ಬೆಂಗಳೂರು ಅಂದ್ರೆ ಟ್ರಾಫಿಕ್ ಕಿರಿಕಿರಿ..ಈ ಟ್ರಾಫಿಕ್ ಕಿರಕಿರಿ ರೆಡ್ಡಿಟ್ನಲ್ಲಿ ಟ್ರೆಂಡಿಂಗ್ ಸುದ್ದಿ. ಬೆಂಗಳೂರು ನಿಜವಾಗಿಯೂ ತಂತ್ರಜ್ಞಾನ ನಗರಿಯೆ? ಇಲ್ಲವೇ ಟ್ರಾಫಿಕ್ನ ತುಸು ಸ್ವಪ್ನವೆ ಎಂಬಂತಾಗಿದೆ. ಇತ್ತೀಚೆಗೆ ರೆಡ್ಡಿಟ್ನಲ್ಲಿ ಹರಿದಿದ್ದ ಒಂದು ಪೋಸ್ಟ್ ಇಡೀ ನಗರ ಸಂಚಾರ ಸಂಕಷ್ಟದ ಭೀಕರತೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಈ ವಾಸ್ತವಿಕ ಅನುಭವವನ್ನು ಹಂಚಿಕೊಂಡಿರುವ ಬಳಕೆದಾರನ ಚುಚ್ಚುವ ಮಾತುಗಳು ಸಾವಿರಾರು ಜನರ ದಿನನಿತ್ಯದ ಕಳವಳವನ್ನು ಪ್ರತಿಬಿಂಬಿಸುತ್ತವೆ.

ವ್ಯಕ್ತಿಯೊಬ್ಬರಿಗೆ ಅವರ ಬಾಲ್ಕನಿಯಿಂದ ಕಾಣುವ ಹತ್ತಿರದ ಕಟ್ಟಡ ತಲುಪಲು ಬೇಕಾದ ಸಮಯ ಎಷ್ಟು ಗೊತ್ತಾ? ಬರೋಬ್ಬೆಇ 75 ನಿಮಿಷ..ಅಂದ್ರೆ 1 ಗಂಟೆ 15 ನಿಮಿಷಗಳ ಸಮಯ. ಇದು ಕೇವಲ ಒಂದು ಕಿಲೋಮೀಟರ್ನಷ್ಟು ದೂರವಾಗಿತ್ತು ಅಷ್ಟೇ. ಪಾದಚಾರಿ ಮಾರ್ಗಗಳ ಕೊರತೆಯಿಂದ ನಡೆದು ಹೋಗಲು ಸಾಧ್ಯವಾಗಲಿಲ್ಲ. ದ್ವಿಚಕ್ರ ವಾಹನದಿಂದ ಪ್ರಯತ್ನಿಸಿದರೆ ಕಾದಿದ್ದು ಮಾತ್ರ ಟ್ರಾಫಿಕ್ ಜಾಮ್ನ ನಿರಂತರ ಸರಣಿ!" ಎಂದು ಅವರು ತಿಳಿಸಿದ್ದಾರೆ.
ಅದರ ಜೊತೆ, ಅವರು ತಮ್ಮ ಹತಾಶೆಯಲ್ಲಿಯೇ ಬರೆದಿದ್ದರು..ನಾನು ಇದನ್ನು ಇನ್ನೂ ಸಹಿಸಲೇಹೇಗಾಗುತ್ತೆ ಎಂಬದು ನನಗೆ ಗೊತ್ತಿಲ್ಲ. ಈ ನಗರದಲ್ಲಿ ಸಂಚಾರ ವ್ಯವಸ್ಥೆ ಮತ್ತು ಮೂಲಸೌಕರ್ಯವಿಲ್ಲದ ಸ್ಥಿತಿ ಇದೀಗ ಅವಾಂತರದ ಹಂತ ತಲುಪಿದೆ." ಈ ಪೋಸ್ಟ್ ರೆಡ್ಡಿಟ್ನಲ್ಲಿ ಶತಕೋಟಿ ವೀಕ್ಷಣೆಗಳನ್ನು ಪಡೆಯಿತು, ಸಾವಿರಾರು ಜನರು ತಮ್ಮದೇ ಅನುಭವಗಳನ್ನು ಹಂಚಿಕೊಂಡರು.
ಇತ್ತೀಚಿನ ದಿನಗಳಲ್ಲಿ ಬಹುತೇಕ ದೊಡ್ಡ ಐಟಿ ಕಂಪನಿಗಳು ನಗರದ ಸಂಚಾರದ ತೀವ್ರತೆಯ ಮಧ್ಯದಲ್ಲೇ ಕಾರ್ಯನಿರ್ವಹಿಸುತ್ತಿವೆ. ಈ ಮೂಲಕವೇ ಹಲವರು ಈ ತಂತ್ರಜ್ಞಾನ ಕಂಪನಿಗಳು ತಮ್ಮ ಭಾಗದಿಂದ ಯಾವುದಾದರೂ ಇಳಿಸಿಕೊಡಬಹುದೇ?" ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವರು "ಕಂಪನಿಗಳು ತಮ್ಮ ಕ್ಯಾಂಪಸ್ಗಳ ಸುತ್ತಮುತ್ತ ಸಂಚಾರದ ತೊಂದರೆ ತಡೆಯಲು ಸ್ವಯಂಸೇವಕರನ್ನಾದರೂ ನಿಯೋಜಿಸಲಿ" ಎಂದು ಸಲಹೆ ನೀಡಿದ್ದಾರೆ.
ಇತ್ತೀಚಿನ ದಶಕಗಳಲ್ಲಿ ಬೆಂಗಳೂರಿನಲ್ಲಿ ಜನಸಂಖ್ಯೆ ಭಾರೀ ವೇಗದಲ್ಲಿ ಹೆಚ್ಚಾಗಿದೆ. 1.3 ಕೋಟಿ ಜನರು ಈಗ ಈ ನಗರದಲ್ಲಿ ನೆಲೆಸಿದ್ದಾರೆ. ಕೋಟ್ಯಂತರ ವಾಹನಗಳು ರಸ್ತೆಯಲ್ಲಿ ನಿತ್ಯ ಓಡಾಡುತ್ತಿದ್ದು, ಸಂಚಾರ ದಟ್ಟಣೆಯ ತೀವ್ರತೆಗೆ ಕಾರಣವಾಗಿವೆ. ಇನ್ನುಸುದ್ಧಿಗೆ, ಬೆದರಿಸುವಂಥದು ಎಂದರೆ, ರಸ್ತೆಗಳು ಇಂಗುಬಿಂಗು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಸಮರ್ಪಕ, ಮತ್ತೊಂದೆಡೆ ಅವಿರತ ಕಾಮಗಾರಿಗಳು ನಡೆಯುತ್ತಲೇ ಇವೆ.
ಮೆಟ್ರೋ ವಿಸ್ತರಣೆ, ಟ್ರಾಫಿಕ್ ನಿಯಂತ್ರಣ ಅಪ್ಲಿಕೇಶನ್ಗಳ ಪ್ರಯೋಗ ಮುಂತಾದ ಯೋಜನೆಗಳು ಇದ್ದರೂ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗದ ಸಮಸ್ಯೆ ಇದೆ. ಯೋಜನೆಗಳ ಅನುಷ್ಠಾನ ವಿಳಂಬ, ವಾಹನಗಳ ಅತಿರೇಕ, ಪಾದಚಾರಿ ಮಾರ್ಗಗಳ ಕೊರತೆ, ಇವೆಲ್ಲವೂ ಈ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿವೆ.
ಸರ್ಕಾರ, ಪಾಲಿಕೆ ಮತ್ತು ಖಾಸಗಿ ಕಂಪನಿಗಳು ಎಲ್ಲರೂ ಒಂದೇ ಪ್ಲಾಟ್ಫಾರ್ಮ್ನಲ್ಲಿ ಕೂಡಿ ಚರ್ಚೆ ನಡೆಸುವ ಅಗತ್ಯವಿದೆ. ತಾತ್ಕಾಲಿಕ ಪರಿಹಾರಗಳಲ್ಲ, ಬದಲಾಗಿ ಶಾಶ್ವತ ಹಾಗೂ ಸಮಗ್ರ ನಗರ ಯೋಜನೆಯ ಅಗತ್ಯವಿದೆ. ಮೆಟ್ರೋ, ಬಸ್, ಪಾದಚಾರಿ ಮಾರ್ಗ, ಸೈಕಲ್ ಹಾದಿಗಳು ಎಲ್ಲವೂ ಒಂದೇ ಮಾದರಿಯಲ್ಲಿ ಸಂಯೋಜನೆಗೊಂಡಾಗ ಮಾತ್ರ, ನಗರವು ತನ್ನ ನಿಜವಾದ ತಂತ್ರಜ್ಞಾನ ಕೇಂದ್ರದ ಹೆಸರಿಗೆ ತಕ್ಕಂತೆ ಬೆಳೆಯಲು ಸಾಧ್ಯವಾಗುವುದು.
More From GoodReturns

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications