ದ್ವೈ-ವಾರ್ಷಿಕ ಲಾಲ್ಬಾಗ್ ಪುಷ್ಪ ಪ್ರದರ್ಶನವು ಭಾನುವಾರ ಮುಕ್ತಾಯಗೊಂಡಿದೆ. 11 ದಿನಗಳ ಪ್ರಮುಖ ಕಾರ್ಯಕ್ರಮವು 5.6 ಲಕ್ಷ ಸಂದರ್ಶಕರನ್ನು ಸೆಳೆದಿದೆ. ಹಾಗೆಯೇ ಟಿಕೆಟ್ ಮೂಲಕ 2.6 ಕೋಟಿ ರೂಪಾಯಿ ಸಂಗ್ರಹವಾಗಿದೆ. ಪಾಸ್ ಹೊಂದಿರುವವರು, ಶಾಲಾ ಮಕ್ಕಳು ಮತ್ತು ಟಿಕೆಟ್ ಪಡೆದ ಸಂದರ್ಶಕರು ಸೇರಿದಂತೆ, ಅಂತಿಮ ದಿನ 76,000 ಜನ ಸೇರಿದ್ದಾರೆ.
12ನೇ ಶತಮಾನದ ತತ್ವಜ್ಞಾನಿ ಬಸವೇಶ್ವರರ ವಿಷಯವಾಗಿ ನಡೆದ ಈ ಪುಷ್ಪ ಪ್ರದರ್ಶನ ಅಪಾರ ಜನಸ್ತೋಮವನ್ನು ಸೆಳೆಯಿತು ಮತ್ತು ಅನೇಕರಿಗೆ ಸ್ಫೂರ್ತಿ ನೀಡಿತು. ಗ್ಲಾಸ್ ಹೌಸ್ನಲ್ಲಿ ಮತ್ತು ಅದರ ಸುತ್ತಲೂ ಇರಿಸಲಾದ ಮಧ್ಯಮ ಗಾತ್ರದ ಬೋರ್ಡ್ಗಳು ಬಸವೇಶ್ವರರ ಬಾಲ್ಯ, ಆರಂಭಿಕ ಪ್ರೌಢಾವಸ್ಥೆ ಮತ್ತು ಆಧ್ಯಾತ್ಮಿಕ ನಾಯಕನಾಗಿ ರೂಪಾಂತರಗೊಂಡ ಕಥೆಗಳನ್ನು ವಿವರಿಸುತ್ತವೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಬರುತ್ತಿರುವ ಅನುಭವ ಮಂಟಪದ ಮಾದರಿ ಮತ್ತು ಬಸವೇಶ್ವರ ಮತ್ತು ಅವರ ಅನುಯಾಯಿಗಳ ವಿಚಾರ ವಿನಿಮಯಕ್ಕಾಗಿ ಸಂಸತ್ತಿನ ಅನುಭವ ಮಂಟಪದ ಮಾದರಿಯನ್ನು ಪ್ರದರ್ಶನ ಮಾಡಲಾಗಿದೆ.
ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಜಯನಗರದ ಬಳಿ ವಾಸಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ನಿಕಿತಾ ಪಾಠಕ್, "ಈ ಬಾರಿಯ ಥೀಮ್ ಇಷ್ಟವಾಯಿತು ಮತ್ತು ಅನುಭವವು ಭಾವನಾತ್ಮಕವಾಗಿದೆ. ಪುಷ್ಪ ಪ್ರದರ್ಶನವು ಯಾವಾಗಲೂ ಸುಂದರವಾಗಿರುತ್ತದೆ ಮತ್ತು ನಾನು ಇಲ್ಲಿನ ಸ್ಟಾಲ್ಗಳಲ್ಲಿ ಶಾಪಿಂಗ್ ಮಾಡಲು ಇಷ್ಟಪಡುತ್ತೇನೆ. ಆದರೆ ಈ ವರ್ಷದ ಥೀಮ್ ಸಾಮಾಜಿಕ ಕಾರ್ಯಕರ್ತನಾಗಿ ನನಗೆ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಪ್ರಯಾಣವಾಗಿದೆ," ಎಂದು ತಿಳಿಸಿದರು.
ಗ್ಲಾಸ್ ಹೌಸ್ ಜಿನ್ನಿಯಾಸ್, ಜರ್ಬೆರಾಸ್, ಜೆರೇನಿಯಂಗಳು, ಕ್ರೈಸಾಂಥೆಮಮ್ಗಳು, ಗುಲಾಬಿಗಳು, ಮಾರಿಗೋಲ್ಡ್ಗಳು ಇತ್ಯಾದಿಗಳಿಂದ ವಿನ್ಯಾಸಗೊಂಡ ಪ್ರದರ್ಶನಗಳನ್ನು ಸಹ ಹೊಂದಿತ್ತು. ಪ್ರವಾಸಿಗರು ವಯಸ್ಕರಿಗೆ 80 ರೂಪಾಯಿಗಳ (ವಾರಾಂತ್ಯದಲ್ಲಿ 100 ರೂಪಾಯಿ) ಮತ್ತು ಮಕ್ಕಳಿಗೆ 30 ರೂಪಾಯಿಗಳ ಟಿಕೆಟ್ಗಳೊಂದಿಗೆ ಪುಷ್ಪ ಪ್ರದರ್ಶನವನ್ನು ಪ್ರವೇಶಿಸಬಹುದು.
ತೋಟಗಾರಿಕಾ ಇಲಾಖೆಯಿಂದ ಬೆಳೆದ 3,000 ಮಾರಿಗೋಲ್ಡ್ ಹೂವಿನ ಕುಂಡಗಳಲ್ಲಿ 2,000 ಮಾರಿಗೋಲ್ಡ್ ಹೂವಿನ ಕುಂಡಗಳಲ್ಲಿ ತೊಂದರೆ ಇದ್ದರೂ ಕೂಡಾ ಇಲಾಖೆಯು ಖಾಸಗಿ ನರ್ಸರಿಗಳಿಂದ ಇಷ್ಟೇ ಸಂಖ್ಯೆಯ ಹೂವುಗಳನ್ನು ಪಡೆಯುವ ಮೂಲಕ ಬಿಕ್ಕಟ್ಟನ್ನು ನಿರ್ವಹಿಸಿದೆ. "ಪ್ರದರ್ಶನವು ಉತ್ತಮ ಯಶಸ್ಸನ್ನು ಕಂಡಿದೆ. ಯಾವುದೇ ದೂರುಗಳು ಬಂದಿಲ್ಲ ಮತ್ತು ಹೂವುಗಳು ಇನ್ನೂ ತಾಜಾವಾಗಿ ಕಾಣುತ್ತಿವೆ," ಎಂದು ಲಾಲ್ಬಾಗ್ನ ಉಪ ನಿರ್ದೇಶಕಿ ಕುಸುಮಾ ಜಿ ಹೇಳಿದರು.


Click it and Unblock the Notifications