ಬೆಂಗಳೂರು, ಮೇ 14: ಹವಾಮಾನ ವೈಪರಿತ್ಯ ಸೇರಿದಂತೆ ಹಲವಾರು ಕಾರಣಗಳಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು ತರಕಾರಿ ಬೆಲೆಗಳು ಗಗನಮುಖಿಯಾಗಿದೆ.
ಬೆಂಗಳೂರಿನಲ್ಲಿ ಸಗಟು ಬೀನ್ಸ್ ಬೆಲೆಗಳು ತೀವ್ರ ಏರಿಕೆ ಕಂಡಿದ್ದು, ಏಪ್ರಿಲ್ ಅಂತ್ಯಕ್ಕೆ ಕೆಜಿಗೆ 100 ರೂ.ನಿಂದ ಸೋಮವಾರ 200 ರೂ.ಗೆ ದ್ವಿಗುಣಗೊಂಡಿದೆ. ಸೂಪರ್ ಮಾರ್ಕೆಟ್ ಮತ್ತು ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಬೀನ್ಸ್ ಕೆಜಿಗೆ 220 ರಿಂದ 240 ರೂ.ಗೆ ತಲುಪಿದೆ.

ಬೀನ್ಸ್ ಮತ್ತು ಇತರ ತರಕಾರಿಗಳು ಸಾಮಾನ್ಯವಾಗಿ ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಮತ್ತು ಮಂಡ್ಯದಂತಹ ಹತ್ತಿರದ ಪ್ರದೇಶಗಳಿಂದ ಬರುತ್ತಿದ್ದರೂ, ಬೆಂಗಳೂರಿನ ಮಾರಾಟಗಾರರು ರೈತರಿಂದ ಕಡಿಮೆ ಪೂರೈಕೆಯಿಂದ ಬೆಲೆ ಏರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಡಿಎಚ್ನೊಂದಿಗೆ ಮಾತನಾಡಿರುವ ಕಲ್ಯಾಣ್ನಗರದ ತರಕಾರಿ ವ್ಯಾಪಾರಿ ವೆಂಕಟೇಶ್ ಎಂಬುವರು ಒಂದು ಕಿಲೋ ಬೀನ್ಸ್ಗೆ 240 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಒಂದು ಕಿಲೋ ಬೀನ್ಸ್ಗೆ 60 ಮತ್ತು 80 ರೂ.ಗೆ ಮಾರಾಟ ಮಾಡಿದ್ದೇವೆ. ಕಳೆದ ತಿಂಗಳು 100 ರೂ. ಇತ್ತು. ಆದರೆ ಸೋಮವಾರ ಸಗಟು ಬೆಲೆ 200 ರೂ. ಇದೆ. ಮುಂದೆ ಅದರ ಬೆಲೆ 240 ರೂ. ಆಗುತ್ತೆ ಎಂದು ತಿಳಿಸಿದ್ದಾರೆ.
ಪೂರೈಕೆಯಲ್ಲಿ ಕುಸಿತ:
ಈ ವರ್ಷ ಬೀನ್ಸ್ ಪೂರೈಕೆ ತುಲನಾತ್ಮಕವಾಗಿ ಕಡಿಮೆಯಾಗಿದೆ. ಜನರು ಮಳೆಗಾಲದ ಮೊದಲು ಮದುವೆಯಂತಹ ವಿಶೇಷ ಸಂದರ್ಭಗಳನ್ನು ಹೊಂದಿರುವುದರಿಂದ ಮಾರ್ಚ್ ನಂತರ ತರಕಾರಿಗಳಿಗೆ ಬೇಡಿಕೆ ಉತ್ತುಂಗಕ್ಕೇರುತ್ತದೆ. ಜನಪ್ರಿಯ ಸೂಪರ್ಮಾರ್ಕೆಟ್ಗಳು ತರಕಾರಿಗೆ 220 ರಿಂದ 240 ರೂಪಾಯಿಗಳ ಬೆಲೆಯನ್ನು ನೀಡಿದರೆ, ಆನ್ಲೈನ್ ಚಿಲ್ಲರೆ ವ್ಯಾಪಾರಿಗಳು ಬೀನ್ಸ್ ಅನ್ನು 133 ರಿಂದ 182 ರೂಪಾಯಿಗಳ ನಡುವೆ ಮಾರಾಟ ಮಾಡುತ್ತಿದ್ದಾರೆ.
ಕೆಆರ್ ಮಾರುಕಟ್ಟೆಯಲ್ಲಿ ಬೀನ್ಸ್ ಸಗಟು ಬೆಲೆ 200 ರೂ., ಕಲಾಸಿಪಾಳ್ಯದ ತರಕಾರಿ ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಿಗಳಿಗೆ 160 ರಿಂದ 180 ರೂ. ಇದೆ. ಕಲಾಸಿಪಾಳ್ಯದ ಮಾರಾಟಗಾರೊಬ್ಬರು ಮಾತನಾಡಿ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪೂರೈಕೆ ಗಣನೀಯವಾಗಿ ಕಡಿಮೆಯಾಗಿದೆ. ಬೆಲೆ ಏರಿಕೆ ಬೇಸಿಗೆಯಲ್ಲಿ ಮಾತ್ರ ಸಂಭವಿಸುತ್ತದೆ ಎಂದು ಅವರು ನಂಬಿದ್ದರು ಎಂದು ತಿಳಿಸಿದರು.
"ನೀರಾವರಿ ಸಮಸ್ಯೆಯಿಂದಾಗಿ ಹಲವರು ತರಕಾರಿ ಕೃಷಿಯನ್ನು ಕೈಬಿಡುತ್ತಿದ್ದಾರೆ. ಆದರೆ ಈ ವರ್ಷ ಹವಾಮಾನ ವೈಪರೀತ್ಯದಿಂದ ಬಹುತೇಕ ಅರಳಿದ ಹೂಗಳು ಜಮೀನಿನಲ್ಲಿ ಬಾಡಿ ಹೋಗಿವೆ. ಬೀನ್ಸ್ ಅನ್ನು 40 ರಿಂದ 60 ರೂ.ವರೆಗೆ ಮಾರಾಟ ಮಾಡುತ್ತಾರೆ ಎಂದು ಹೇಳಿದರು.
More From GoodReturns

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications