ನವದೆಹಲಿ, ಫೆಬ್ರವರಿ 3: ಇಶಾ ಅಂಬಾನಿಯವರ ರಿಲಯನ್ಸ್ ರಿಟೇಲ್ ಮತ್ತು ಗೂಗಲ್ ಬೆಂಬಲಿತ ಡಂಝೋ ಈಗ ಸಾಕಷ್ಟು ಸಮಯದಿಂದ ಲಿಕ್ವಿಡಿಟಿ ಸಮಸ್ಯೆಯನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಕಂಪೆನಿಯಲ್ಲಿ ನೌಕರರಿಗೆ ವೇತನ ವಿಳಂಬದಂತಹ ಸಮಸ್ಯೆಗಳು ಎದುರಾಗಿವೆ.
ಯುವರ್ಸ್ಟೋರಿಯ ಇತ್ತೀಚಿನ ವರದಿಯ ಪ್ರಕಾರ, ಸ್ಟಾರ್ಟಪ್ ಹಲವು ಮಾಜಿ ಉದ್ಯೋಗಿಗಳ ಸಂಬಳವನ್ನು ಬಹಳ ಸಮಯದಿಂದ ವಿಳಂಬಗೊಳಿಸುತ್ತಿದೆ. ಮಾರ್ಚ್ 30 ರೊಳಗೆ ಕೊನೆಗೊಳ್ಳುವ ಅಂತಿಮ ಸೆಟಲ್ಮೆಂಟ್ಗಳನ್ನು ವಿತರಿಸಲಾಗುವುದು ಎಂದು ಕಂಪನಿಯು ಈಗ ಹೇಳಿಕೊಂಡಿದೆ. ಇಶಾ ಅಂಬಾನಿಯ ರಿಲಯನ್ಸ್ ರೀಟೇಲ್ ಮತ್ತು ಗೂಗಲ್ ಬೆಂಬಲಿತ ಕಂಪನಿಯು ಮಾಜಿ ಉದ್ಯೋಗಿಗಳಿಗೆ ಪತ್ರವನ್ನು ಕಳುಹಿಸಿದೆ. ಅದರಲ್ಲಿ ತಾನು ಕಮಿಟ್ಮೆಂಟ್ಗಳನ್ನು ಇಟ್ಟುಕೊಂಡಿಲ್ಲ ಎಂಬ ಅಂಶವನ್ನು ಒಪ್ಪಿಕೊಂಡಿದೆ ಎಂದು ವರದಿ ಹೇಳಿದೆ.

ಸೂಕ್ತ ಸಮಯದಲ್ಲಿ ಬಾಕಿಗಳನ್ನು ಇತ್ಯರ್ಥಪಡಿಸಲಾಗಿಲ್ಲ ಎಂದು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಈ ವಿಳಂಬವು ನಿಮಗೆ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಪರಿಣಾಮ ಬೀರಬಹುದು. ಈ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಮತ್ತು ನಿಮ್ಮ ಕ್ಷಮೆಯನ್ನು ಬೇಡಿಕೊಳ್ಳುತ್ತೇವೆ. ವಿಳಂಬ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ ಮತ್ತು ನಾವು ಯಾವಾಗಲೂ ಎಲ್ಲಾ ತಂಡದ ಸದಸ್ಯರನ್ನು ಡಂಜೊದಲ್ಲಿ ಹೆಚ್ಚಿನ ಆದ್ಯತೆಯಾಗಿ ಇರಿಸಿದ್ದೇವೆ ಎಂದು ಯುವರ್ಸ್ಟೋರಿಗೆ ಕಳುಹಿಸಿದ ಇಮೇಲ್ನಲ್ಲಿ ಅದು ಹೇಳಿದೆ.
Dunzo ಕಳೆದ ವರ್ಷದಲ್ಲಿ ತಮ್ಮ ಉದ್ಯೋಗಿಗಳ ಸಂಬಳವನ್ನು ಹಲವು ಬಾರಿ ವಿಳಂಬಗೊಳಿಸಿದ್ದಾರೆ. 2023 ರಲ್ಲಿ 1,800 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ, ಇದು ಹಿಂದಿನ ವರ್ಷಕ್ಕಿಂತ 288 ಶೇಕಡಾ ಹೆಚ್ಚಳವಾಗಿದೆ. ಸಹ-ಸಂಸ್ಥಾಪಕರು ಮತ್ತು ಅದರ ಹಣಕಾಸು ಮುಖ್ಯಸ್ಥರು ಸೇರಿದಂತೆ ಹಲವಾರು ಉನ್ನತ ಮಟ್ಟದ ಕಾರ್ಯನಿರ್ವಾಹಕರ ನಿರ್ಗಮನದಿಂದ ಕಂಪನಿಗೆ ಹೊಡೆತ ಬಿದ್ದಿದೆ.
2014 ರಲ್ಲಿ ಕಬೀರ್ ಬಿಸ್ವಾಸ್, ಅಂಕುರ್ ಅಗರ್ವಾಲ್, ದಲ್ವಿರ್ ಸೂರಿ ಮತ್ತು ಮುಕುಂದ್ ಝಾ ಸ್ಥಾಪಿಸಿದ ಈ ಸ್ಟಾರ್ಟ್ಅಪ್ ಹಲವಾರು ಸುತ್ತಿನ ಹಣವನ್ನು ಸಂಗ್ರಹಿಸಿತು. ಗೂಗಲ್ ಮತ್ತು ಲೈಟ್ಬಾಕ್ಸ್ನಂತಹ ದೈತ್ಯರಿಂದ ಆಸಕ್ತಿಯನ್ನು ಪಡೆದುಕೊಂಡಿತು. ಇಶಾ ಅಂಬಾನಿಯವರ ರಿಲಯನ್ಸ್ ರಿಟೇಲ್ ಕಳೆದ ವರ್ಷ ಜನವರಿಯಲ್ಲಿ ಸುಮಾರು 1641 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಡಂಜೊದಲ್ಲಿ ಸುಮಾರು 25% ಪಾಲನ್ನು ಖರೀದಿಸಿತು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications