ಚಿಲ್ಲರೆ ಹಣದುಬ್ಬರವನ್ನು ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕಹಾಕಲಾಗಿದ್ದು, ಜನವರಿಯಲ್ಲಿ ಇದು 7.59 ಪರ್ಸೆಂಟ್ಗೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಂಕಿ ಅಂಶ ಕಚೇರಿ (ಎನ್ಎಸ್ಒ) ಬುಧವಾರ ಬಿಡುಗಡೆ ಮಾಡಿದೆ. ಇದು 2014 ರ ಮೇ ತಿಂಗಳ ನಂತರ ಅತಿ ಹೆಚ್ಚು ಹಣದುಬ್ಬರ ದರವಾಗಿದ್ದು,ಅಂದು 8.33 ಪರ್ಸೆಂಟ್ರಷ್ಟಿತ್ತು.

ಸತತ ಎರಡು ತಿಂಗಳು ಆರ್ಬಿಐ ನಿಗದಿಪಡಿಸಿದ್ದಕ್ಕಿಂತ ಚಿಲ್ಲರೆ ಹಣದುಬ್ಬರುವ ಹೆಚ್ಚಾಗಿದೆ. ಆರ್ಬಿಐ 6 ಪರ್ಸೆಂಟ್ ಹಣದುಬ್ಬರವನ್ನು ನಿಗದಿ ಮಾಡಿತ್ತು. ಇದು 2019 ರ ಡಿಸೆಂಬರ್ನಲ್ಲಿ 7.35 ಕ್ಕೆ ನಿಗದಿಪಡಿಸಲಾಗಿದೆ. ಜನವರಿ 2019 ರಲ್ಲಿ 1.97 ಪರ್ಸೆಂಟ್ರಷ್ಟಿದೆ.
ಹಣದುಬ್ಬರ ಅಂಕಿಅಂಶಗಳ ಏರಿಕೆ ಆಹಾರದ ಬೆಲೆಯಲ್ಲಿ ತೀವ್ರ ಏರಿಕೆಯ ಹಿನ್ನೆಲೆಯಲ್ಲಿ ಹೆಚ್ಚಾಗುತ್ತದೆ. 2019 ರ ಜನವರಿಯಲ್ಲಿ ದಾಖಲಾದ (-) 2.24 ಪರ್ಸೆಂಟ್ಗೆ ಹೋಲಿಸಿದರೆ, ಜನವರಿ 2020 ರ ಆಹಾರ ಬೆಲೆ ಹಣದುಬ್ಬರವು 13.63 ಪರ್ಸೆಂಟ್ರಷ್ಟಿದೆ. ಆದರೆ ಇದು 2019 ರ ಡಿಸೆಂಬರ್ನಲ್ಲಿ ಕಂಡುಬರುವ 14.19 ಪರ್ಸೆಂಟ್ಗಿಂತ ಸ್ವಲ್ಪ ಕಡಿಮೆಯಾಗಿದೆ.

ತರಕಾರಿ ಬೆಲೆಗಳು 50.19 ಪರ್ಸೆಂಟ್ರಷ್ಟು ಹಬೆಲೆಯಲ್ಲಿ ಅತ್ಯಧಿಕ ಬೆಳವಣಿಗೆಯನ್ನು ಕಂಡಿವೆ. ನಂತರ ದ್ವಿದಳ ಧಾನ್ಯಗಳು ಮತ್ತು ಉತ್ಪನ್ನಗಳು 16.71 ಪರ್ಸೆಂಟ್ ಹೆಚ್ಚಾಗಿದೆ. ಮಾಂಸ, ಮೀನು ಮತ್ತು ಮೊಟ್ಟೆಗಳಂತಹ ಪ್ರೋಟೀನ್ ಉತ್ಪನ್ನಗಳ ವೆಚ್ಚವು 2020 ರ ಜನವರಿಯಲ್ಲಿ 10 ಪರ್ಸೆಂಟ್ಕ್ಕಿಂತಲೂ ಹೆಚ್ಚು ಉಳಿದಿದೆ.
ಇದರ ಜೊತೆಗೆ ವಸತಿ ಮತ್ತು ಆರೋಗ್ಯ ವಿಭಾಗಗಳಲ್ಲಿನ ಬೆಲೆಗಳು ವಾರ್ಷಿಕ ಆಧಾರದ ಮೇಲೆ 4.2 ಪರ್ಸೆಂಟ್ರಷ್ಟು ಏರಿಕೆಯಾದರೆ, 2020 ರ ಜನವರಿಯಲ್ಲಿ ಶಿಕ್ಷಣವು 3.93 ಪರ್ಸೆಂಟ್ರಷ್ಟು ದುಬಾರಿಯಾಗಿದೆ.
More From GoodReturns

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications