ಸಾರ್ವಜನಿಕ ವಲಯ ಬ್ಯಾಂಕ್ ಗಳ (PSB's) ಗ್ರಾಸ್ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (NPA) 2018ರ ಮಾರ್ಚ್ ನಲ್ಲಿ ರು. 8.96 ಲಕ್ಷ ಕೋಟಿ ಇದ್ದದ್ದು, 2020ರ ಸೆಪ್ಟೆಂಬರ್ ನಲ್ಲಿ ರು. 6.09 ಲಕ್ಷ ಕೋಟಿಗೆ ಕಡಿಮೆ ಆಗಿದೆ. ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳಿಂದಾಗಿ ಇಂಥ ಬೆಳವಣಿಗೆ ಆಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
2018ರ ಮಾರ್ಚ್ ನಿಂದ 2020ರ ಏಪ್ರಿಲ್ ಮಧ್ಯೆ ದಾಖಲೆಯ ರು. 2.54 ಲಕ್ಷ ಕೋಟಿ ವಸೂಲಿ ಆಗಿದೆ. 2020- 21ರ ಮೊದಲಾರ್ಧದಲ್ಲಿ 12ರ ಪೈಕಿ 11 ಸಾರ್ವಜನಿಕ ಬ್ಯಾಂಕ್ ಗಳು ರು. 14,688 ಕೋಟಿ ಲಾಭ ಕಂಡಿವೆ ಎಂದು ರಾಜ್ಯ ಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಪ್ರಾವಿಷನ್ ಕವರೇಜ್ ರೇಷಿಯೋ 2020ರ ಸೆಪ್ಟೆಂಬರ್ ಕೊನೆಗೆ ಎಂಟು ವರ್ಷಗಳ ಗರಿಷ್ಠ ಮಟ್ಟವಾದ 85.06 ಪರ್ಸೆಂಟ್ ಇದೆ. ಬ್ಯಾಂಕ್ ಗಳ ಬ್ಯಾಲೆನ್ಸ್ ಶೀಟ್ ಗಳನ್ನು ಸ್ವಚ್ಛ ಮಾಡುವ ಆಸ್ತಿ ಗುಣಮಟ್ಟ ಪರಿಶೀಲನೆ (AQR) 2015ರಲ್ಲಿ ಆರಂಭಿಸಲಾಯಿತು. ಆಗ ಎನ್ ಪಿಎ ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಗ್ರಾಸ್ ಎನ್ ಪಿಎ ಮಾರ್ಚ್ 31, 2015ರಲ್ಲಿ 2,79,016 ಕೋಟಿ ಇದ್ದದ್ದು ಒತ್ತಡದ ಆಸ್ತಿಯನ್ನು ಅನುತ್ಪಾದಕ ಆಸ್ತಿ ಎಂದು ಬ್ಯಾಂಕ್ ಗಳು ಗುರುತಿಸಲು ಆರಂಭಿಸಿದ ಮೇಲೆ ಮಾರ್ಚ್ 31, 2018ರಲ್ಲಿ ರು. 8,95,601 ಕೋಟಿಗೆ ಹೆಚ್ಚಳವಾಯಿತು. ಸರ್ಕಾರದ ಪ್ರಯತ್ನ, ಸುಧಾರಣೆ ಹಾಗೂ ತೀರುವಳಿಯಿಂದಾಗಿ 2020ರ ಸೆಪ್ಟೆಂಬರ್ 30ಕ್ಕೆ ರು. 6,09,129 ಕೋಟಿಗೆ ಇಳಿದಿದೆ ಎಂದು ಹೇಳಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಈಕ್ವಿಟಿ ಮತ್ತು ಬಾಂಡ್ ಗಳ ಸ್ವರೂಪದಲ್ಲಿ 2020- 21ರಲ್ಲಿ ರು. 50,982 ಕೋಟಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಸಂಗ್ರಹಿಸಿವೆ ಎಂದು ಉತ್ತರಿಸಿದ್ದಾರೆ. ಇದರ ಪೂರಕವಾಗಿ ಸರ್ಕಾರವು ಸಾರ್ವಜನಿಕ ಬ್ಯಾಂಕ್ ಗಳಿಗೆ 5500 ಕೋಟಿ ರುಪಾಯಿ ಬಂಡವಾಳ ಪೂರೈಕೆ ಮತ್ತು ಬಜೆಟ್ ಪ್ರಾವಿಷನ್ 20,000 ಕೋಟಿ ರುಪಾಯಿಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಇಡಲಾಗಿದೆ ಎಂದಿದ್ದಾರೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications