ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಟಿಸಿಪಿಎಲ್) ಜನಪ್ರಿಯ ಭಾರತೀಯ ಸ್ನಾಕ್ ತಯಾರಕ ಹಲ್ದಿರಾಮ್ನ ಕನಿಷ್ಠ ಶೇಕಡ 51 ರಷ್ಟು ಖರೀದಿಸಲು ಮಾತುಕತೆ ನಡೆಸುತ್ತಿದೆ. ಇದಕ್ಕಾಗಿ ಹಲ್ದಿರಾಮ್ಸ್ 10 ಬಿಲಿಯನ್ ಡಾಲರ್ ಅಥವಾ 83100 ಕೋಟಿ ರೂಪಾಯಿಯನ್ನು ಕೋರಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಹಲ್ದಿರಾಮ್ಸ್ ಕೂಡ ಬೈನ್ ಕ್ಯಾಪಿಟಲ್ ಸೇರಿದಂತೆ ಖಾಸಗಿ ಈಕ್ವಿಟಿ ಸಂಸ್ಥೆಗಳೊಂದಿಗೆ ಶೇಕಡ 10 ರಷ್ಟು ಪಾಲನ್ನು ಮಾರಾಟ ಮಾಡುವ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ. ಯುಕೆ ಚಹಾ ಕಂಪನಿ ಟೆಟ್ಲಿಯನ್ನು ಹೊಂದಿರುವ ಮತ್ತು ಭಾರತದಲ್ಲಿ ಸ್ಟಾರ್ಬಕ್ಸ್ನೊಂದಿಗೆ ಪಾಲುದಾರಿಕೆಯನ್ನು ಟಾಟಾ ಗ್ರಾಹಕ ಉತ್ಪನ್ನಗಳು ಹೊಂದಿದೆ.

ಹಲ್ದಿರಾಮ್ಸ್ನ ವಾರ್ಷಿಕ ಆದಾಯವು ಸುಮಾರು 1.5 ಬಿಲಿಯನ್ ಡಾಲರ್ ಆಗಿದೆ. ಆದರೆ ಹಲ್ದಿರಾಮ್ಸ್ 10 ಬಿಲಿಯನ್ ಡಾಲರ್ ಡೀಲ್ಗೆ ಮುಂದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ತಿಳಿಸಿದೆ. ಟಾಟಾ ಶೇಕಡ 51 ಕ್ಕಿಂತ ಕ್ಕಿಂತ ಹೆಚ್ಚು ಖರೀದಿಸಲು ಬಯಸಿದೆ. ಆದರೆ ಹಲ್ದಿರಾಮ್ಸ್ ಅತೀ ಅಧಿಕ ಮೊತ್ತವನ್ನು ಕೇಳುತ್ತಿದೆ ಎಂದು ಟಾಟಾ ಹೇಳಿದೆ ಎಂದು ವರದಿ ಉಲ್ಲೇಖಿಸಿದೆ. ರಾಯಿಟರ್ಸ್ ಪ್ರಕಾರ, ಟಾಟಾ ಗ್ರಾಹಕ ಉತ್ಪನ್ನಗಳ ವಕ್ತಾರರು ಮಾರುಕಟ್ಟೆಯ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
ಕುಟುಂಬವು ನಡೆಸುತ್ತಿರುವ ಹಲ್ದಿರಾಮ್ಸ್ 1937 ರಲ್ಲಿ ಸ್ಥಾಪಿಸಲಾದ ಒಂದು ಸಣ್ಣ ಅಂಗಡಿಯಲ್ಲಿದ್ದ ಸ್ನಾಕ್ಸ್ ಆಗಿದೆ. ಈ ಸಂಸ್ಥೆಯು ಗರಿಗರಿಯಾದ "ಭುಜಿಯಾ" ತಿಂಡಿಗೆ ಹೆಸರುವಾಸಿಯಾಗಿದೆ. ಮಾಮ್-ಆಂಡ್-ಪಾಪ್ ಅಂಗಡಿಗಳಲ್ಲಿ ಇದು ಆರಂಭಿಕವಾಗಿ 10 ರೂಪಾಯಿಗಳಿಗೆ ಮಾರಾಟವಾಗಿದೆ. ಇದು ಸುಮಾರು 13 ಶೇಕಡ ಪಾಲನ್ನು ಹೊಂದಿದೆ.
ಇರೋಮೊನಿಟರ್ ಇಂಟರ್ನ್ಯಾಶನಲ್ ಪ್ರಕಾರ ಭಾರತದ ಖಾರದ ತಿಂಡಿ ಮಾರುಕಟ್ಟೆಯಲ್ಲಿ ಹಲ್ದಿರಾಮ್ಸ್ 6.2 ಬಿಲಿಯನ್ ಡಾಲರ್ ಷೇರನ್ನು ಹೊಂದಿದೆ. ಲೇಸ್ ಚಿಪ್ಸ್ಗಳಿಗೆ ಹೆಸರುವಾಸಿಯಾದ ಪೆಪ್ಸಿ ಕೂಡಾ ಸುಮಾರು ಶೇಕಡ 13 ರಷ್ಟು ಹೊಂದಿದೆ.
ಸಿಂಗಾಪುರ ಮತ್ತು ಯುನೈಟೆಡ್ ಸ್ಟೇಟ್ಸ್ನಂತಹ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಹಲ್ದಿರಾಮ್ಸ್ನ ತಿಂಡಿಗಳನ್ನು ಮಾರಾಟ ಮಾಡಲಾಗುತ್ತದೆ. ಕಂಪನಿಯು ಸ್ಥಳೀಯ ಆಹಾರ, ಸಿಹಿತಿಂಡಿಗಳು ಮತ್ತು ಪಾಶ್ಚಿಮಾತ್ಯ ತಿನಿಸುಗಳನ್ನು ಮಾರಾಟ ಮಾಡುವ ಸುಮಾರು 150 ರೆಸ್ಟೋರೆಂಟ್ಗಳನ್ನು ಹೊಂದಿದೆ. ಹಲ್ದಿರಾಮ್ಸ್ ಖರೀದಿಸುವುದರಿಂದ ಟಾಟಾದ ಗ್ರಾಹಕ ಉತ್ಪನ್ನಗಳ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಬಹುದು.
"ನೀವು ಹಠಾತ್ತನೆ ಗಾತ್ರದಲ್ಲಿ ದೊಡ್ಡದಾಗಿ ಬೆಳೆಯಲು ಬಯಸಿದರೆ, ಹಲ್ದಿರಾಮ್ಸ್ಗಿಂತ ಉತ್ತಮ ಆಯ್ಕೆಯಿಲ್ಲ. ಪ್ಯಾಕ್ ಮಾಡಲಾದ ಆಹಾರ ಮತ್ತು ಆಹಾರ ಸೇವೆಗಳ ಮೇಲೆ ಯಾವುದೇ ಬ್ರ್ಯಾಂಡ್ ಪೈಪೋಟಿಗೆ ಇಲ್ಲ," ಎಂದು ಭಾರತೀಯ ಸಲಹಾ ಸಂಸ್ಥೆ ಟೆಕ್ನೋಪಾಕ್ನ ಗ್ರಾಹಕ ಮತ್ತು ರಿಟೇಲ್ ವ್ಯಾಪಾರದ ಮುಖ್ಯಸ್ಥ ಅಂಕುರ್ ಬಿಸೆನ್ ಹೇಳಿದರು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications