27.34 ಲಕ್ಷ ಬೀದಿ ಬದಿ ವ್ಯಾಪಾರಿಗಳಿಂದ ಕೇಂದ್ರದ ಸಾಲ ಯೋಜನೆಗೆ ಅರ್ಜಿ
ಹತ್ತಿರ ಹತ್ತಿರ 27.34 ಲಕ್ಷ ಬೀದಿ ಬದಿ ವ್ಯಾಪಾರಿಗಳು ಕೇಂದ್ರ ಸರ್ಕಾರದ ಸಾಲ ಯೋಜನೆಗೆ ಅರ್ಜಿ ಹಾಕಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ- ನಿರ್ಭರ್ ನಿಧಿ (ಪಿಎಂ- ಸ್ವನಿಧಿ)ಯಿಂದ ತಲಾ 10,000 ರುಪಾಯಿ ಸಬ್ಸಿಡಿ ಸಾಲ ನೀಡುವ ಕಿರು ಹಣಕಾಸು ಸಾಲ ಯೋಜನೆ ಇದು.
ಇಲ್ಲಿಯ ತನಕ 14.35 ಲಕ್ಷ ಮಂದಿಗೆ ಸಾಲ ಮಂಜೂರಾಗಿದ್ದು, 7.89 ಲಕ್ಷ ಮಂದಿಗೆ 773.6 ಕೋಟಿ ರುಪಾಯಿಯನ್ನು ವಿತರಣೆ ಮಾಡಲಾಗಿದೆ ಎಂದು ಗೃಹ ಹಾಗೂ ನಗರ ವ್ಯವಹಾರಗಳ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ. ಸರ್ಕಾರದಿಂದ ಈ ಅನುಕೂಲವನ್ನು ಐವತ್ತು ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ವಿಸ್ತರಿಸುವ ಗುರಿ ಇದೆ.
ಯಾವ ಸಾಲ ಮುಂಚಿತವಾಗಿ ತೀರಿಸಬೇಕು? ಇಲ್ಲಿದೆ ಉದಾಹರಣೆ ಸಹಿತ ಲೆಕ್ಕಾಚಾರ
ಸರ್ಕಾರದ ಮಾಹಿತಿ ಪ್ರಕಾರ, ಈ ಸಾಲ ಪಡೆದವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದವರು. ಶೇಕಡಾ ತೊಂಬತ್ತರಷ್ಟು ಸಾಲವನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳಿಂದ ವಿತರಿಸಲಾಗಿದೆ. ಅದರಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಚೂಣಿಯಲ್ಲಿದೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಯಾರು ತಮ್ಮ ನೆಲೆಗಳನ್ನು ಬಿಟ್ಟಿರುತ್ತಾರೋ ಅಂಥವರು ವಾಪಸ್ ಆದ ಮೇಲೆ ಈ ಸಾಲ ಪಡೆಯಲು ಅರ್ಹರು.