ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಇತ್ತೀಚೆಗೆ ವಿದ್ಯುತ್ ವ್ಯತ್ಯಯವಾಗುತ್ತಲೇ (Power Cut) ಇದೆ. ವಿದ್ಯುತ್ ಲೈನ್ ಸೇವೆಯನ್ನ ಗುಣಮಟ್ಟಗೊಳಿಸುವ ಉದ್ದೇಶದಿಂದ ಇದೀಗ ಬೆಸ್ಕಾಂ (BESCOM) ಇಲಾಖೆ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿದೆ. ಇದೀಗ ಇಂದೂ (ಜ.22) ಕೂಡಾ ರಾಜ್ಯದ ವಿವಿಧೆಡೆ ವಿದ್ಯುತ್ ವ್ಯತ್ಯ ಯವಾಗಲಿದೆ. ಆ ಪ್ರಕಾರ, 220/66 ಕೆ.ವಿ. ಹೊನ್ನಾಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೆಲಸ ಹಿನ್ನೆಲೆ ತಾಲೂಕಿನ ವಿವಿಧೆಡೆ ಪವರ್ ಕಟ್ (Power Cut) ಆಗಲಿದೆ.

ಎಲ್ಲೆಲ್ಲಾ ಇರಲ್ಲ ಕರೆಂಟ್?
220/66 ಕೆ.ವಿ. ಹರಿಹರ ತಾಲೂಕಿನ ನಂದಿಗುಡಿ, ದೇವರಬೆಳೆಕೆರೆ, ಮಲೇ ಬೆನ್ನೂರು, ಭಾನುವಳ್ಳಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಜ.22 ರಂದು ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಕರೆಂಟ್ ಇರುವುದಿಲ್ಲ ಎಂದು ಸೂಚನೆ ನೀಡಿದೆ.
ನಂದಿಗುಡಿ ವಿ.ವಿ. ಕೇಂದ್ರದ ನಂದಿಗುಡಿ, ಮರಳಹಳ್ಳಿ, ಇಂಗಳಗೊಂದಿ, ಹುಲಗಿನಹೊಳೆ, ಕೊಕ್ಕ ನೂರು, ವಾಸನ, ಕಡಾರನಾಯಕನಹಳ್ಳಿ, ಎಳೆಹೊಳೆ, ಮೂಗಿನಗೊಂದಿ, ಉಕ್ಕಡಗಾತ್ರಿ, ಜಿ.ಟಿ.ಕಟ್ಟೆ, ಗೋವಿನ ಹಾಳು, ಹಿಂಡಸಘಟ್ಟ ಹಾಗೂ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಅದೇ ರೀತಿ ದೇವರಬೆಳೆಕೆರೆ ವಿವಿ ಕೇಂದ್ರ ವ್ಯಾಪ್ತಿಯ, ದೇವರಬೆಳೆಕೆರೆ, ಕಡ್ಲೆಗೊಂದಿ, ಸತ್ಯನಾರಾಯಣ ಕ್ಯಾಂಪ್, ಸಾಲಕಟ್ಟೆ, ಮಿಟ್ಲಕಟ್ಟೆ ಐಪಿ ವಲಯ ಹಾಗೂ ಸುತ್ತಲಿನ ಪ್ರದೇಶದಲ್ಲೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇನ್ನು ಮಲೆಬೆನ್ನೂರು, ಹಾಲಿವಾಣ, ಒಡೆಯರ ಬಸಾಪುರ, ಜಿ.ಬೇವಿನಹಳ್ಳಿ, ಹಳ್ಳಿಹಾಳು, ಕಂಬತ್ತನಹಳ್ಳಿ, ಹಾಲಿವಾಣ, ದಿಬ್ಬದಹಳ್ಳಿ, ಹರಳಹಳ್ಳಿ, ಕುಮಾರನಹಳ್ಳಿ, ಕೊಪ್ಪ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪವರ್ ಕಟ್ ಆಗಲಿದೆ. ಭಾನುವಳ್ಳಿ ವಿವಿ ಕೇಂದ್ರ ವ್ಯಾಪ್ತಿಯ ಭಾನುವಳ್ಳಿ, ಇಎಚ್ ಟಿ ಕಾರ್ಗಿಲ್ ಕಂಪನಿ, ಬೆಳ್ಳೂಡಿ, ಹನಗವಾಡಿ, ಬನ್ನಿಕೋಡು, ಕೆ.ಬೇವಿನಹಳ್ಳಿ, ಕಮಲಾಪುರ, ಹೊಳೆಸಿರಿಗೆರೆ, ಲಕ್ಕಶೆಟ್ಟಿಹಳ್ಳಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ನೀಡಿದೆ.


Click it and Unblock the Notifications