ಕಾಸರಗೋಡು: ಸಾಮಾನ್ಯವಾಗಿ ಜನವರಿಯಲ್ಲಿ ಧನುರ್ಮಾಸ, ಮಕರ ಸಂಕ್ರಾಂತಿ ಆಚರಣೆಯ ಹಿನ್ನೆಲೆ ತರಕಾರಿಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. ಅಲ್ಲದೇ ಮೀನು, ಮಾಂಸದ ಬೇಡಿಕೆ ಕಡಿಮೆಯಾಗುತ್ತದೆ (Price Decrease). ಅಲ್ಲದೇ ವಿಶೇಷವಾಗಿ ಈ ಸಂದರ್ಭದಲ್ಲಿ ತರಕಾರಿ ಬೆಲೆ (Vegetables Price) ಕೂಡಾ ಗಗನಕ್ಕೇರುತ್ತದೆ. ಆದರೆ ಇದೀಗ ತರಕಾರಿ ಬೆಲೆ ಏರಿಕೆ ಕಂಡಿದೆ. ಅದರ ಜೊತೆಗೆ ಮೀನು, ಕೋಳಿ ಮಾಂಸದ (Chicken Meat) ಬೆಲೆಯೂ ಭಾರೀ ಏರಿಕೆಯಾಗಿದೆ. ತರಕಾರಿ, ಮಾಂಸದ ಬೆಲೆ ನೋಡಿ ಗ್ರಾಹಕರು ಸದ್ಯ ಕಂಗಾಲಾಗಿದ್ದಾರೆ.

ಜನರ ನಿತ್ಯ ಬದುಕಿನಲ್ಲಿ ಆಹಾರಕ್ಕೆ ಪ್ರಧಾನ ಸ್ಥಾನವಿದೆ. ಆದ್ದರಿಂದ ಅಗತ್ಯ ವಸ್ತುಗಳ ಬೇಡಿಕೆ ಹೆಚ್ಚಾದಂತೆ, ಬೆಲೆ ಕೂಡಾ ಏರಿಕೆಯಾಗೋದು ಸಾಮಾನ್ಯ. ಆದರೆ ಈ ವರ್ಷ ದಾಖಲೆ ಪ್ರಮಾಣದಲ್ಲಿ ತರಕಾರಿ, ಮೊಟ್ಟೆ, ಮೀನು, ಕೋಳಿ ಮಾಂಸಗಳ ಬೆಲೆ ಏರಿಕೆ ಕಂಡಿದ್ದು ವಿಶೇಷವೇ ಸರಿ.
ದಿಢೀರ್ ಗಗನಕ್ಕೆ ಹಾರಿದ ಮೀನು!
ಹೌದು, ನೀರಿನಲ್ಲಿ ಈಜಾಡುತ್ತಿದ್ದ, ಮೀನು ಒಮ್ಮೆಲೆ ಹಾರಿದರೆ ಹೇಗೆ ಅಚ್ಚರಿಯಾಗುತ್ತೋ, ಅದೇ ರೀತಿ ಬೆಲೆಯಿಂದಾಗಿ ಜನರೂ ಶಾಕ್ ಆಗಿದ್ದಾರೆ. ಡಿಸೆಂಬರ್ನಲ್ಲಷ್ಟೇ ಇಳಿಕೆ ಕಂಡಿದ್ದ ಮೀನಿನ ಬೆಲೆ, ಕ್ರಿಸ್ಮಸ್ ಹತ್ತಿರವಾಗುತ್ತಿದ್ದಂತೆ ದಿಢೀರ್ ಏರಿಕೆ ಕಂಡಿತ್ತು. ಅದರಲ್ಲೂ 1 ಕೆಜಿಗೆ 100 ರಿಂದ 150 ರೂ.ಗೆ ಸಿಗುತ್ತಿದ್ದ ಬೂತಾಯಿ ಮೀನಿನ ದರ ಇಂದು 250 ರೂ.ಗಿಂತಲೂ ಹೆಚ್ಚು ಏರಿಕೆಯಾಗಿದೆ. ಇನ್ನು ಸಿಗಡಿ ಬೆಲೆ ಕೆಜಿಗೆ 500 ರೂ., ಏಡಿ ಬೆಲೆ 400 ರೂ.ಗೆ ತಲುಪಿದೆ. ಇನ್ನು ಜನರ ನೆಚ್ಚಿನ ಬಂಗುಡೆ ಮೀನು ಹಿಂದೆ ಬರೀ 150 ರೂ.ಗೆ ಸಿಗುತ್ತಿತ್ತು. ಆದ್ರೆ ಇಂದು ಅದೇ ಬಂಗುಡೆ ಮೀನಿನ ಬೆಲೆ 260 ರೂ. ಗಡಿದಾಟಿದೆ. ಈ ಮೂಲಕ ಪ್ರತೀ ಮೀನಿನಲ್ಲಿ 100 ರೂ. ಹೆಚ್ಚಾದಂತೆ ಆಗಿದೆ.
ಇಳಿಕೆ ಕಾಣದ ಚಿಕನ್, ಮೊಟ್ಟೆ!
ಇನ್ನು ಡಿಸೆಂಬರ್ ಜನವರಿ ಆರಂಭವಾದ್ರೆ ಸಾಕು ಮೊಟ್ಟೆ, ಚಿಕನ್, ಮೀನಿಗೆ ಡಿಮ್ಯಾಂಡ್ ಕಡಿಮೆಯಾಗುತ್ತೆ. ಅಲ್ಲದೇ ಈ ಸಂದರ್ಭದಲ್ಲಿ ಬೆಲೆ ಕೂಡಾ ಇಳಿಕೆಯಾಗುತ್ತೆ. ಆದರೆ ಈ ಬಾರಿ ಡಿಸೆಂಬರ್ ಮೊದಲ ವಾರದಲ್ಲ ಏರಿಕೆಯಾಗಿದ್ದ ಚಿಕನ್ ಮತ್ತು ಕೋಳಿ ಮೊಟ್ಟೆ ಬೆಲೆ ಇನ್ನೂ ಇಳಿಕೆಯಾಗುತ್ತಿಲ್ಲ. ಕಳೆದ ವಾರ ಬೆಂಗಳೂರಿನ ರಿಟೇಲ್ ಶಾಪ್ವೊಂದರಲ್ಲಿ ಒಂದು ಕೆಜಿ ಕೋಳಿ ಮಾಂಸಕ್ಕೆ 300 ರೂ. ಇತ್ತು. ಇನ್ನು ಮೊಟ್ಟೆ ಬೆಲೆ 8 ರೂ.ಗೆ ತಲುಪಿದೆ. ಅದೇ ಹೋಲ್ ಸೇಲ್ ಶಾಪ್ಗೆ ಹೋದರೆ 7.50ರ ಅಂದಾಜಿನಲ್ಲಿ ಮೊಟ್ಟೆ ನೀಡುತ್ತಾರೆ.
ತರಕಾರಿ ಬೆಲೆಯೂ ಏರಿಕೆ!
ಅತ್ತ ಮಕರ ಸಂಕ್ರಾಂತಿ, ಧನುರ್ಮಾಸ, ಶಬರಿಮಲೆ ಯಾತ್ರೆ ಹಿನ್ನೆಲೆ ತರಕಾರಿ ಬೆಲೆಗಳು ಏರಿಕೆ ಕಂಡಿದೆ. ಒಂದು ಕಾಲದಲ್ಲಿ ಕೆಜಿಗೆ 10 ರೂ. ಇದ್ದ ಟೊಮೆಟೋ ಬೆಲೆ ಇಂದು 60 ರೂ.ಗೆ ತಲುಪಿದೆ. ಅದರಲ್ಲೂ ನುಗ್ಗೆಕಾಯಿಯಂತೂ ಮಾರುಕಟ್ಟೆಯಲ್ಲಿ ಸಿಗುತ್ತಲೇ ಇಲ್ಲ. ಒಂದು ಕಡೆ ಎಲ್ಲವೂ ಅಗತ್ಯ, ಒಂದು ಕಡೆ ಎಲ್ಲವೂ ದುಬಾರಿ. ಈ ಬೆಲೆ ಏರಿಕೆಯ ನಡುವೆ ಸಾಮಾನ್ಯ ಜನರು ಕಂಗಾಲಾಗಿಬಿಟ್ಟಿದ್ದಾರೆ.
More From GoodReturns

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gruha Lakshmi: ಅಯ್ಯಯ್ಯೊ..79 ಕೋಟಿ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮಾ… 2.3 ಲಕ್ಷ ಫಲಾನುಭವಿಗಳ ಖಾತೆ ತಡೆ!

Rain-Summer: ರಾಜ್ಯದಲ್ಲಿ ಮತ್ತೆ ವರುಣನ ಅಬ್ಬರ ಶುರು! ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!



Click it and Unblock the Notifications