ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಇಂದು 9ನೇ ಕಂತಿನ ಹಣ ಬಿಡುಗಡೆ
ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್ ಸಮ್ಮಾನ್ ನಿಧಿ) ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿವರ್ಷ ದೇಶದ ರೈತರಿಗೆ 6000 ರೂ. ತಲುಪುತ್ತದೆ. ಈ ಯೋಜನೆ ಅಡಿಯಲ್ಲಿ ಸರ್ಕಾರ ಈವರೆಗೆ ಒಟ್ಟು 8 ಕಂತುಗಳನ್ನು ಕಳುಹಿಸಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ 9ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.
6000 ರೂಪಾಯಿಯನ್ನು 2000 ರೂಪಾಯಿಗಳ ಮೂರು ಕಂತುಗಳಲ್ಲಿ ರೈತರಿಗೆ ನೀಡುತ್ತದೆ. ಇದರ ಅಡಿಯಲ್ಲಿ, ಪ್ರತಿ ವರ್ಷದ ಮೊದಲ ಕಂತು ಏಪ್ರಿಲ್ 1 ರಿಂದ ಜುಲೈ 31 ರವರೆಗೆ, ಎರಡನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಮತ್ತು ಮೂರನೇ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ಬರುತ್ತದೆ.
ಈ ಯೋಜನೆಯಿಂದಾಗಿ 14 ಕೋಟಿ ಫಲಾನುಭವಿ ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ಹಣ ತಲುಪುತ್ತದೆ. ಇದುವರೆಗೂ ಬರೋಬ್ಬರಿ 1.15 ಲಕ್ಷ ಕೋಟಿಯಷ್ಟು ಹಣ ರೈತ ಕುಟುಂಬಗಳಿಗೆ ತಲುಪಿಸಲಾಗಿದೆ.
ಶೇಕಡಾ 100ರಷ್ಟು ಅನುದಾನ ಭರಿಸುವ ಸರ್ಕಾರ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಸರ್ಕಾರದ ಯೋಜನೆಯಾಗಿದ್ದು, ಇದಕ್ಕೆ ಶೇಕಡಾ 100ರಷ್ಟು ಹಣಕಾಸು ಅನುದಾನವನ್ನು ಭಾರತ ಸರ್ಕಾರವೇ ಭರಿಸುತ್ತದೆ. 2018ನೇ ಇಸವಿಯ ಡಿಸೆಂಬರ್ 1ರಂದು ಆರಂಭಗೊಂಡ ಈ ಯೋಜನೆಯಡಿ 2 ಹೆಕ್ಟೇರ್ ತನಕ ಒಟ್ಟಾರೆಯಾಗಿ ಭೂಮಿ ಇರುವ ಅಥವಾ ಮಾಲೀಕತ್ವ ಹೊಂದಿರುವ ಸಣ್ಣ ಹಾಗೂ ಕಿರು ರೈತರ ಕುಟುಂಬಗಳಿಗೆ ವಾರ್ಷಿಕವಾಗಿ 6000 ರೂಪಾಯಿಯನ್ನು ತಲಾ 2 ಸಾವಿರದಂತೆ ಮೂರು ಕಂತಿನಲ್ಲಿ ಪಾವತಿಸಲಾಗುತ್ತದೆ. ಈ ಮೊತ್ತವು ನೇರವಾಗಿ ರೈತರ ಬ್ಯಾಂಕ್ ಅಕೌಂಟ್ಗೆ ತಲುಪುತ್ತದೆ.
ಖಾತೆಗೆ ಹಣ ಬಂದಿದೆಯೇ, ಇಲ್ಲವೇ ಚೆಕ್ ಮಾಡಿ?
ಖಾತೆಗೆ ಹಣ ಬಂದಿದೆಯೇ ಅಥವಾ ಇಲ್ಲವೇ ಚೆಕ್ ಮಾಡಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ನಿಮ್ಮ ಖಾತೆಗೆ ಹಣ ಬಂದಿದೆಯೇ ಇಲ್ಲವೇ ಎಂದು ತಿಳಿಯಲು ಮೊದಲು https://pmkisan.gov.in ವೆಬ್ ಸೈಟ್ಗೆ ಭೇಟಿನೀಡಿ ಈ ವೆಬ್ ಸೈಟ್ನ ಹೋಮ್ ಪೇಜ್ ನಲ್ಲಿ 'Farmer's Corner Section' ನೋಡಿ ಅದರಲ್ಲಿ Beneficiary Status ಆಯ್ಕೆ ಮಾಡಿ, ಫಲಾನುಭವಿಗಳು ಇಲ್ಲಿ ತಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು. ಇಲ್ಲಿ ರೈತರ ಹೆಸರು ಮತ್ತು ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿರುವ ಮೊತ್ತ ಕಾಣುತ್ತದೆ. ಇದರ ನಂತರದಲ್ಲಿ ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ 'Get data' ಕ್ಲಿಕ್ ಮಾಡಿ.
ಮತ್ತಷ್ಟು ಇಳಿಕೆಯಾಗಲಿದೆ ಚಿನ್ನದ ಬೆಲೆ: ಇಂದು 500 ರೂ. ಇಳಿಕೆ ಸಾಧ್ಯತೆ
ಯೋಜನೆಗೆ ನೋಂದಾಯಿಸುವುದು ಹೇಗೆ?
ಈ ಯೋಜನೆಯಲ್ಲಿ ನೋಂದಾಯಿಸುವುದು ತುಂಬಾ ಸುಲಭ. ನೀವು ಮನೆಯಲ್ಲಿ ಕುಳಿತು ಆನ್ಲೈನ್ನಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಇದಲ್ಲದೆ, ನೀವು ಪಂಚಾಯತ್ ಕಾರ್ಯದರ್ಶಿ ಅಥವಾ ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರದ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಈ ಯೋಜನೆಗೆ ನೀವೇ ನೋಂದಾಯಿಸಿಕೊಳ್ಳಬಹುದು.
ಯಾರಿಗೆ ಇದರ ಲಾಭವಿಲ್ಲ?
ಒಬ್ಬ ರೈತ ಬೇರೊಬ್ಬ ರೈತನಿಂದ ಬಾಡಿಗೆಗೆ ಭೂಮಿಯನ್ನು ಬಳಸಿದರೆ, ಅವನಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಈ ಯೋಜನೆಗೆ ಫಲಾನುಭವಿ ಭೂಮಿಯ ಮಾಲೀಕತ್ವ ಅಗತ್ಯ. ಒಬ್ಬ ರೈತ ಅಥವಾ ಕುಟುಂಬವು ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದರೆ, ಅವನಿಗೆ ಇದರ ಲಾಭ ದೊರೆಯುವುದಿಲ್ಲ. 10,000 ರೂ.ಗಿಂತ ಹೆಚ್ಚಿನ ಮಾಸಿಕ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರಿಗೆ ಇದರ ಲಾಭ ದೊರೆಯುವುದಿಲ್ಲ.
ಯೋಜನೆಗೆ ನೋಂದಾಯಿಸಲು ಹೀಗೆ ಅನುಸರಿಸಿ
ನೀವು ಮೊದಲು ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ಗೆ ಹೋಗಬೇಕು. ಈಗ ಫಾರ್ಮರ್ಸ್ ಕಾರ್ನರ್ಗೆ ಹೋಗಿ. ಇಲ್ಲಿ ನೀವು 'ಹೊಸ ರೈತ ನೋಂದಣಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರ ನಂತರ, ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗಿದೆ. ಇದರೊಂದಿಗೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ ರಾಜ್ಯವನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ನಂತರ ಪ್ರಕ್ರಿಯೆಯು ಮುಂದುವರಿಯಬೇಕಾಗುತ್ತದೆ. ಈ ರೂಪದಲ್ಲಿ, ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ಬ್ಯಾಂಕ್ ಖಾತೆ ವಿವರಗಳು ಮತ್ತು ಕ್ಷೇತ್ರದ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಇದರ ನಂತರ ನೀವು ಫಾರ್ಮ್ ಅನ್ನು ಸಂಪೂರ್ಣವಾಗಿ ಸರಿಯಾಗಿ ಭರ್ತಿ ಮಾಡಿದರೆ, ನಿಮಗೆ ಕಿಸಾನ್ ಸಮ್ಮನ್ ನಿಧಿ ಅರ್ಹರಾಗಿರುತ್ತಾರೆ.