ಭಾರತೀಯ ರೈಲ್ವೇ ತಂದಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ಈಗಾಗಲೇ ದೇಶದಾದ್ಯಂತ ಭಾರೀ ಜನಪ್ರಿಯತೆ ಪಡೆದಿದೆ. ತನ್ನ ದಕ್ಷ ಮತ್ತು ವೇಗದ ಸೇವೆಯಿಂದಾಗಿ ಭಾರೀ ಬೇಡಿಕೆಯನ್ನು ಹೊಂದಿರುವ ವಂದೇ ಭಾರತ್, ಮುಂದಿನ ಕೆಲವು ವರ್ಷಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಪ್ರಯಾಣ ಆರಂಭಿಸುವ ನಿರೀಕ್ಷೆಯಿದೆ. ಇದೀಗ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು (Vande Bharat Express), ಭಾರತದಾದ್ಯಂತ ಸುಂದರವಾದ ಮತ್ತು ಆಕರ್ಷಕ ದೃಶ್ಯಗಳನ್ನು ನೀಡುವ ಮಾರ್ಗಗಳಲ್ಲೂ ಸಂಚರಿಸುತ್ತದೆ. ಆ ಮಾರ್ಗಗಳ ಪಟ್ಟಿ ಇಲ್ಲಿದೆ ಓದಿ.

ದೊಡ್ದ ಕಿಟಕಿಗಳೊಂದಿಗೆ ವಿನ್ಯಾಸಗೊಂಡಿರುವ, ಪ್ರಯಾಣಿಕರಿಗೆ ಸೌಕರ್ಯದ ಜೊತೆಗೆ, ಪ್ರಕೃತಿ ಸೌಂದರ್ಯವನ್ನು ಸಹ ಒಟ್ಟಿಗೆ ಆನಂದಿಸುವ ಅವಕಾಶ ಈ ವಂದೇ ಭಾರತ್ ರೈಲುಗಳು ನೀಡುತ್ತದೆ. ಈಗಾಗಲೇ ಭಾರತದಲ್ಲಿ 82 ಮಾರ್ಗಗಳಲ್ಲಿ 164 ವಂದೇ ಭಾರತ್ ರೈಲಗಳು ಕಾರ್ಯ ನಿರ್ವಹಿಸುತ್ತಿದೆ.
ಸುಂದರ ನೋಟವನ್ನು ನೀಡುವ ವಂದೇ ಭಾರತ್ ರೈಲು ಮಾರ್ಗಗಳು:
ನವದೆಹಲಿ-ಡೆಹ್ರಾಡೂನ್ ವಂದೇ ಭಾರತ್ ರೈಲು:
ಹಿಮಾಲಯದ ಪ್ರವೇಶ ದ್ವಾರ ಎಂದೇ ಕರೆಯಲ್ಪಡುವ ಡೆಹ್ರಾಡೂನ್ಗೆ ಹೋಗುವ ಈ ಮಾರ್ಗ, ಶಿವಾಲಿಕ್ ಬೆಟ್ಟಗಳನ್ನು ನೋಡುವಂತೆ ಮಾಡುತ್ತದೆ. ದಾರಿ ಮಧ್ಯೆ ಹಿಮಾಲಯದ ಶಿಖರಗಳು ಕಾಣಸಿಗುತ್ತದೆ. ಹರಿದ್ವಾರದ ಬಳಿ ಕಾಡುಗಳು ಮತ್ತು ದೊಡ್ಡ ದೊಡ್ಡ ಪರ್ವತಗಳ ಅದ್ಭುತ ದೃಶ್ಯ ಕಣ್ಣಮುಂದೆ ಕಾಣುತ್ತದೆ. ಇನ್ನು ಇಲ್ಲಿ ದೂರ ಸುಮಾರು 300 ಕಿ.ಮೀಗಳಿದ್ದು, ಕೇವಲ 5 ಗಂಟೆಯ ಒಳಗೆ ಪ್ರಯಾಣಿಸಬಹುದು.
ಮುಂಬೈ ಸಿಎಸ್ಎಂಟಿ-ಕೊಲ್ಹಾಪುರ ವಂದೇ ಭಾರತ್:
ಈ ಮಾರ್ಗವೂ ಪಶ್ಚಿಮ ಘಟ್ಟಗಳ ನಡುವೆ ಸಾಗುತ್ತದೆ. ದೊಡ್ಡ ದೊಡ್ಡ ಬೆಟ್ಟಗಳು, ಹಚ್ಚ ಹಸಿರಾದ ಕಣಿವೆಗಳು, ಸುರಂಗ ಮಾರ್ಗಗಳು, ಬೆಟ್ಟಗಳ ನಡುವೆ ಅಡಗಿರುವ ಜಲಪಾಯಗಳು, ದಟ್ಟ ಕಾಡುಗಳು ಕಾಣ ಸಿಗುತ್ತವೆ. ಮಳೆಗಾಲದಲ್ಲಿ ಇವುಗಳೆಲ್ಲಾ ಅದ್ಭುತವಾಗಿ ಕಾಣಿಸುತ್ತದೆ. ಸಹ್ಯಾದ್ರಿ ಪರ್ವತಗಳ ನೋಟಗಳು, ಭತ್ತದ ಗದ್ದೆಗಳಿಂದ ಐತಿಹಾಸಿಕ ಕೋಟೆಗಳವೆಗೆ ಭಾರೀ ಅದ್ಭುತ ದೃಶ್ಯಗಳನ್ನು ಹೊಂದಿದೆ. ಸುಮಾರು 500 ಕಿ.ಮೀ ದೂರ ಹೊಂದಿದ್ದು, 8 ಗಂಟೆಗಳ ಪ್ರಯಾಣ ಸಮಯವನ್ನು ಹೊಂದಿದೆ.
ಮುಂಬೈ ಸಿಎಸ್ಎಂಟಿ-ಮಡಗಾಂಔ (ಗೋವಾ) ವಂದೇ ಭಾರತ್:
ಪಶ್ಚಿಮ ಘಟ್ಟಗಳ ಸಾಲು, ದಟ್ಟ ಕಾಡುಗಳು, ಸುರಂಗ ಮಾರ್ಗಗಳು, ಸೇತುವೆಗಳು ಮತ್ತು ಅರಬ್ಬೀ ಸಮುದ್ರದ ಕರಾವಳಿ ದೃಶ್ಯಗಳು ಸುಂದರ ನೋಟಗಳನ್ನು ಹೊಂದಿದೆ. ಇನ್ನು ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಕಾಣ ಸಿಗುವ ಜಲಪಾತಗಳು, ಹಚ್ಚ ಹಸಿರಿನಿಂದ ತುಂಬಿದ ಪರಿಸರಗಳು ವಂದೇ ಭಾರತ್ ಸಂಚಾರಕ್ಕೆ ಹೊಸ ನೋಟವನ್ನು ನೀಡಲಿದೆ.
ಚೆನ್ನೈ-ಮೈಸೂರು ವಂದೇ ಭಾರತ್:
ತಮಿಳುನಾಡು ಮತ್ತು ಕರ್ನಾಟಕ ಹಲವು ಪ್ರದೇಶಗಳ ಮೂಲಕ ಸಾಗಿ ಹೋಗುವ ಈ ಮಾರ್ಗವು ತೆಂಗಿನ ತೋಟಗಳು, ಭತ್ತ ತುಂಬಿದ ಗದ್ದೆಗಳು, ದೇವಾಲಯಗಳ ಗೋಪುರಗಳು, ಅದ್ಭುತ ನೋಟವನ್ನು ನೀಡುತ್ತದೆ. ಅಲ್ಲದೇ ಕರಾವಳಿ ಪ್ರದೇಶಗಳು ಮತ್ತು ಪ್ರವಾಸಿ ಸ್ಥಳಗಳನ್ನು ನೋಡಬಹುದು. ಅದರಲ್ಲೂ 502 ಕಿ.ಮೀ ದೂರವನ್ನು ಹೊಂದಿರುವ ಈ ಮಾರ್ಗ, 6 ಗಂಟೆ 50 ನಿಮಿಷಗಳಲ್ಲಿ ಪ್ರಯಾಣಿಸುತ್ತದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications