ಮುಂಬೈ, ಏಪ್ರಿಲ್ 23: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿಂದ ಹಣಕಾಸು ವರ್ಷ 2023-24ರ ನಾಲ್ಕನೇ ತ್ರೈಮಾಸಿಕ (2024ರ ಜನವರಿಯಿಂದ ಮಾರ್ಚ್) ಫಲಿತಾಂಶವನ್ನು ಸೋಮವಾರದಂದು ಪ್ರಕಟಿಸಲಾಗಿದೆ. ಪ್ರತಿ ಷೇರಿಗೆ ಹತ್ತು ರೂಪಾಯಿ ಮಧ್ಯಂತರ ಲಾಭಾಂಶ ಘೋಷಣೆ ಮಾಡಲಾಗಿದೆ.
ಮಾರ್ಚ್ 31, 2024ಕ್ಕೆ ಕೊನೆಯಾದ ತ್ರೈ ಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಕಾರ್ಯಾಚರಣೆಯಿಂದ ಬಂದಂಥ ಏಕೀಕೃತ ಆದಾಯವು 2.40 ಲಕ್ಷ ಕೋಟಿ ರೂಪಾಯಿ ಆಗಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಾರುಕಟ್ಟೆ ಬಂಡವಾಳ ಮೌಲ್ಯದ ಲೆಕ್ಕದಲ್ಲಿ ಅತಿ ದೊಡ್ಡ ಕಂಪನಿಯಾದ ರಿಲಯನ್ಸ್ ವರ್ಷದ ಹಿಂದಿನ ಇದೇ ಅವಧಿಯಲ್ಲಿ (2023ರ ಜನವರಿಯಿಂದ ಮಾರ್ಚ್) 2.16 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಆಗಿನ ಮೊತ್ತಕ್ಕೆ ಹೋಲಿಸಿದಲ್ಲಿ ಈ ಬಾರಿ ಆದಾಯದಲ್ಲಿ ಶೇಕಡಾ 11ರಷ್ಟು ಹೆಚ್ಚಳವಾಗಿದೆ. 2024ರ ಜನವರಿಯಿಂದ ಮಾರ್ಚ್ ಅವಧಿಗೆ ಕಂಪನಿಯ ನಿವ್ವಳ ಲಾಭ 18,951 ಕೋಟಿ ರೂಪಾಯಿ ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ 19,299 ಕೋಟಿ ರೂಪಾಯಿ ಬಂದಿತ್ತು.

ಜಿಯೋ ಇನ್ಫೋಕಾಮ್
ರಿಲಯನ್ಸ್ ಜಿಯೋ ನಿವ್ವಳ ಲಾಭ 5,337 ಕೋಟಿ ರೂಪಾಯಿ ಬಂದಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 13ರಷ್ಟು ಹೆಚ್ಚಳವಾಗಿದೆ. 10.8 ಕೋಟಿಗೂ ಹೆಚ್ಚು ಚಂದಾದಾರರು ಜಿಯೋದ 5ಜಿ ನೆಟ್ ವರ್ಕ್ ಗೆ ಬದಲಾಗಿದ್ದಾರೆ. ಇನ್ನು ಜಿಯೋದ ಏರ್ ಫೈಬರ್ ಸೇವೆಯು 5,900 ನಗರಗಳು/ಪಟ್ಟಣಗಳಲ್ಲಿ ಸೇವೆ ಒದಗಿಸುತ್ತಿದೆ. ಜಿಯೋ ಪ್ರತಿ ಗ್ರಾಹಕರಿಂದ ಪಡೆಯುವಂಥ ಸರಾಸರಿ ಆದಾಯವು (ಎಆರ್ ಪಿಯು) 181.7 ರೂಪಾಯಿಗೆ ಏರಿಕೆಯಾಗಿದೆ.
ರಿಲಯನ್ಸ್ ಜಿಯೋ ಇನ್ಫೋಕಾಮ್ನ ಅಧ್ಯಕ್ಷರಾದ ಆಕಾಶ್ ಅಂಬಾನಿ ಮಾತನಾಡಿ, "ಜಿಯೋ ತನ್ನ ನೆಟ್ವರ್ಕ್ ನಾಯಕತ್ವವನ್ನು ನಿರ್ವಹಣೆ ಮುಂದುವರಿಸಿದೆ ಮತ್ತು ಬಹು ಗ್ರಾಹಕ ಸಮೂಹಗಳಿಗೆ ನವೀನ ಡಿಜಿಟಲ್ ಸಲ್ಯೂಷನ್ ಗಳನ್ನು ನೀಡುತ್ತದೆ. ಇದು ಚಂದಾದಾರರ ಸಂಖ್ಯೆಯ ಸೇರ್ಪಡೆ ಹಾಗೂ ತೊಡಗಿಕೊಳ್ಳುವ ಮಟ್ಟದಲ್ಲಿ ಸ್ಥಿರವಾದ ಕಾರ್ಯಕ್ಷಮತೆ ಹೆಚ್ಚಿಸುತ್ತಿದೆ. ಜಿಯೋಏರ್ ಫೈಬರ್ ಚಂದಾದಾರರ ನೆಲೆಯ ಬೆಳವಣಿಗೆಯಲ್ಲಿ ವೇಗವನ್ನು ಕಂಡಿದೆ ಮತ್ತು ಡಿಜಿಟಲ್ ಸೇವೆಗಳನ್ನು ಅತ್ಯುತ್ತಮವಾಗಿ ಒದಗಿಸುವುದರಿಂದ ಜಿಯೋಗೆ ಉದ್ಯಮದ-ಪ್ರಮುಖ ಬೆಳವಣಿಗೆಯನ್ನು ಉಳಿಸಿಕೊಳ್ಳುತ್ತದೆ," ಎಂದು ಹೇಳಿದರು.
ರಿಲಯನ್ಸ್ ರೀಟೇಲ್
ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ಆರ್ ವಿಎಲ್) ನಿವ್ವಳ ಲಾಭವು ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 11.7ರಷ್ಟು ಏರಿಕೆಯಾಗಿದ್ದು, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಬಂದಿದ್ದ 2,415 ಕೋಟಿ ರೂಪಾಯಿಗಳ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇಕಡಾ 11.7ರಷ್ಟು ಹೆಚ್ಚಳವಾಗಿ 2,698 ಕೋಟಿ ರೂಪಾಯಿಗೆ ತಲುಪಿದೆ. ಕಾರ್ಯಾಚರಣೆಯಿಂದ ಬರುವಂಥ ಆದಾಯವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 9.8ರಷ್ಟು ಏರಿಕೆಯಾಗಿ, 67,610 ಕೋಟಿ ರೂಪಾಯಿ ಮುಟ್ಟಿದೆ. ಇಷ್ಟು ಉತ್ತಮವಾದ ಫಲಿತಾಂಶ ಬರುವುದಕ್ಕೆ ದಿನಸಿ, ಫ್ಯಾಷನ್, ಲೈಫ್ ಸ್ಟೈಲ್ ಹಾಗೂ ಗ್ರಾಹಕ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿನ ಅತ್ಯುತ್ತಮ ಮಾರಾಟ ಕೊಡುಗೆ ನೀಡಿದೆ. ಇದೇ ಮೊದಲ ಬಾರಿಗೆ 3 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2,60,394 ಕೋಟಿ ರೂಪಾಯಿ ಬಂದಿತ್ತು.
ಮಾಧ್ಯಮ ವ್ಯವಹಾರ
ಮಾಧ್ಯಮ ವ್ಯವಹಾರದಲ್ಲಿ ತ್ರೈಮಾಸಿಕ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 63ರಷ್ಟು ಏರಿಕೆಯಾಗಿದ್ದು, 2,419 ಕೋಟಿ ರೂಪಾಯಿ ಬಂದಿದೆ. ಕ್ರೀಡೆ, ಸಿನಿಮಾ ಹಾಗೂ ಸುದ್ದಿ ವರ್ಟಿಕಲ್ ಗಳು ಇಂಥ ಆದಾಯ ತಂದುಕೊಂಡಿದೆ. ಸುದ್ದಿ ವ್ಯವಹಾರದಲ್ಲಿ ವರ್ಷದಿಂದ ವರ್ಷಕ್ಕೆ ಆದಾಯ ಶೇಕಡಾ ಇಪ್ಪತ್ತೈದರಷ್ಟು ಹೆಚ್ಚಾಗಿದೆ. ವಯಾಕಾಮ್ 18 ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 83ರಷ್ಟು ಹೆಚ್ಚಾಗಿದೆ.
ತೈಲದಿಂದ ರಾಸಾಯನಿಕ
ರಿಲಯನ್ಸ್ ನ ತೈಲದಿಂದ ರಾಸಾಯನಿಕ ತನಕ ವಿಭಾಗದಲ್ಲಿ ಆದಾಯವು ಶೇಕಡಾ 10.9ರಷ್ಟು ಏರಿಕೆಯಾಗಿ, 1,42,634 ಕೋಟಿ ರೂಪಾಯಿ ಬಂದಿದೆ. ಈ ತ್ರೈಮಾಸಿಕದಲ್ಲಿ ಇಬಿಐಟಿಡಿಎ 16,777 ಕೋಟಿ ರೂಪಾಯಿ ಬಂದಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 3ರಷ್ಟು ಏರಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಅಂಬಾನಿ ಅವರು ರಿಲಯನ್ಸ್ ರೀಟೇಲ್ ಫಲಿತಾಂಶದ ಬಗ್ಗೆ ಮಾತನಾಡಿ, ರಿಲಯನ್ಸ್ ರೀಟೇಲ್ ತನ್ನ ದೃಢವಾದ ಓಮ್ನಿ-ಚಾನೆಲ್ ಅಸ್ತಿತ್ವದ ಮೂಲಕ ಗ್ರಾಹಕರಿಗೆ ಅಂತ್ಯವಿಲ್ಲದ ಆಯ್ಕೆಗಳನ್ನು ಒದಗಿಸುವುದನ್ನು ಮುಂದುವರೆಸಿದೆ. ಸ್ಟೋರ್ಗಳನ್ನು ಮರುರೂಪಿಸುವುದು, ಲೇಔಟ್ಗಳ ಪರಿಷ್ಕರಣೆ ಮೂಲಕ ಉತ್ಪನ್ನದ ವ್ಯತ್ಯಾಸ ಮತ್ತು ಉತ್ತಮ ಆಫ್ಲೈನ್ ಅನುಭವವನ್ನು ನಾವು ನೀಡುವುದನ್ನು ಮುಂದುವರಿಸುತ್ತೇವೆ. ನಮ್ಮ ಡಿಜಿಟಲ್ ವಾಣಿಜ್ಯ ವೇದಿಕೆಗಳು ವಿಶಾಲ ಬ್ರ್ಯಾಂಡ್ ಕ್ಯಾಟಲಾಗ್ನೊಂದಿಗೆ ಬಳಕೆದಾರರಿಗೆ ಹೊಸ ಸಲ್ಯೂಷನ್ ಗಳನ್ನು ಸಹ ಒದಗಿಸುತ್ತವೆ. ರಿಲಯನ್ಸ್ ರೀಟೇಲ್ ಹೊಸ ವಾಣಿಜ್ಯ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ಉಪಕ್ರಮಗಳ ಮೂಲಕ ಲಕ್ಷಾಂತರ ವ್ಯಾಪಾರಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ
ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ಫಲಿತಾಂಶ ಪ್ರಕಟವಾದ ಏಪ್ರಿಲ್ 22ನೇ ತಾರೀಕಿನ ಸೋಮವಾರದಂದು ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಪ್ರತಿ ಷೇರಿನ ಮೌಲ್ಯ ದಿನದ ಕೊನೆಗೆ ಬಿಎಸ್ಇಯಲ್ಲಿ 2,960.60 ರೂಪಾಯಿಗೆ ಕೊನೆಗೊಂಡಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications