ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಬೆಳವಣಿಗೆಯ ಬೆನ್ನಲ್ಲೇ ಭಾರತೀಯ ಷೇರುಗಳ ಮಾರುಕಟ್ಟೆಯು ಶುಕ್ರವಾರ ಆರಂಭಿಕ ವ್ಯವಹಾರದಲ್ಲಿ ಏರಿಕೆ ಕಂಡಿದೆ. ಪ್ರಮುಖವಾಗಿ ತಂತ್ರಜ್ಞಾನ ಷೇರುಗಳು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಲಾಭದ ಹಿನ್ನೆಲೆ ದೇಶೀಯ ಸೂಚ್ಯಂಕಗಳು ಏರಿಕೆ ಕಂಡವು.
30-ಷೇರು ಬಿಎಸ್ಇ ಸೆನ್ಸೆಕ್ಸ್ 539 ಪಾಯಿಂಟ್ಗಳು ಅಥವಾ ಶೇಕಡಾ 0.97 ರಷ್ಟು ಏರಿಕೆಯಾಗಿ 56,357 ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ 148 ಪಾಯಿಂಟ್ ಅಥವಾ 0.89 ರಷ್ಟು ಕುಸಿದು 16,776 ಕ್ಕೆ ವಹಿವಾಟು ನಡೆಸಿದೆ. ನಿಫ್ಟಿ ಮಿಡ್ಕ್ಯಾಪ್ 100 ಶೇಕಡಾ 0.60 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.95 ರಷ್ಟು ಏರಿದೆ.
ನಿಫ್ಟಿ ಐಟಿಯು ಎನ್ಎಸ್ಇ ಪ್ಲಾಟ್ಫಾರ್ಮ್ ಅನ್ನು ಶೇ 2.15 ರಷ್ಟು ಏರಿಕೆ ಕಂಡಿದೆ. ವಿಪ್ರೋ ಟಾಪ್ ನಿಫ್ಟಿ ಗೇನರ್ ಆಗಿದ್ದು, ಷೇರುಗಳು ಶೇಕಡಾ 2.82 ರಷ್ಟು ಏರಿಕೆಯಾಗಿ ರೂಪಾಯಿ 487.50 ಕ್ಕೆ ತಲುಪಿದೆ. ಟೆಕ್ ಮಹೀಂದ್ರಾ, ಎಚ್ಸಿಎಲ್ ಟೆಕ್, ಇನ್ಫೋಸಿಸ್ ಮತ್ತು ರಿಲಯನ್ಸ್ ಕೂಡ ಲಾಭ ಗಳಿಸಿದೆ.

ಯಾವೆಲ್ಲಾ ಷೇರುಗಳಿಗೆ ಲಾಭ?
ಆರಂಭಿಕ ವಹಿವಾಟಿನಲ್ಲಿ ಆರ್ಐಎಲ್ನಲ್ಲಿನ ಏರಿಕೆಯಿಂದಾಗಿ ಶೇಕಡಾ 0.72 ರಷ್ಟು ಹೆಚ್ಚಿನ ವ್ಯಾಪಾರಕ್ಕೆ ಸಹಾಯವಾಗಿದೆ. 1,990 ಷೇರುಗಳು ಮುನ್ನಡೆ ಸಾಧಿಸಿದ್ದರೆ, 557 ಷೇರುಗಳು ಬಿಎಸ್ಇಯಲ್ಲಿ ಕುಸಿಯುತ್ತಿದೆ.
30-ಷೇರು ಬಿಎಸ್ಇ ಸೂಚ್ಯಂಕದಲ್ಲಿ, ವಿಪ್ರೋ, ಎಚ್ಸಿಎಲ್ ಟೆಕ್, ಆರ್ಐಎಲ್, ಟೆಕ್ಎಂ, ಇನ್ಫೋಸಿಸ್, ಟಿಸಿಎಸ್, ಬಜಾಜ್ ಫಿನ್ಸರ್ವ್, ಎಸ್ಬಿಐ, ಬಜಾಜ್ ಫೈನಾನ್ಸ್, ಪವರ್ಗ್ರಿಡ್, ಡಾ ರೆಡ್ಡೀಸ್ ಮತ್ತು ಇಂಡಸ್ಇಂಡ್ ಬ್ಯಾಂಕ್ ಹೆಚ್ಚಿನ ಲಾಭ ಕಂಡಿದೆ. ಆದರೆ ಅಲ್ಟ್ರಾಟೆಕ್ ಸಿಮೆಂಟ್, ಭಾರ್ತಿ ಏರ್ಟೆಲ್, ಎನ್ಟಿಪಿಸಿ, ಮಾರುತಿ, ಟಾಟಾ ಸ್ಟೀಲ್ ಮತ್ತು ನೆಸ್ಲೆ ಇಂಡಿಯಾ ನಷ್ಟವನ್ನು ಕಂಡಿದೆ.
ಗುರುವಾರದಂದು ಸೆನ್ಸೆಕ್ಸ್ 437 ಪಾಯಿಂಟ್ ಅಥವಾ ಶೇಕಡಾ 0.79 ರಷ್ಟು ಜಿಗಿದು 55,818 ಕ್ಕೆ ತಲುಪಿದ್ದರೆ, ನಿಫ್ಟಿ 105 ಪಾಯಿಂಟ್ ಅಥವಾ 0.64 ರಷ್ಟು ಏರಿಕೆ ಕಂಡು 16,628 ಕ್ಕೆ ಸ್ಥಿರವಾಯಿತು.
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications