Ramanavami 2025: ಅಯೋಧ್ಯೆಯಲ್ಲಿ ರಾಮನವಮಿ, ಬಾಲರಾಮನ ಹಣೆ ಮೇಲೆ ಸೂರ್ಯರಶ್ಮಿ..ಹೇಗಿರಲಿದೆ ಇಂದಿನ ವಿಶೇಷ ಪೂಜೆ..!

ಇಂದು ದೇಶದೆಲ್ಲೆಡೆ ಶ್ರೀರಾಮನವಮಿಯ ಸಂಭ್ರಮ ಮನೆ ಮಾಡಿದೆ. ಮರ್ಯಾದಾ ಪುರುಷ ಶ್ರೀ ರಾಮನನ್ನು ನೆನೆದು, ಭಕ್ತರು ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಇಂದು ದೇಶದಲ್ಲಿರುವ ಶ್ರೀರಾಮನ ದೇಗುಲ ಹಾಗೂ ಆಂಜನೇಯನ ದೇಗುಲಗಳು ವಿಶೇಷವಾಗಿ ಅಲಂಕೃತಗೊಂಡಿರುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇರುತ್ತದೆ. ವಿಶೇಷ ಆಲಂಕಾರಿಕ ಅಲಂಕಾರಗಳೊಂದಿಗೆ ಇಂದು ಬೆಳಗ್ಗೆಯಿಂದಲೇ ಅಭಿಷೇಕ ಮತ್ತು ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ನೂರಾರು ಭಕ್ತರು ಬೆಳಗಿನ ಜಾವದಿಂದಲೇ ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಭಕ್ತಿ ಮತ್ತು ಶ್ರದ್ಧೆಯ ಭಾವದಲ್ಲಿ ಮುಳುಗಿದ್ದು, ದೇವಾಲಯಗಳಲ್ಲಿ ವಿಜೃಂಭಣೆಯ ಆಚರಣೆ ನಡೆಯುತ್ತಿದೆ. ಈ ದಿನ ದೇವಸ್ಥಾನಗಳಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿಯನ್ನು ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ.

Ramanavami 2025: ಅಯೋಧ್ಯೆ ಬಾಲ ರಾಮನ ಹಣೆ ಮೇಲೆ ಸೂರ್ಯರಶ್ಮಿ..!

ಅಯೋಧ್ಯೆಯಲ್ಲಿ ವಿಶೇಷ ಪೂಜೆ:

ಈ ದಿನ ಪುಷ್ಯಾ ನಕ್ಷತ್ರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಇಂದು ವಿಶೇಷ ಸಂಭ್ರಮ ಇರುತ್ತದೆ. ರಾಮಲಲ್ಲಾ ಗರ್ಭಗುಡಿಯಲ್ಲಿ ದರ್ಶನ ಪಡೆಯಲು ದೇಶದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ

ಸೂರ್ಯ ರಶ್ಮಿ ದೃಶ್ಯಕ್ಕೆ ಭಕ್ತರ ಕಾತುರ:

ರಾಮನವಮಿ ಹಿನ್ನೆಲೆ ಇಂದು ಅಯೋಧ್ಯೆ ಶ್ರೀರಾಮಮಂದಿರಕ್ಕೆ ಭಕ್ತ ಸಾಗರವೇ ಬರಲಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಬಾಲರಾಮನ ವಿಗ್ರಹದ ಹಣೆ ಮೇಲೆ ಸೂರ್ಯ ರಶ್ಮಿ ಬೀಳಲಿದೆ. ಅದನ್ನು ನೋಡಲು ಭಕ್ತಗಣ ಕಾತುರದಲ್ಲಿದೆ. ಈ ಸ್ಮರಣೀಯ ದೃಶ್ಯ ಭಕ್ತರ ಭಾವನೆಯನ್ನು ಮತ್ತಷ್ಟು ಗಾಢಗೊಳಿಸಲಿದೆ.

ಅಯೋಧ್ಯೆಯಲ್ಲಿ ಜನ ಸಾಮಾನ್ಯರಿಗೆ ಆದ್ಯತೆ:

ಈ ಬಾರಿ ವಿಶೇಷ ಪಾಸ್‌ಗಳಿಗೆ ನಿರ್ಬಂಧ ಹೇರಲಾಗಿದೆ. ರಾಮ ಮಂದಿರದಲ್ಲಿ ಜನಸಾಮಾನ್ಯರಿಗೆ ಹೆಚ್ಚು ಆದ್ಯತೆ ಕಲ್ಪಿಸಲಾಗಿದೆ. ರಾಮಮಂದಿರದ ಪ್ರವೇಶ ವ್ಯವಸ್ಥೆಯು ಸಹ ನಿಯಂತ್ರಿತವಾಗಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನದವರೆಗೆ ಎಲ್ಲಾ ವಿಶೇಷ ಪಾಸ್‌ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಭದ್ರತಾ ದೃಷ್ಟಿಯಿಂದ NDRF, SDRF ಹಾಗೂ ಸ್ಥಳೀಯ ಪೊಲೀಸರು ಸರಯೂ ನದಿಯ ಸುತ್ತಮುತ್ತ ಕಾವಲು ನಿಲ್ಲಿಸಿದ್ದಾರೆ.

ಅಯೋಧ್ಯೆಯಲ್ಲಿ ಭದ್ರತೆ:

ಇಂದು ರಾಮನವಮಿ ಆದ್ದರಿಂದ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಸಾಮಾನ್ಯವಾಗಿ ವಿಶೇಷ ಪೂಜೆ ಇದ್ದೇ ಇರುತ್ತದೆ. ಹೀಗಾಗಿ ಈ ಬಾರಿ ಹೆಚ್ಚು ಜನಸಂದಣಿ ಇರುವ ಹಿನ್ನೆಲೆ, ಅಯೋಧ್ಯೆಯ ವಿವಿಧ ವಲಯಗಳನ್ನು ವಿಂಗಡಿಸಿ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ. ಮಹಾಕುಂಭ ಮೇಳದ ಅನುಭವದೊಂದಿಗೆ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಮೂಲಕ ಭಾರಿ ವಾಹನಗಳನ್ನು ವಾಪಸ್ಸು ಕಳುಹಿಸುವ ತಂತ್ರಜ್ಞಾನವನ್ನು ಜಾರಿಗೆ ತರುವ ಮೂಲಕ ದಟ್ಟಣೆಯನ್ನು ನಿಯಂತ್ರಿಸಲಾಗುತ್ತಿದೆ ಎಂದು ಅಯೋಧ್ಯೆ ಐಜಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಪಾರದರ್ಶಕ ನೀರಿನ ಬಾಟಲಿಗೆ ಅವಕಾಶ:

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಭಕ್ತರ ಅನುಕೂಲಕ್ಕಾಗಿ ಪಾರದರ್ಶಕ ನೀರಿನ ಬಾಟಲಿಗಳನ್ನು ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಿದೆ. ಈ ನಿರ್ಧಾರವನ್ನು ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಘೋಷಿಸಿದ್ದಾರೆ. ಬಿಸಿಲು ಮತ್ತು ಉಷ್ಣತೆಗೆ ತಕ್ಕಂತೆ, ರಾಮಮಂದಿರದ ಸುತ್ತಲಿನ ಪ್ರದೇಶಗಳಲ್ಲಿ ನೆರಳು ನೀಡುವ ಶೆಡ್ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಪ್ರಥಮಚಿಕಿತ್ಸೆ ಕೇಂದ್ರಗಳು ಮೊದಲಾದ ಉಪಾಯಗಳನ್ನು ತೆಗೆದುಕೊಳ್ಳಲಾಗಿದೆ. ಹನುಮಾನ್ ಗಢಿ ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.


ದಕ್ಷಿಣ ಭಾರತದಿಂದಲೂ ಭಕ್ತರ ಹರಿವು:

ಅಯೋಧ್ಯೆಯಷ್ಟೇ ಅಲ್ಲದೆ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಹಾಗೂ ತೆಲಂಗಾಣದಿಂದಲೂ ವಿಶೇಷ ರೈಲು ಸೇವೆಗಳನ್ನು ಬಳಸಿಕೊಂಡು ಸಾವಿರಾರು ಭಕ್ತರು ರಾಮದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಹಲವೆಡೆ, ಶ್ರೀರಾಮನವಮಿ ಪ್ರಯುಕ್ತ ವಿಶೇಷ ಭಜನೆ, ರಾಮ ಕಥೆ ಹಾಗೂ ಉಚಿತ ಅನ್ನದಾನ ಕಾರ್ಯಕ್ರಮಗಳು ನಡೆಯುತ್ತಿವೆ.

ಗ್ರಾಮೀಣ ಭಾಗದಲ್ಲೂ ವಿಜೃಂಭಣೆಯ ಆಚರಣೆ:

ಗ್ರಾಮೀಣ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಭಾಗದಲ್ಲೂ ರಾಮನ ಪಲ್ಲಕ್ಕಿ ಉತ್ಸವ, ನಾಟಕ ಪ್ರదర్శನೆ, ರಾಮಾಯಣ ಪಾಠ ಮತ್ತು ದೇವರ ಮೆರವಣಿಗೆಗಳು ಭಕ್ತಿಯಲ್ಲಿ ತೊದಲುಗೊಳಿಸುತ್ತಿವೆ. ಮಕ್ಕಳಿಗೆ ರಾಮನವಮಿಯ ಹಿನ್ನಲೆ ಕುರಿತು ಜ್ಞಾನ ನೀಡುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಲೆಗಳಲ್ಲಿ ಆಯೋಜನೆಯಾಗಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+