ಅದಾನಿ ಗ್ರೂಪ್ ಹಲವಾರು ವಂಚನೆಗಳನ್ನು ನಡೆಸಿದೆ ಎಂದು ಈ ಹಿಂದೆ ಜನವರಿಯಲ್ಲಿ ಹಿಂಡನ್ಬರ್ಗ್ ವರದಿಯೊಂದನ್ನು ಪ್ರಕಟಿಸಿದೆ. ಇದಾದ ಬಳಿಕ ಅದಾನಿ ಗ್ರೂಪ್ ಕೂಡಾ ಸ್ಪಷ್ಟಣೆಯನ್ನು ನೀಡಿದೆ. ಇವೆಲ್ಲದರ ನಡುವೆ ಈಗ ಈ ನ್ಯೂಯಾರ್ಕ್ ಮೂಲದ ಹಿಂಡನ್ಬರ್ಗ್ ರಿಸರ್ಚ್ನ ಸ್ಥಾಪಕ ನಾಥನ್ ಆಂಡರ್ಸನ್, ಅದಾನಿ ಗ್ರೂಪ್ನ ಎಲ್ಲ ಡೀಲ್ಗಳ ಮುಖ್ಯ ಸಂಧಾನಕಾರ ಗೌತಮ್ ಅದಾನಿಯ ಸಹೋದರ, ಉದ್ಯಮಿ ವಿನೋದ್ ಅದಾನಿ ಎಂದು ಆರೋಪ ಮಾಡಿದ್ದಾರೆ.
ಬ್ಲೂಬರ್ಗ್ನ ವರದಿಯೊಂದನ್ನು ಟ್ವೀಟ್ ಮಾಡಿದ ನಾಥನ್ ಆಂಡರ್ಸನ್, "ಅದಾನಿ ಗ್ರೂಪ್ನ ಎಲ್ಲ ಡೀಲ್ಗಳಲ್ಲಿ ವಿನೋದ್ ಅದಾನಿ ಸಂಧಾನಕಾರ ಎಂಬುವುದು ಈಗ ಸಾಬೀತಾಗಿದೆ. ಅದಾನಿ ಗ್ರೂಪ್ನ ಅತೀ ದೊಡ್ಡ ಸ್ವಾಧೀನಗಳಲ್ಲಿ ವಿನೋದ್ ಅದಾನಿ ಮುಖ್ಯ ಪಾತ್ರವಹಿಸಿದ್ದಾರೆ. ವಿನೋದ್ ಅದಾನಿ ಸಹೋದರ ಇದನ್ನು ನಿರಾಕರಿಸಿದರೂ, ವಿನೋದ್ಗೆ ಯಾವುದೇ ಅಧಿಕೃತ ಸ್ಥಾನ ಇಲ್ಲದಿದ್ದರೂ, ಈ ಸಂಸ್ಥೆಗೆ ಸಂಬಂಧಿಸಿದವರಲ್ಲವಾದರೂ ಇದು ಸತ್ಯ," ಎಂದು ನಾಥನ್ ಆಂಡರ್ಸನ್ ತಿಳಿಸಿದ್ದಾರೆ.

ಗ್ರೂಪ್ ಕಳೆದ ವರ್ಷ 10.5 ಬಿಲಿಯನ್ ಡಾಲರ್ನ 2 ಸಿಮೆಂಟ್ ಸಂಸ್ಥೆಗಳಾದ ಅಂಬುಜಾ ಸಿಮೆಂಟ್, ಎಸಿಸಿಯ ಡೀಲ್ ಮಾಡುತ್ತಿದ್ದಾಗ, ಪೋರ್ಟ್ಸ್ನಿಂದ ಹಿಡಿದು ಎನರ್ಜಿವರೆಗಿನ ಸಂಸ್ಥೆಗಳು, ಬ್ಯಾಂಕುಗಳು ಕೆಲವೊಂದು ಸಂಕೀರ್ಣವಾದ ಫೈಲಿಂಗ್ಗಳನ್ನು ಮಾಡಿದೆ ಎಂದು ಬ್ಲೂಬರ್ಗ್ ವರದಿ ಹೇಳಿದೆ. ಸಂಸ್ಥೆಯು 85 ಪುಟಗಳ ದಾಖಲೆಯನ್ನು ಸಲ್ಲಿಸಿದೆ. ಇದರಲ್ಲಿ 7 ಲೀಸ್ಟ್ ಆಗದ ಸಂಸ್ಥೆಗಳ ಡಯಾಗ್ರಮ್ ಇದೆ. ಸಂಸ್ಥೆಯು ಬ್ರಿಟಿಷ್ ಮೂಲದ ಐಸ್ಲ್ಯಾಂಡ್, ಮೌರಿಟ್ಸ್ ಮತ್ತು ದುಬೈನಲ್ಲಿ ರಿಜಿಸ್ಟಾರ್ ಆಗಿದೆ.
ವಿನೋದ್ ಮತ್ತು ಪತ್ನಿ ರಂಜನ್ಬೆನ್
ಈ ಸಂಸ್ಥೆಗಳು ಒಂದಕ್ಕೊಂದು ಸಂಬಂಧವಿರುವ ಸಂಸ್ಥೆಯಾಗಿದೆ. ಹಾಗೆಯೇ ಈ ಪೈಕಿ ಒಂದು ತೆರೆದ ಮಾರುಕಟ್ಟೆಯಲ್ಲಿ ಸಿಮೆಂಟ್ ಸಂಸ್ಥೆಯ ಷೇರನ್ನು ಖರೀದಿಸುತ್ತಿದೆ ಎಂದು ವರದಿ ಹೇಳಿದೆ. ಕಂಪನಿಯ ಪೇಪರ್ಗಳು ಬಿಲಿಯನೇರ್ ಗೌತಮ್ ಅದಾನಿ ಅವರನ್ನು ಪಟ್ಟಿ ಮಾಡದ ಏಳು ಘಟಕಗಳ ಅಂತಿಮ ಫಲಾನುಭವಿ ಎಂದು ಉಲ್ಲೇಖಿಸಿಲ್ಲ ಎಂದು ವರದಿ ಹೇಳಿದೆ. ಬದಲಾಗಿ, ಇದರ ಲಾಭ ಪಡೆಯುವ ಮಾಲೀಕರು ಗೌತಮ್ ಅದಾನಿಯ ಹಿರಿಯ ಸಹೋದರ ವಿನೋದ್ ಮತ್ತು ವಿನೋದ್ ಪತ್ನಿ ರಂಜನ್ಬೆನ್ ಎಂದು ಉಲ್ಲೇಖಿಸಲಾಗಿದೆ.
ಸಂಸ್ಥೆಯ ವೆಬ್ಸೈಟ್ ಪ್ರಕಾರ ವಿನೋದ್ ಮತ್ತು ರಂಜನ್ಬೆನ್ ಅದಾನಿ ಗ್ರೂಪ್ನ ಯಾವುದೇ ಸಂಸ್ಥೆಗಳಲ್ಲಿ ನಿರ್ವಹಣಾ ಸ್ಥಾನವನ್ನು ಹೊಂದಿಲ್ಲ. ಹಾಗೆಯೇ ಹಿರಿಯ ಅಧಿಕಾರಿಗಳ ಸ್ಥಾನದಲ್ಲಿಲ್ಲ. ಬ್ಲೂಬರ್ಗ್ ವರದಿ ಪ್ರಕಾರ ವಿನೋದ್ ಮತ್ತು ಅವರ ಪತ್ನಿ ಹೆಸರು ಸಾರ್ವಜನಿಕವಾಗಿ ಮುಚ್ಚಿಡಲಾಗಿದೆ. ಆದರೆ ಅದಾನಿ ಗ್ರೂಪ್ನ ಎಲ್ಲ ಡೀಲ್ಗಳಲ್ಲಿ ವಿನೋದ್ ಅದಾನಿ ಮುಖ್ಯ ಸಂಧಾನಕಾರರಾಗಿದ್ದಾರೆ. ಸಣ್ಣ ಸಂಸ್ಥೆಗಳು ಉತ್ತಮವಾಗಿ ವಹಿವಾಟು ನಡೆಸುವಾಗ ಅದಾನಿ ಗ್ರೂಪ್ ಹೇಗೆ ಅದನ್ನು ವಶಕ್ಕೆ ಪಡೆಯುತ್ತದೆ ಎಂದು ಕೂಡಾ ವರದಿ ವಿವರಿಸಿದೆ
More From GoodReturns

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications