ಸೋನಿ ಗ್ರೂಪ್ ಕಾರ್ಪ್ ತನ್ನ ಭಾರತ ಘಟಕ ಮತ್ತು ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ನಡುವಿನ ಬಹು ನಿರೀಕ್ಷಿತ ವಿಲೀನವನ್ನು ರದ್ದುಗೊಳಿಸಲು ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ಇದು ಸುಮಾರು 10 ಬಿಲಿಯನ್ ಡಾಲರ್ನ ಮೀಡಿಯಾ ಹೌಸ್ ರಚಿಸುವ ಒಪ್ಪಂದವಾಗಿದೆ.
ವಿಲೀನಗೊಂಡ ಘಟಕದ ನಾಯಕತ್ವದ ಬಗೆಗಿನ ವಿವಾದವು ಇದೆ. ಆದರೆ ಈ ವಿವಾದವು ಇನ್ನು ಕೂಡಾ ಬಗೆಹರಿದಿಲ್ಲ. ಈ ನಡುವೆ ಜಪಾನಿನ ಸಂಘಟಿತ ಸಂಸ್ಥೆಯು ಈ ಒಪ್ಪಂದವನ್ನು ಮುಕ್ತಾಯ ಮಾಡುವ ಯೋಚನೆಯನ್ನು ಮಾಡುತ್ತಿದೆ ಬ್ಲೂಮ್ಬರ್ಗ್ ವರದಿ ಬಹಿರಂಗಪಡಿಸಿದರು.

ಝೀನ ಸಿಇಒ, ಸಂಸ್ಥಾಪಕರ ಮಗನೂ ಆಗಿರುಯವ ಪುನಿತ್ ಗೋಯೆಂಕಾ ಈ ಒಪ್ಪಂದದ ಬೆನ್ನೆಲುಬಾಗಿದ್ದಾರೆ. 2021 ರ ಒಪ್ಪಂದದ ಪ್ರಕಾರ ಹೊಸ ಕಂಪನಿಯನ್ನು ಮುನ್ನಡೆಸಲು ಆರಂಭದಲ್ಲಿ ಯೋಜಿಸಲಾಗಿತ್ತು. ಈಗ ನಡೆಯುತ್ತಿರುವ ನಿಯಂತ್ರಕ ತನಿಖೆಯ ನಡುವೆ ಗೋಯೆಂಕಾ ಘಟಕವನ್ನು ಮುನ್ನಡೆಸಲು ಸೋನಿ ಬಯಸುವುದಿಲ್ಲ.
ಸೋನಿ ಒಪ್ಪಂದವನ್ನು ಕೊನೆ ಮಾಡಲು ಜನವರಿ 20 ರ ವಿಸ್ತೃತ ಗಡುವಿನ ಮೊದಲು ಮುಕ್ತಾಯದ ಸೂಚನೆಯನ್ನು ಸಲ್ಲಿಸಲು ಉದ್ದೇಶಿಸಿದೆ ಎಂದು ಬ್ಲೂಮ್ಬರ್ಗ್ ಮೂಲಗಳು ಸೂಚಿಸುತ್ತದೆ. ವಿಲೀನಕ್ಕೆ ಅಗತ್ಯವಾದ ಷರತ್ತುಗಳನ್ನು ಸಮರ್ಥನೆಯಾಗಿ ಉಲ್ಲೇಖಿಸಿಲಾಗಿದೆ. ಮುಂಬರುವ ಗಡುವಿನ ಹೊರತಾಗಿಯೂ, ಎರಡು ಸಂಸ್ಥೆಗಳ ನಡುವೆಯೂ ಚರ್ಚೆ ಇನ್ನೂ ಮುಗಿದಿಲ್ಲ.
ಪುನಿತ್ ಗೋಯೆಂಕಾ ಈ ಸುದ್ದಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಆರಂಭದಲ್ಲಿ ಒಪ್ಪಿಕೊಂಡಂತೆ ವಿಲೀನ ಘಟಕವನ್ನು ಮುನ್ನಡೆಸುವ ಬಯಕೆಯಲ್ಲಿ ದೃಢವಾಗಿ ನಿಂತಿದ್ದಾರೆ ಎಂದು ವರದಿಯಾಗಿದೆ. ಕಳೆದ ಕೆಲವು ವಾರಗಳಲ್ಲಿ ನಡೆದ ವಿಸ್ತೃತ ಸಭೆಗಳ ಬಳಿಕವೂ ಒಮ್ಮತಕ್ಕೆ ಬರಲು ವಿಫಲವಾಗಿದೆ. ಸದ್ಯಕ್ಕೆ, ಸೋನಿ ಅಥವಾ ಝೀ ಅಧಿಕೃತವಾಗಿ ಈ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಆದರೆ ಮಧ್ಯಸ್ಥಗಾರರು ಮತ್ತು ಉದ್ಯಮ ವೀಕ್ಷಕರು 10 ಬಿಲಿಯನ್ ಡಾಲರ್ನ ಮಾಧ್ಯಮ ವಿಲೀನದ ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದಾರೆ. ಈ ಕೊನೆಯ ನಿಮಿಷದ ನಾಯಕತ್ವದ ಗೊಂದಲದಿಂದಾಗಿ ಒಪ್ಪಂದವು ಮುರಿದು ಬೀಳುವಂತಿದೆ. ಈ ನಡುವೆ ಬಿಲಿಯನೇರ್ ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮಾಧ್ಯಮ ಮಹತ್ವಾಕಾಂಕ್ಷೆಗಳನ್ನು ಬಲಪಡಿಸಲು ವಾಲ್ಟ್ ಡಿಸ್ನಿ ಕಂಪನಿಯ ಭಾರತ ಘಟಕದೊಂದಿಗೆ ವಿಲೀನದ ಮಾತುಕತೆ ಮಾಡುತ್ತಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications