ಬೆಂಗಳೂರು, ಏಪ್ರಿಲ್ 25: ಮಾದಾವರದಿಂದ ತುಮಕೂರಿನವರೆಗೆ 52 ಕಿಮೀ ಮೆಟ್ರೊ ರೈಲು ಕಾರಿಡಾರ್ ವಿಸ್ತರಣೆಗೆ ಎಂಟು ಸಲಹಾ ಸಂಸ್ಥೆಗಳು ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ಸಿದ್ಧಪಡಿಸಲು ಆಸಕ್ತಿ ತೋರಿಸಿವೆ.
ಇದು ಕಾರ್ಯಸಾಧ್ಯವಾದರೆ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ. ಟೆಂಡರ್ನಲ್ಲಿ ಭಾಗವಹಿಸುವ ಕೆಲವು ಬಿಡ್ದಾರರು RITES ಲಿಮಿಟೆಡ್, Systra MVA ಕನ್ಸಲ್ಟಿಂಗ್, ಆರ್ವಿ ಅಸೋಸಿಯೇಟ್ಸ್ ಇವೇ ಮೊದಲಾದವು ಎಂದು ಡಿಎಚ್ ವರದಿ ಮಾಡಿದೆ.

ಎಂಟು ಬಿಡ್ದಾರರ ಭಾಗವಹಿಸಿವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ದೃಢಪಡಿಸಿದ್ದಾರೆ. ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನಗಳ ನಂತರ ಯಶಸ್ವಿ ಸಲಹೆಗಾರರನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಕಾರ್ಯಸಾಧ್ಯತೆಯ ಅಧ್ಯಯನಕ್ಕಾಗಿ ಟೆಂಡರ್ ಅನ್ನು ಕರೆಯುತ್ತದೆ. ಆದರೂ ಈ ಕ್ರಮವು ಟೀಕೆಗೆ ಒಳಗಾಗುವ ಸಾಧ್ಯತೆಯಿದೆ. ಗೃಹ ಸಚಿವ ಜಿ ಪರಮೇಶ್ವರ ಅವರು ಕಾರ್ಯಸಾಧ್ಯತಾ ಅಧ್ಯಯನ ವರದಿಯನ್ನು ಪರಿಶೀಲಿಸುವ ಮೊದಲು ಅಥವಾ ಚಿಕ್ಕಬಾಣಾವರದಿಂದ ಉಪನಗರ ರೈಲು ಜಾಲವನ್ನು ವಿಸ್ತರಿಸುವಂತಹ ಪರ್ಯಾಯ ಕ್ರಮಗಳನ್ನು ಪರಿಶೀಲಿಸುವ ಮೊದಲು ಮೆಟ್ರೋವನ್ನು ತಮ್ಮ ಊರಿಗೆ ವಿಸ್ತರಿಸಲು ಬಯಸುತ್ತಿದ್ದಾರೆ.
"ಒಮ್ಮೆ ಕಾರ್ಯಸಾಧ್ಯತೆಯ ಅಧ್ಯಯನವು ಬಂದ ನಂತರ ಯೋಜನೆ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುದರ ಕುರಿತು ವಿವಿಧ ಮಧ್ಯಸ್ಥಗಾರರಿಗೆ ಸ್ಪಷ್ಟತೆ ಸಿಗುತ್ತದೆ. ಅಧ್ಯಯನವು ತುಮಕೂರಿನವರೆಗೆ ಮೆಟ್ರೋವನ್ನು ವಿಸ್ತರಿಸುವುದನ್ನು ಖಾತರಿಪಡಿಸುವುದಿಲ್ಲ" ಎಂದು BMRCL ಅಧಿಕಾರಿಯೊಬ್ಬರು ಹೇಳಿದರು.
ಫೆಬ್ರವರಿಯಲ್ಲಿ ಬಿಎಂಆರ್ಸಿಎಲ್ 118 ಕಿಲೋಮೀಟರ್ ನೆಟ್ವರ್ಕ್ನಲ್ಲಿ ಮೆಟ್ರೋ ಯೋಜನೆಯ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಟೆಂಡರ್ಗಳನ್ನು ಆಹ್ವಾನಿಸಿತ್ತು. ಈ ಮಾರ್ಗಗಳು ಚಲ್ಲಘಟ್ಟ ಮತ್ತು ಬಿಡದಿ, ರೇಷ್ಮೆ ಸಂಸ್ಥೆ ಮತ್ತು ಹಾರೋಹಳ್ಳಿ, ಬೊಮ್ಮಸಂದ್ರ ಮತ್ತು ಅತ್ತಿಬೆಲೆ, ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಜಿಗಣಿ, ಆನೇಕಲ್, ಸರ್ಜಾಪುರ, ವರ್ತೂರು ಮೂಲಕ ಕಾಡುಗೋಡಿಗೆ ಸಂಪರ್ಕಿಸುತ್ತದೆ. ಬಿಡ್ ಮಾಡಿದವರ ಹೆಸರು ಇನ್ನೂ ತಿಳಿದುಬಂದಿಲ್ಲ.
ಸರ್ಜಾಪುರ ರಸ್ತೆ-ಹೆಬ್ಬಾಳ ಮಾರ್ಗಕ್ಕೆ ಡಿಪಿಆರ್ ಸಿದ್ಧ
ಬಿಎಂಆರ್ಸಿಎಲ್ 36 ಮೆಟ್ರೋ ನಿಲ್ದಾಣಗಳನ್ನು ವ್ಯಾಪಿಸಿರುವ ಸರ್ಜಾಪುರ ರಸ್ತೆ-ಹೆಬ್ಬಾಳ ಮೆಟ್ರೋ ಮಾರ್ಗಕ್ಕಾಗಿ ವಿವರವಾದ ಯೋಜನಾ ವರದಿಯನ್ನು (DPR) ಸಿದ್ಧಪಡಿಸುವುದನ್ನು ಬಹುತೇಕ ಪೂರ್ಣಗೊಳಿಸಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ರಾಜ್ಯ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
More From GoodReturns

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?



Click it and Unblock the Notifications