ನವದೆಹಲಿ, ಏಪ್ರಿಲ್ 15: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ದೇಶದ ಅತ್ಯುನ್ನತ ಸಾಫ್ಟ್ವೇರ್ ಸಂಸ್ಥೆಯಾಗಿದೆ. ವಿದೇಶದಲ್ಲಿ ಕೂಡ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿದೆ. ಈ ಸಂಸ್ಥೆಯ ವ್ಯವಹಾರ ಕೂಡ ಉತ್ತಮವಾಗಿ ಲಾಭದ ಹಾದಿಯಲ್ಲೇ ನಡೆಯುತ್ತಿದ್ದು, ಇದೀಗ ಟಿಸಿಎಸ್ ಸಂಸ್ಥೆ ತನ್ನ ಹೊಸ ತ್ರೈಮಾಸಿಕದಲ್ಲಿ ಭರ್ಜರಿ ಲಾಭ ಗಳಿಸಿದೆ.
ಸಾಫ್ಟ್ವೇರ್ ಸೇವೆ ಒದಗಿಸುವ ಭಾರತದ ಅತಿ ದೊಡ್ಡ ಕಂಪನಿ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' ಎನ್ನಬಹುದು. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಕೀರ್ತಿ ಕೂಡ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' ಸಂಸ್ಥೆಗೆ ಇದೆ. ಇನ್ನು ಈ ಸಂಸ್ಥೆ ಇದೀಗ ತನ್ನ 2023-24 ನೇ ಸಾಲಿನ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ 12,434 ಕೋಟಿ ರೂಪಾಯಿ ನಿವ್ವಳ ಲಾಭವನ್ನ ಗಳಿಸಿದೆ. ಈ ಮೂಲಕ ತನ್ನ ಕಳೆದ ಅವಧಿಗಿಂತಲೂ ಹೆಚ್ಚು ಲಾಭ ಗಳಿಸಿದೆ. ಅಲ್ಲದೆ ತನ್ನ ಷೇರು, ಅಂದರೆ ಹೂಡಿಕೆ ಮಾಡಿರುವ ಹೂಡಿಕೆದಾರರಿಗೆ ಭರ್ಜರಿ ಲಾಭ ನೀಡಿದೆ.

ಕಳೆದ ಬಾರಿ 11,392 ಕೋಟಿ ಲಾಭ!
ಇದರ ಜೊತೆಗೆ ಕಳೆದ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹11,392 ಕೋಟಿ ಲಾಭ ಗಳಿಸಿತ್ತು 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್'. ಇದೀಗ ತನ್ನ ಹೊಸ ತ್ರೈಮಾಸಿಕದಲ್ಲಿ ಟಿಸಿಎಸ್ ಲಾಭದಲ್ಲಿ ಕೂಡ ಭರ್ಜರಿ ಏರಿಕೆ ಆಗಿದ್ದು, ಲಾಭದಲ್ಲಿ ಶೇ 9.1 ರಷ್ಟು ಏರಿಕೆಯನ್ನು ಕಂಡಿದೆ ಟಿಸಿಎಸ್. ಈ ಮೂಲಕ ಟಾಟಾ ಸಂಸ್ಥೆಯ ಮತ್ತೊಂದು ಉದ್ಯಮ ಕೂಡ, ತನ್ನ ಲಾಭದ ಹಾದಿಯನ್ನು ಮುಂದುವರಿಸಿ ದೇಶದ ಉದ್ಯಮ ವಲಯಕ್ಕೆ ಮಾದರಿ ಆಗುತ್ತಿದೆ. ಇದರ ಜತೆ, ಹೂಡಿಕೆ ಮಾಡಿರುವ ಷೇರುದಾರರಿಗೆ ಕೂಡ ಲಾಭದ ಹಂಚಿಕೆ ಮಾಡಲು ಮುಂದಾಗಿದೆ.
ಒಟ್ಟು 6 ಲಕ್ಷ ಕೆಲಸಗಾರರು!
2023-24ನೇ ಹಣಕಾಸು ವರ್ಷದಲ್ಲಿ ಟಿಸಿಎಸ್ ಕಂಪನಿಯ ನಿವ್ವಳ ಲಾಭದಲ್ಲಿ ಶೇಕಡಾ 9ರಷ್ಟು ಏರಿಕೆ ಆಗಿದ್ದು, ₹45,908 ಕೋಟಿ ಮುಟ್ಟಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿ ವರಮಾನ ಶೇಕಡಾ 3.5 ರಷ್ಟು ಏರಿಕೆ ಆಗಿದ್ದು, ₹61,237 ಕೋಟಿ ಆಗಿದೆ ಎಂದು ಷೇರುಪೇಟೆಗೆ ತಿಳಿಸಿದೆ. ಅಲ್ಲದೆ ಇದರ ಜೊತೆಗೆ ಯುವಕರಿಗೆ ಈ ಸಂಸ್ಥೆಯಲ್ಲಿ ಉತ್ತಮ ಅವಕಾಶಗಳು ಸಿಗುತ್ತಿವೆ. ಈ ಮಧ್ಯೆ ತನ್ನ 4ನೇ ತ್ರೈಮಾಸಿಕದಲ್ಲಿ 2 ಸಾವಿರ ಸಿಬ್ಬಂದಿ ಟಿಸಿಎಸ್ ಕಂಪನಿ ತೊರೆದಿದ್ದು, ಒಟ್ಟು ಸಿಬ್ಬಂದಿ ಸಂಖ್ಯೆ ಈಗ 6.01 ಲಕ್ಷ ಇದ್ದಾರೆ ಎಂಬ ಮಾಹಿತಿಯನ್ನು ಕೂಡ ನೀಡಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಸಂಭವಿಸಿದರೂ ಟಿಸಿಎಸ್ಗೆ ಮಾತ್ರ ಯಾವುದೇ ಅಡೆತಡೆ ಉಂಟಾಗಿಲ್ಲ. ತನ್ನ ಲಾಭದ ಹಾದಿಯಲ್ಲೇ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' ಮುಂದುವರಿದಿದೆ. ಹಾಗೇ ಭವಿಷ್ಯಕ್ಕೂ ಕೂಡ ಹಲವು ರೀತಿಯ ಯೋಜನೆಯ ರೂಪಿಸಿಕೊಂಡಿದ್ದು, ಇತ್ತೀಚೆಗಷ್ಟೇ ಹೊಸಬರಿಗೆ ಕೆಲಸ ಕೊಡುವ ವಿಚಾರದಲ್ಲೂ ಟಿಸಿಎಸ್ ಭಾರಿ ಸುದ್ದಿಯಾಗಿ ಸದ್ದು ಮಾಡಿತ್ತು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications