ಸುಧಾ ಮೂರ್ತಿ ಈ ಹೆಸರು ಕೇಳಿದ್ರೆ ಸಾಕು ಅವರ ಸಿಂಪ್ಲಿಸಿಟಿ ಕಣ್ಣ ಮುಂದೆ ಬರುತ್ತದೆ. ಅವರ ಚೆಂದದ ಮುಖ, ತಲೆಯ ತುಂಬ ಹೂ, ಭಾರತದ ನಾರಿಯ ಲಕ್ಷಣ ಸೀರೆ. ಈ ಎಲ್ಲ ಲಕ್ಷಣಗಳು ಸುಧಾ ಮೂರ್ತಿ ಅವರನ್ನೇ ಪ್ರತಿನಿಧಿಸುತ್ತವೆ. ಮನೆಯಲ್ಲಿ ಸಂಪತ್ತಿನ ಭಂಡಾರವೇ ಇದ್ದರೂ ಸಹ ಪ್ರದರ್ಶಿಸುವ ಗೋಜಿಗೆ ಹೋಗದ ಸುಧಾ ಮೂರ್ತಿ, ಸಾಹಿತಿ ಕೂಡಾ ಹೌದು.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರಿಗೆ ಬೆಂಬಲವನ್ನು ನೀಡಿದ ಛಲಗಾರ್ತಿ. ಬರೀ ಗಂಡನ ಬೆಂಬಲಕ್ಕೆ ಅಷ್ಟೇ ಅಲ್ಲ. ತಮ್ಮ ರಕ್ಷಣೆಯನ್ನು ಸಹ ತಾವು ಮಾಡಿಕೊಂಡ ಗಟ್ಟಿ ಗಿತ್ತಿ. ಹಾಗಿದ್ದರೆ ಸುಧಾ ಮೂರ್ತಿ ಅವರಿಗೆ ಯಾರು ಏನು ಮಾಡಿದ್ದರು ಎಂಬ ಪ್ರಶ್ನೆಗಳು ಏಳುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ.

ಸಂದರ್ಶನ ಒಂದರಲ್ಲಿ ಸುಧಾ ಮೂರ್ತಿ ತನ್ನ ಜೀವನದ ಭಯಾನಕ ಕಥೆಯನ್ನು ಹಂಚಿಕೊಳ್ಳುವಾಗ, ಒಮ್ಮೆ ತನ್ನ ಚಿನ್ನದ ಕಿವಿಯೋಲೆಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಆದರೆ, ಅವರು ಯಾವುದೇ ಭಯವಿಲ್ಲದೆ ದರೋಡೆಕೋರನನ್ನು ಎದುರಿಸಿದರು ಮತ್ತು ಅವರನ್ನು ಹೊಡೆದರು ಎಂದು ತಿಳಿಸಿದ್ದಾರೆ.
ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಜೀವನದ ಕುರಿತು 'An Uncommon Love: The Early Life of Sudha and Narayan Murthy' ಎಂಬ ಪುಸ್ತಕವನ್ನು ಬರೆಯಲಾಗಿದೆ. ಚಿತ್ರಾ ಬ್ಯಾನರ್ಜಿ ದಿವಾಕರುಣಿ ಬರೆದಿರುವ ಈ ಪುಸ್ತಕ ಇವರಿಬ್ಬರ ಬದುಕಿನ ಹಲವು ಕಥೆಗಳ ಮೇಲೆ ಬೆಳಕು ಚೆಲ್ಲುತ್ತದೆ.
ಈ ವೇಳೆ ಸುಧಾ ಮೂರ್ತಿ ಅವರು ತಮ್ಮ ತಾಯಿ ಮತ್ತು ತಂದೆ ಸಂಪ್ರದಾಯಸ್ಥರಲ್ಲ. ಸುಧಾಳಿಗೆ ಸ್ವತಂತ್ರವಾಗಿ ಬದುಕುವ ಅವಕಾಶ ಕೊಟ್ಟರು. ಒಂದು ದಿನ ಶಾಲೆಗೆ ಹೋಗುತ್ತಿದ್ದಾಗ ಚಿನ್ನಾಭರಣ ದೋಚಿದವನೊಬ್ಬ ತನ್ನ ಮೇಲೆ ದಾಳಿ ಮಾಡಿದನೆಂದು ಅವರು ಹೇಳಿದ್ದಾರೆ.

ಸುಧಾ ಕಿವಿಯಲ್ಲಿ ಧರಿಸಿದ್ದ ಕಿವಿಯೋಲೆಗಳನ್ನು ಕಿತ್ತುಕೊಳ್ಳಲು ಅವನು ಬಯಸಿದನು. ಈ ಸಂದರ್ಭದಲ್ಲಿ ಭಯಪಡುವ ಬದಲು ಸುಧಾ ಮೂರ್ತಿ ಅವರನ್ನು ಎದುರಿಸಿದರು. ಅವಳು ಅವನನ್ನು ಜೋರಾಗಿ ಕೂಗಿದಳು ಮತ್ತು ಕೊಡೆಯಿಂದ ಹೊಡೆಯಲು ಪ್ರಾರಂಭಿಸಿದಳು. ಇದಾದ ನಂತರ ಆತನೂ ಕೂಡ ಎಂತಹ ತಪ್ಪು ಮಾಡಿದ್ದಾನೆ ಎಂದು ನಿಂದಿಸಿದ್ದಾರೆ. ಸುಧಾ ಮೂರ್ತಿಯ ಧೈರ್ಯವನ್ನು ಕಂಡು ಬೆರಗಾದ ಆತ ಅಲ್ಲಿಂದ ಓಡಿ ಹೋದ.
ಬಾಲ್ಯದಿಂದಲೂ ಸುಧಾ ಮೂರ್ತಿ ಪೋಷಕರು ಯಾವುದೇ ಕೆಲಸ ಮಾಡುವುದಕ್ಕು ತಡೆ ನೀಡುತ್ತಿರಲಿಲ್ಲ. ಸುಧಾಳಿಗೆ ಒಂಟಿಯಾಗಿ ಪ್ರಯಾಣಿಸಲು ಸಹ ಅವಕಾಶ ಮಾಡಿಕೊಟ್ಟರು. ಸುಧಾ ಮೂರ್ತಿ ಕೂಡ ಒಬ್ಬರೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.
ಸುಧಾ ಕೂದಲನ್ನು ತುಂಬಾ ಚಿಕ್ಕದಾಗಿ ಕತ್ತರಿಸಿದ್ದರು. ಅವರು ಪ್ಯಾಂಟ್ ಅನ್ನು ಸಹ ಧರಿಸುತ್ತಿದ್ದರು. ಅವರ ಮನೆಯಲ್ಲಿ ಬಟ್ಟೆಯ ಬಗ್ಗೆ ಏನನ್ನೂ ಹೇಳಲಿಲ್ಲ. ಈ ಕಾರಣದಿಂದಲೇ ಅವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದರು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications