ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟೋ ಜನರಿಗೆ ಆಸರೆ ನೀಡಿದೆ. ಉದ್ಯೋಗ ಇಲ್ಲದವರಿಗೆ ಉದ್ಯೋಗ ನೀಡಿದೆ. ಜೀವನ ಅಂದ್ರೆ ಏನು ಎಂಬುದನ್ನು ಕಲಿಸಿಕೊಟ್ಟಿದೆ. ಅಂತಹ ಬೆಂಗಳೂರು ದಿನವಿಡೀ ಟ್ರಾಫಿಕ್, ಜನಜಂಗುಳಿಯಿಂದಲೇ ತುಂಬಿರುತ್ತದೆ. ದಿನದ 24 ಗಂಟೆಯೂ ಆಕ್ಟಿವ್ ಆಗಿರುವ ಬೆಂಗಳೂರನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಸಿಕ್ಕ ಸಿಕ್ಕಲ್ಲಿ ಕಸ ಹಾಕುವವರ ವಿರುದ್ಧ ಜಿಬಿಎ ಕ್ರಮ ಕೈಗೊಂಡಿತ್ತು. ಆದ್ರೆ ಇದೀಗ ಮತ್ತೊಂದು ಮಹತ್ವದ ಎಚ್ಚರಿಕೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಾರ್ವಜನಿಕರಿಗೆ ನೀಡಿದೆ.

ಹೌದು, ಈಗಾಗಲೇ ಕಂಡ ಕಂಡಲ್ಲಿ ಕಸ ಹಾಕುವವರ (Garbage) ವಿರುದ್ಧ ಸರ್ಕಾರ ಖಡಕ್ ಕ್ರಮ ಕೈಗೊಂಡು, ದಂಡ ವಿಧಿಸಿತ್ತು. ಇದೀಗ ವಾಹನಗಳಿಗೆ ಹಾಕದೆ ಮನೆಯಲ್ಲೇ ಕಸ ಇಟ್ಟುಕೊಂಡವರ ವಿರುದ್ಧವೂ ಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ಬೆಂಗಳೂರಿನದಲ್ಲಿ ಮಹಾನಗರಗಳಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಎದುರಿಸುವುದೇ ಒಂದು ಸವಾಲಾದರೆ, ಇತ್ತೀಚೆಗೆ ಘನತ್ಯಾಜ್ಯ ವಿಲೇವಾರಿ ಮಾಡುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.
ಮನೆಯಲ್ಲಿ ಕಸ ಇಟ್ಟುಕೊಂಡರೂ ದಂಡ ಫಿಕ್ಸ್!
ಇದೀಗ ಮನೆ ಮುಂದೆ ಬರುವ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಕಸ ಹಾಕದೇ, ಯಾರೆಲ್ಲಾ ಮನೆಯಲ್ಲೇ ಕಸ ಇಟ್ಟುಕೊಂಡಿರುತ್ತಾರೋ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಘನತ್ಯಾಜ್ಯ ನಿರ್ವಹಣಾ ನಿಯಮಿತ ಸಂಸ್ಥೆ ಮುಂದಾಗಿದೆ. ಈ ಎಚ್ಚರಿಕೆಯ ಪ್ರಕಾರ, ಇನ್ಮೇಲೆ ಕಸವನ್ನು ಕೊಡದೆ ಮನೆಯಲ್ಲೇ ಇಟ್ಟುಕೊಂಡರೆ ದಂಡ ಹಾಕುವುದಾಗಿ ಹೇಳಲಾಗಿದೆ.
ಯಾರು ನಿಯಮಿತವಾಗಿ ಮನೆಯ ಕಸ ಕೊಡದೆ ಮನೆಯಲ್ಲೇ ಇಟ್ಟುಕೊಂಡಿರುತ್ತಾರೋ, ಅವರ ವಿರುದ್ಧ ದಂಡದ ಅಸ್ತ್ರಕ್ಕೆ ಗ್ರೇಟರ್ ಬೆಂಗಳೂರು ಅಥಾರಟಿ ಸಜ್ಜಾಗಿದೆ. ಈ ಮೂಲಕ ಮನೆಯಲ್ಲಿಟ್ಟುಕೊಳ್ಳದೇ, ಕಸವನ್ನು ಕಂಪಲ್ಸರಿ ಕೊಡಲೇಬೇಕೆಂದು BSWML ಎಚ್ಚರಿಕೆ ನೀಡಿದೆ.
ಯಾಕೆ ಈ ಕ್ರಮ?
ಇನ್ನು ಮನೆಯಲ್ಲಿಟ್ಟುಕೊಂಡರೆ ಯಾಕೆ ದಂಡ ಹಾಕುತ್ತಾರೆ? ಮನೆಯಲ್ಲಿ ಕಸ ಇದೆ ಎಂದು ಇಲಾಖೆಯವರಿಗೆ ಹೇಗೆ ಗೊತ್ತಾಗುತ್ತೆ? ಎಂಬ ಪ್ರಶ್ನೆ ಬರಬಹುದು. ಆದರೆ ಇದಕ್ಕೆ ಕಾರಣ ಇದೆ.. ಅದೇನೆಂದರೆ ಯಾರು ಬೆಂಗಳೂರು ಅಥಾರಿಟಿ ಗಾಡಿಗಳಿಗೆ ಕಸ ಹಾಕುವುದಿಲ್ಲವೋ ಅವರು ಹೊರಗಡೆ ಹೋಗಿ ಬೀದಿಬದಿ ಕಸ ಎಸೆಯುತ್ತಾರೆ ಎಂದರ್ಥ. ಆದ್ದರಿಂದ ಅವರನ್ನು ಬಿಎಸ್ಡಬ್ಲೂಎಂಎಲ್ ಅಧಿಕಾರಿಗಳು ಗಮನಿಸುತ್ತಿರುತ್ತಾರೆ. ಅಂಥವರ ವಿರುದ್ಧ ದಂಡದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಘನತ್ಯಾಜ್ಯ ನಿರ್ವಹಣಾ ನಿಯಮಿತ ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಕರೀಗೌಡ ಮಾತನಾಡಿದ್ದು, ಯಾರು ಪ್ರತಿದಿನ ವಾಹನಗಳಿಗೆ ಕಸ ಹಾಕದೇ, ಹೊರಗಡೆ ಎಸೆಯುತ್ತಾರೆಯೋ ಅಂಥವರನ್ನು ಗುರುತಿಸಿ ದಂಡ ಹಾಕಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ತ್ಯಾಜ್ಯ ವಿಲೇವಾರಿ ವೇಳೆ ಸಾರ್ವಜನಿಕರು ಹಸಿ ಮತ್ತು ಒಣ ಕಸ ವರ್ಗೀಕರಿಸುವುದಿಲ್ಲ. ಆದ್ರೆ ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು. ಅಲ್ಲದೇ ಮನೆಯಲ್ಲಿ ಯಾರು ಕಸ ಇಟ್ಟುಕೊಂಡಿದ್ದಾರೆ ಎಂಬುದನ್ನು ನಮ್ಮ ಅಧಿಕಾರಿಗಳು ಗಮನಿಸುತ್ತಾರೆ. ಒಂದು ವೇಳೆ ಕಸ ಹಾಗೆಯೇ ಇಟ್ಟುಕೊಂಡರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!



Click it and Unblock the Notifications