ಅಮೆರಿಕನ್ ಆರ್ಥಿಕ ತಜ್ಞ ಹಾಗೂ ನೊಬೆಲ್ ವಿಜೇತ ಜೋಸೆಫ್ ಇ ಸ್ಟಿಗ್ಲಿಜ್ ಅವರು ಭಾರತ ನಡೆಸುತ್ತಿರುವ ಕೊರೊನಾ ಹೋರಾಟಕ್ಕೆ ಸಂಬಂಧಿಸಿದಂತೆ ಸಲಹೆ ನೀಡಿದ್ದಾರೆ. ಸರ್ಕಾರಕ್ಕೆ ಅಗತ್ಯ ಇರುವ ಹಣ ಸಂಗ್ರಹಕ್ಕಾಗಿ ಅತ್ಯಂತ ಶ್ರೀಮಂತರ ಮೇಲೆ ತೆರಿಗೆ ಹಾಕುವಂತೆ ಹೇಳಿದ್ದಾರೆ. ಈ ವಿಚಾರದಲ್ಲಿ ಭಾರತೀಯ ಸರ್ಕಾರ ಸಂಕೋಚ ಪಡಬಾರದು. ಕೊರೊನಾ ಬಿಕ್ಕಟ್ಟು ತಡೆಗೆ ಖರ್ಚನ್ನು ತಡೆಯಬಾರದು ಹಾಗೂ ದುರ್ಬಲ ವರ್ಗದವರಿಗೆ ಸಹಾಯ ಮಾಡಬೇಕು ಎಂದಿದ್ದಾರೆ.
"ಹೆಚ್ಚು ಪರಿಣಾಮ ಬೀರುವ ಕ್ಷೇತ್ರಗಳತ್ತ ಹಣ ತೊಡಗಿಸುವುದಕ್ಕೆ ಯೋಚಿಸಬೇಕೆ ವಿನಾ ಕಡಿಮೆ ಪರಿಣಾಮ ಬೀರುವ ಕಡೆಗೆ ಅಲ್ಲ. ಒಂದು ವೇಳೆ ಸಂಪನ್ಮೂಲ ದೊರೆಯದಿದ್ದಲ್ಲಿ, ಹೇಗಿದ್ದರೂ ನಿಮ್ಮಲ್ಲಿ (ಭಾರತದಲ್ಲಿ) ಬೇಕಾದಷ್ಟು ಜನ ಶತಕೋಟ್ಯಧಿಪತಿಗಳು ಇದ್ದಾರೆ. ಅವರ ಮೂಲಕ ತೆರಿಗೆ ಸಂಗ್ರಹಿಸಿ," ಎಂದು ಎಫ್ ಐಸಿಸಿಐ ಆಯೋಜಿಸಿದ್ದ ಸಂವಾದವೊಂದರಲ್ಲಿ ಸ್ಟಿಗ್ಲಿಜ್ ಹೇಳಿದ್ದಾರೆ.
ವಿಪರೀತ ಸ್ವಾವಲಂಬನೆಯಿಂದ ಜೀವನ ಮಟ್ಟ ಕಡಿಮೆ
ಕೋವಿಡ್ ತೆರಿಗೆ ಎಂದು ಭಾರತದ ಅತಿ ಶ್ರೀಮಂತರ ಮೇಲೆ ಹೇರುವ ಬಗ್ಗೆ ಈಚೆಗೆ ಚರ್ಚೆ ನಡೆಯುತ್ತಿದೆ. ಇನ್ನು ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ ಬಗ್ಗೆ ಮಾತನಾಡಿದ ಅವರು, ವಿಪರೀತ ಸ್ವಾವಲಂಬನೆಯು ಜೀವನಮಟ್ಟವನ್ನು ಕಡಿಮೆ ಮಾಡುತ್ತದೆ. ಏಕೆಂದರೆ, ಲಸಿಕೆ ಸೇರಿದಂತೆ ಸಾಕಷ್ಟು ಉತ್ಪನ್ನಗಳು ಆಮದಾಗುತ್ತದೆ. ಇದು ವಾಸ್ತವವಾದ ವಿಚಾರ ಅಲ್ಲ. ಕೊರೊನಾ ಮತ್ತು ತಾಪಮಾನ ಬದಲಾವಣೆ ವಿಚಾರಗಳು ಸಹಕಾರ ಹಾಗೂ ಒಗ್ಗೂಡಿ ಕೆಲಸ ಮಾಡುವ ಅಗತ್ಯವನ್ನು ಹೇಳಿವೆ ಎಂದಿದ್ದಾರೆ.
ಲಾಕ್ ಡೌನ್ ಉದ್ದೇಶವೇ ಸೋಲುವಂತೆ ಮಾಡಿತು
ಭಾರತ ಹಾಗೂ ಯುಎಸ್ ಎರಡೂ ಕೊರೊನಾ ಸನ್ನಿವೇಶವನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದು ಸ್ಟಿಗ್ಲಿಜ್ ಅಭಿಪ್ರಾಯಪಟ್ಟಿದ್ದಾರೆ. ವಲಸಿಗ ಕಾರ್ಮಿಕರನ್ನು ಹೇಗೆಂದರೆ ಹಾಗೆ ಸಂಚರಿಸಲು ಅನುವು ಮಾಡಿಕೊಟ್ಟಿದ್ದು ಲಾಕ್ ಡೌನ್ ಉದ್ದೇಶವೇ ಸೋಲುವಂತೆ ಮಾಡಿತು ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ವಿಭಜನೆಯ ರಾಜಕೀಯ
ಯುಎಸ್ ನಲ್ಲಿ ಜನಾಂಗೀಯ ಹಾಗೂ ಆದಾಯ ಆಧಾರದಲ್ಲಿ ವಿಭಜನೆ ದೊಡ್ಡ ಮಟ್ಟದಲ್ಲಿ ಆಗುತ್ತಿರುವುದನ್ನು ಟೀಕಿಸಿದ ಅವರು, ಅದೇ ರೀತಿಯ ವಿಭಜನೆಯ ರಾಜಕೀಯ ಭಾರತದಲ್ಲಿ ಇದೆ ಎಂದು ಹೇಳಿದ್ದಾರೆ. ಇದರಿಂದಾಗಿಯೇ ಸಮಾಜ ಹಾಗೂ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications