಎರಡನೇ ಅವಧಿಯ ಒಂದು ವರ್ಷವನ್ನು ಪೂರೈಸಿದೆ. ಈ ವೇಳೆ ಮೋದಿ ಸರ್ಕಾರಕ್ಕೆ ಕೊರೊನಾವೈರಸ್ನ ಬಹುದೊಡ್ಡ ಸವಾಲು ಕೂಡ ಎದುರಾಗಿದೆ.
ಇದೇ ಹೊತ್ತಿನಲ್ಲಿ ದೇಶದ ಆರ್ಥಿಕ ಪರಿಸ್ಥಿತಿಗೂ ಅತಿದೊಡ್ಡ ಸವಾಲು ಎದುರಾಗಿದೆ. ಕಳೆದ ನಾಲ್ಕು ದಶಕದಲ್ಲೇ ಅತಿ ಕೆಟ್ಟ ಪರಿಸ್ಥಿತಿಯನ್ನು ದೇಶ ಎದುರಿಸುತ್ತಿದೆ ಎಂದು ಹಲವು ಆರ್ಥಿಕ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾ ಲಾಕ್ಡೌನ್ ಪರಿಣಾಮಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ 22 ಲಕ್ಷ ಕೋಟಿ ರುಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದೆ. ಇದು ದೇಶದ ಜನರ ಹೂಡಿಕೆ ಉಳಿತಾಯದ ಮೇಲೆ ಪರಿಣಾಮ ಬೀರಲಿದೆ. ಹೂಡಿಕೆ ಹೆಚ್ಚಳಕ್ಕೆ ಮೋದಿ ಸರಕಾರ ತಿಣುಕಾಡುತ್ತಿದ್ದರೆ, ಇತ್ತ ಲಾಕ್ಡೌನ್ನಿಂದ ಉದ್ಯೋಗ ನಷ್ಟ, ಆದಾಯ ನಷ್ಟ ಮಾಡಿಕೊಂಡಿರುವ ಜನಸಾಮಾನ್ಯರು ಉಳಿತಾಯ ಹೇಗಪ್ಪಾ ಮಾಡೋದು ಇಂತ ಕಷ್ಟ ಕಾಲದಲ್ಲಿ ಎನ್ನುತ್ತಿದ್ದಾರೆ.
ನರೇಂದ್ರ ಮೋದಿ ಸರ್ಕಾರದ 2.0 ಅವಧಿಯ ನೀತಿ ನಿಯಮಗಳು ಹೂಡಿಕೆ ಮತ್ತು ಉಳಿತಾಯದ ಮೇಲೆ ಉಂಟು ಮಾಡುವ ಪ್ರಮುಖ 5 ಸಂಗತಿಗಳು ಇಲ್ಲಿವೆ
ಜನಸಾಮಾನ್ಯರ ಉಳಿತಾಯದ ಮೇಲೆ ಪರಿಣಾಮ
ಮೋದಿ 2.0 ಸರ್ಕಾರದ ಭಾಗವಾಗಿ ಕೇಂದ್ರ ಹಣಕಾಸು ಸಚಿವೆ, ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ಆರಂಭದಲ್ಲಿ 2020-21 ರ ಕೇಂದ್ರ ಬಜೆಟ್ ಮಂಡಿಸಿದರು. ಈ ಬಜೆಟ್ನಲ್ಲಿ ತೆರಿಗೆದಾರರಿಗೆ ಹಲವು ವಿನಾಯಿಗಳನ್ನು ನೀಡಿದರಾದರೂ ಜನಪ್ರಿಯ ತೆರಿಗೆಗಳನ್ನು ಘೋಷಣೆ ಮಾಡಲಿಲ್ಲ. ಇದರಿಂದ ಜನಸಾಮಾನ್ಯರ ಉಳಿತಾಯದ ಮೇಲೆ ಪರಿಣಾಮ ಬೀರಿದೆ.
ಲಾಭಾಂಶ ವಿತರಣಾ ತೆರಿಗೆ
ಲಾಭಾಂಶ ವಿತರಣಾ ತೆರಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಘೋಷಣೆ ಮಾಡಿದ್ದರಿಂದ ಹೂಡಿಕೆ ಮೇಲೆ ಹೊಡೆತ ಬಿದ್ದಿದೆ ಎನ್ನಲಾಗಿದೆ. ಲಾಭಾಂಶದಿಂದ ಬರುವ ಆದಾಯವನ್ನು ಹೂಡಿಕೆ ಮಾಡುವ ಹೂಡಿಕೆದಾರರಿಗೆ, ಈ ಕ್ರಮವು ಹೊರೆಯಾಗಿದೆ.
ಉಳಿತಾಯದ ಮೇಲೆ ಅಡ್ಡ ಪರಿಣಾಮ
ನೌಕರರ ಭವಿಷ್ಯ ನಿಧಿ (ಇಪಿಎಫ್), ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್), ಮತ್ತು ಅನುಮೋದಿತ ಮೇಲ್ವಿಚಾರಣಾ ನಿಧಿಗಳಲ್ಲಿ ಉದ್ಯೋಗದಾತರ ವಾರ್ಷಿಕ 7.5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಕೊಡುಗೆಗಳು ಈಗ ತೆರಿಗೆಗೆ ಒಳಪಟ್ಟಿರುತ್ತವೆ. ಇದು ಹೆಚ್ಚಿನ ಅದಾಯವಿರುವರ ಉಳಿತಾಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಿದೆ.
7.5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಕೊಡುಗೆಗಳು
ನೌಕರರ ಭವಿಷ್ಯ ನಿಧಿ (ಇಪಿಎಫ್), ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್), ಮತ್ತು ಅನುಮೋದಿತ ಮೇಲ್ವಿಚಾರಣಾ ನಿಧಿಗಳಲ್ಲಿ ಉದ್ಯೋಗದಾತರ ವಾರ್ಷಿಕ 7.5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಕೊಡುಗೆಗಳು ಈಗ ತೆರಿಗೆಗೆ ಒಳಪಟ್ಟಿರುತ್ತವೆ. ಇದು ಹೆಚ್ಚಿನ ಅದಾಯವಿರುವರ ಉಳಿತಾಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಿದೆ.
ಕಡಿಮೆ ಸ್ಥಿರ ಠೇವಣಿ ದರ
ಸಣ್ಣ ಠೇವಣಿದಾರರು, ವಿಶೇಷವಾಗಿ ಹಿರಿಯ ನಾಗರಿಕರು, ಈಗಾಗಲೇ ಕಡಿಮೆ ಸ್ಥಿರ ಠೇವಣಿ ದರಗಳಿಂದ ಉಳಿತಾಯದ ಮೇಲೆ ಅಷ್ಟೊಂದು ಹಿಡಿತ ಸಾಧಿಸುತ್ತಿಲ್ಲ. ಆದರೆ ಮಾರ್ಚ್ನಲ್ಲಿ ಕೇಂದ್ರ ಸರ್ಕಾರ 2020 ರ ಸಣ್ಣ ಉಳಿತಾಯ ಯೋಜನೆಗಳಲ್ಲಿ ನೀಡುವ ಆದಾಯವನ್ನು ತೀವ್ರವಾಗಿ ಕಡಿಮೆ ಮಾಡಲು ನಿರ್ಧರಿಸಿತು.
ಭಾರತ್ ಬಾಂಡ್ ಇಟಿಎಫ್
ಕೇಂದ್ರೀಯ ಸಾರ್ವಜನಿಕ ವಲಯದ (ಸಿಪಿಎಸ್ಯು) ಸಾಲದ ಅವಶ್ಯಕತೆಗಳನ್ನು ಪರಿಣಾಮಕಾರಿ ರೀತಿಯಲ್ಲಿ ಪೂರೈಸಲು, ಕೇಂದ್ರ ಸರ್ಕಾರವು 2019 ರ ಡಿಸೆಂಬರ್ನಲ್ಲಿ ಮೊದಲ ಭಾರತ್ ಬಾಂಡ್ ಇಟಿಎಫ್ ಅನ್ನು ಹೊರತಂದಿತು. ಇದು ಈ ವಲಯದ ಹೂಡಿಕೆ ಮೇಲೆ ಕೆಟ್ಟ ಪರಿಣಾಮ ಬೀರಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications