ಸುಧಾ ಮೂರ್ತಿ (Sudha Murty) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಸರಳತೆ ಮತ್ತು ಸಮಾಜ ಸೇವೆ ಮೂಲಕ ಸುಧಾ ಮೂರ್ತಿ ಬಹಳಷ್ಟು ಹೆಸರುವಾಸಿ ಕೋಟಿಗಟ್ಟಲೆ ಆಸ್ತಿ ಇದ್ದರೂ ಸಹ ಇವರು ಸಾಮಾನ್ಯರಂತೆ ಇರುತ್ತಾರೆ.ಗಂಡ-ಹೆಂಡತಿ ಇಬ್ಬರೂ ಸರಳತೆಯಿಂದ ಬದುಕು ನಡೆಸುತ್ತಿದ್ದಾರೆ.
ಹೌದು,ಸುಧಾ ಮೂರ್ತಿಯನ್ನು ನೋಡಿದರೆ ಇವರು ಕೋಟ್ಯಾಧಿಪತಿ ಉದ್ಯಮಿಯ ಹೆಂಡತಿಯೋ ಅಥವಾ ಇವರ ಅಳಿಯ ದೇಶದ ಪ್ರಧಾನ ಮಂತ್ರಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಇವರು ರಾಜ್ಯಸಭಾ ಸದಸ್ಯರನ್ನಾಗಿ ಕೂಡ ನೇಮಕ ಮಾಡಲಾಗಿದೆ ಇಷ್ಟೆಲ್ಲಾ ಇದ್ದರೂ ಇವರು ಮಾತ್ರ ಸರಳ ಬದುಕನ್ನು ನಡೆಸಿದ್ದಾರೆ. ಗ್ಲಾಮರಸ್ ಜೀವನದ ಪ್ರಪಂಚದಿಂದ ದೂರ ಉಳಿಯುತ್ತಿದ್ದರು.

ಸುಧಾ ಮೂರ್ತಿ 36,690 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಆದರೆ ಅವರು ಸರಳ ಜೀವನ ನಡೆಸಲು ಇಷ್ಟಪಡುತ್ತಾರೆ. ಅಚ್ಚರಿಯೆಂದರೆ 30 ವರ್ಷಗಳಲ್ಲಿ ಸುಧಾ ಮೂರ್ತಿ ತಮ್ಮ ಹಣದಿಂದ ಒಂದೇ ಒಂದು ಸೀರೆಯನ್ನು ಖರೀದಿಸಿಲ್ಲ ಎಂಬುವುದನ್ನು ಕುತೂಹಲಕಾರಿ ಸಂಗತಿ.
ಇವರು ಯಾವುದೇ ದೊಡ್ಡ ಸಮಾರಂಭ ಕಾರ್ಯಕ್ರಮಗಳು 775 ಕೋಟಿ ರೂಪಾಯಿ ಆಸ್ತಿಯ ಒಡತಿಯಾಗಿರುವ ಸುಧಾ ಮೂರ್ತಿ ಯಾವಾಗಲೂ ಸರಳ ಸೀರೆಯಲ್ಲಿ ಕಾಣಿಸಿಕೊಳ್ಳತ್ತಾರೆ.
ಒಂದು ನಿರ್ಧಾರದಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ
ಡಿಎನ್ಎ ವರದಿ ಪ್ರಕಾರ, ಸುಧಾ ಮೂರ್ತಿ ಮೂರು ದಶಕಗಳಲ್ಲಿ ಕೋಟಿ ಕೋಟಿ ಆಸ್ತಿ ಇದ್ದರೂ ಒಂದೇ ಒಂದು ಹೊಸ ಸೀರೆ ಖರೀದಿಸಿಲ್ಲ.ಇದು ಆಶ್ಚರ್ಯಕರ ಸಂಗತಿಯಾಗಿರಬಹುದು.ಆದರೆ,ಇದರ ಹಿಂದೆ ಆಧ್ಯಾತ್ಮಿಕ ನಂಬಿಕೆ ಇದೆ ಎಂದು ಸುಧಾ ಮೂರ್ತಿ ವಾದಿಸುತ್ತಾರೆ. ವಾಸ್ತವ ನೋಡುವುದಾದರೆ ಕಾಶಿಗೆ ಭೇಟಿ ನೀಡಿದಾಗ, ಅವರು ತಮಗೆ ತುಂಬಾ ಇಷ್ಟವಾದ ಒಂದು ವಸ್ತುವನ್ನು ಬಿಡಲು ನಿರ್ಧರಿಸಿದ್ದಾರೆ.ಅವರಿಗೆ ಸೀರೆ ಎಂದರೆ ತುಂಬಾ ಇಷ್ಟ ಅಂದಿನಿಂದ ಅವರು ಯಾವುದೇ ಹೊಸ ಸೀರೆ ಖರೀದಿಸಿಲ್ಲ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಸುಧಾ ಮೂರ್ತಿ ಅವರು ಕಾಶಿಗೆ ಹೋಗಿದಾಗ ತಮ್ಮ ಇಷ್ಟವಾದ ವಸ್ತುವನ್ನು ಬಿಡಲು ನಿರ್ಧರಿಸು ತುದಾದಾಗ ಅವರು ಅದನ್ನು ಜೀವನದಲ್ಲಿ ಧೈರ್ಯ ಮತ್ತು ವಿನಮ್ರತೆಯ ಸಂಕೇತವಾಗಿ ತೆಗೆದುಕೊಂಡಿದ್ದರು. ಸುಧಾ ಮೂರ್ತಿಯು ತಮ್ಮ ಜೀವನದಲ್ಲಿ ಸರಳತೆ ಮತ್ತು ಆಧ್ಯಾತ್ಮಿಕ ತತ್ವಗಳನ್ನು ಪ್ರಾಮುಖ್ಯತೆಯನ್ನಾಗಿ ನೀಡುತ್ತಾರೆ. ಕಾಶಿಗೆ ಹೋಗಿದಾಗ, ತಮ್ಮ ಇಷ್ಟವಾದ ಸೀರೆ ಹಾರೈಸಿದ ಪರಿಕಲ್ಪನೆಯ ಮೂಲಕ ಅವರು ಒಂದು ದೊಡ್ಡ ಪಾಠ ಕಲಿಸುತ್ತಾರೆ. ಈ ನಿರ್ಧಾರವು ಅವರಿಗೆ ವೈಯಕ್ತಿಕ ಬದ್ಧತೆ ಮತ್ತು ತತ್ವಶಾಸ್ತ್ರದ ಪ್ರಭಾವವನ್ನು ತಲುಪಲು ಸಹಾಯ ಮಾಡಿತು.
ಅವರು ಹೇಳಿದಂತೆ, "ನಮ್ಮ ಪ್ರಪಂಚದಲ್ಲಿ ಬಹುದೂರದ ವಸ್ತುಗಳು ಮತ್ತು ಐಶ್ವರ್ಯವು ನಿಜವಾದ ಸಂತೋಷವನ್ನು ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹೆಚ್ಚಿನ ಸೀರೆಗಳು ಉಡುಗೊರೆ
ಸುಧಾ ಮೂರ್ತಿ ಅವರು ಬಳಿ ಅತಿ ಹೆಚ್ಚಾಗಿ ಕಂಚಿನ ಸೀರೆಯನ್ನು ಅವರು ಬಳಕೆ ಮಾಡುತ್ತಾರೆ.
ಎನ್.ಆರ್. ನಾರಾಯಣ ಮೂರ್ತಿ
ಸಾಫ್ಟ್ವೇರ್ ಸೇವಾ ಕ್ಷೇತ್ರ ಇನ್ಫೋಸಿಸ್ನ ಮತ್ತೊಬ್ಬ ಸಹ ಸಂಸ್ಥಾಪಕರಾದ ಎನ್.ಆರ್. ನಾರಾಯಣ ಮೂರ್ತಿ ಅವರು ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 69ನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಸಂಪತ್ತು $5.2 ಬಿಲಿಯನ್ಗಳಷ್ಟಿದೆ. 1981 ರಿಂದ 2002 ರವರೆಗೆ 21 ವರ್ಷಗಳ ಕಾಲ ಅವರು ಇನ್ಫೋಸಿಸ್ನ ಸಿಇಒ ಆಗಿದ್ದರು.
ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಮಗಳು ಅಕ್ಷತಾ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಮದುವೆಯಾಗಿದ್ದಾರೆ.
ಇತ್ತೀಚಿಗೆ ಮಹಾ ಕುಂಭಮೇಳದಲ್ಲಿ ಸುಧಾ ಮೂರ್ತಿ ಭಾಗಿ
ಉತ್ತರ ಪ್ರದೇಶದ ಪ್ರಯಾಗ್ ರಾಜ್ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು, ಸಾಧು-ಸಂತರು ನಾಗಸಾಧುಗಳು, ವಿದೇಶಿ ಭಕ್ತರು ಮಾತ್ರವಲ್ಲದೇ ದೇಶದ ಹಾಗೂ ವಿದೇಶದ ಗಣ್ಯರು ಕೂಡ ಭಾಗಿಯಾಗುತ್ತಿದ್ದಾರೆ. ಇದರಲ್ಲಿ ಕರ್ನಾಟಕದಿಂದಲೂ ಸಾವಿರಾರು ಭಕ್ತರು ಮಹಾ ಕುಂಭಮೇಳಕ್ಕೆ ಭೇಟಿ ನೀಡುತ್ತಿದ್ದು,ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ಗೆ ಭೇಟಿ ನೀಡಿದ್ದಾರೆ.
ಸರಳತೆಗೆ ಹೆಸರಾಗಿರುವ ಸುಧಾ ಮೂರ್ತಿ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಾರೆ. ಇದೀಗ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ಅವರು, ಮೂರು ದಿನಗಳ ಕಾಲ ಅಲ್ಲಿಯೇ ಉಳಿದುಕೊಂಡಿದ್ದಾರೆ.
ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ,' ನಾವು ಕರ್ನಾಟಕದಿಂದ ಬಂದಿದ್ದೇವೆ. ದೇವರ ಆಶೀರ್ವಾದದಿಂದ ಇಂದು ನಮಗೆ ಮಹಾ ಕುಂಭ ಮೇಳದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ನಮ್ಮ ಪೂರ್ವಜರಿಗೆ ಇಲ್ಲಿಗೆ ಬರುವ ಬಯಕೆ ಇತ್ತು. ಆದರೆ ಅದು ಈಡೇರಲಿಲ್ಲ. ಹೀಗಾಗಿ ನಾನು ಮೂರು ದಿನಗಳ ಪ್ರತಿಜ್ಞೆ ಮಾಡಿದ್ದೇನೆ. ಮೂರು ದಿನಗಳು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಅವರ ಹೆಸರಿನಲ್ಲಿ ನಾನು ತರ್ಪಣ ಬಿಡುತ್ತೇನೆ' ಎಂದು ಮಾತನಾಡಿದ್ದಾರೆ.
ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಮೈಸೂರು ವಿಶ್ವವಿದ್ಯಾಲಯದ 105ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಸುಧಾಮೂರ್ತಿ ಅವರ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ನೀಡಿದ್ದಾರೆ.
ಜೀವನದಲ್ಲಿ ತುಂಬಾ ಸರಳವಾಗಿರುವುದು ಕೆಲವು ವ್ಯಕ್ತಿಗಳನ್ನು ನೋಡಿ ಕಲಿಯಬೇಕಾಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ. ಸುಧಾಮೂರ್ತಿ ಅವರು ಎಷ್ಟೇ ಶ್ರೀಮಂತರಾಗಿದ್ದರೂ ತುಂಬಾ ಸರಳ ಬದುಕನ್ನು ಅನುಸರಿಸಿಕೊಂಡು ಹೋಗುತ್ತಿದ್ದರು. ಹೀಗಾಗಿ ಅವರು ಹೆಚ್ಚಿನ ಜನರಿಗೆ ಪ್ರೇರಣೆಯಾಗಿದ್ದಾರೆ.
ಸುಧಾ ಮೂರ್ತಿ ಅವರಿಗೆ 2023 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಿ ಗೌರವಿಸಲಾಗಿದೆ. 73 ವರ್ಷದ ಸುಧಾ ಮೂರ್ತಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಜನಿಸಿದರು.
ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಸುಧಾ ಮೂರ್ತಿ ಹುಬ್ಬಳ್ಳಿಯ BVB ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.
ಟಾಟಾ ಇಂಜಿನಿಯರಿಂಗ್ ಮತ್ತು ಲೊಕೊಮೊಟಿವ್ ಕಂಪನಿಯಲ್ಲಿ (ಟೆಲ್ಕೊ) ಕೆಲಸ ಮಾಡಿದ ಮೊದಲ ಮಹಿಳಾ ಇಂಜಿನಿಯರ್. ನಂತರ ಅವರು ನಾರಾಯಣ ಮೂರ್ತಿ ಅವರನ್ನು ವಿವಾಹವಾದರು ಮತ್ತು ಕೆಲವು ಇತರರೊಂದಿಗೆ ಇನ್ಫೋಸಿಸ್ ಅನ್ನು ಪ್ರಾರಂಭಿಸಿದರು.
ಸುಧಾ ಮೂರ್ತಿಯವರು ಪ್ರವಾಸ ಕಥನ ಮತ್ತು ಕಾಲ್ಪನಿಕವಲ್ಲದ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಪುಸ್ತಕಗಳನ್ನು ಹಲವಾರು ಭಾಷೆಗಳಿಗೆ ಅನುವಾದಿಸಲಾಗಿದೆ. ಅವರು ಹಲವಾರು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಅಂಕಣಕಾರರೂ ಆಗಿದ್ದಾರೆ. ಅವರು ಮಕ್ಕಳಿಗಾಗಿ 'ಸುಧಾ ಅಮ್ಮ' ಎಂಬ ಅನಿಮೇಟೆಡ್ ಸರಣಿಯನ್ನು ಸಹ ನಡೆಸಿದ್ದಾರೆ.
ಸುಮಾರು $250 ರ ಆರಂಭಿಕ ಬಂಡವಾಳದೊಂದಿಗೆ ಕನಸಿನಂತೆ ಪ್ರಾರಂಭವಾದದ್ದು ಇಂದು ಸುಮಾರು $80 ಶತಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ವಿಶ್ವದ ಅತಿದೊಡ್ಡ IT ಸೇವೆಗಳ ಕಂಪನಿಯಾಗಿದೆ.
ಭಾರತದ ರಾಷ್ಟ್ರಪತಿಗಳು ಶ್ರೀಮತಿ ಸುಧಾಮೂರ್ತಿ ಜಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಸಂತೋಷ ತಂದಿದೆ. ಸಮಾಜಸೇವೆ, ಲೋಕೋಪಕಾರ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸುಧಾ ಜಿಯವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಮ್ಮ 'ನಾರಿ ಶಕ್ತಿ'ಗೆ ಪ್ರಬಲವಾದ ಸಾಕ್ಷಿಯಾಗಿದೆ, ಇದು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯವನ್ನು ಉದಾಹರಿಸುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications