ವಾಟ್ಸ್ ಆ್ಯಪ್ ಭಾರತದಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಅಪ್ಲಿಕೇಶನ್. ಎಲ್ಲಾ ವಯಸ್ಸಿನವರು ವಾಟ್ಸ್ಆ್ಯಪ್ ಅಪ್ಲಿಕೇಶನ್ಗೆ ಮಾರು ಹೋಗಿದ್ದಾರೆ. ಹೊಸ ಹೊಸ ಅಪ್ಡೇಟ್ಗಳನ್ನು ಮಾಡುವ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗುತ್ತಿದೆ. ಆದರೆ ಮುಂದಿನ ಕೆಲವೇ ವಾರಗಳಲ್ಲಿ ಅನೇಕ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ.
ಹಳೆಯ ಆ್ಯಂಡ್ರಾಯ್ಡ್, ಐಒಎಸ್ ಫೋನ್ಗಳು
ನೀವು ಹಳೆಯ ಆ್ಯಂಡ್ರಾಯ್ಡ್, ಐಒಎಸ್ ಫೋನ್ಗಳನ್ನು ಬಳಸುತ್ತಿದ್ದೀರಾ? ಹಾಗಿದ್ರೆ ಅದರಲ್ಲಿ ಫೆಬ್ರವರಿಯಿಂದ 1ರಿಂದ ವಾಟ್ಸ್ ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ. ಹೊಸ ಮಾದರಿಯಲ್ಲಿ ವಾಟ್ಸ್ ಆ್ಯಪ್ ಅಪ್ಲಿಕೇಶನ್ ನವೀಕರಿಸುತ್ತಿರುವುದರ ಜೊತೆಗೆ ಈ ಮೊಬೈಲ್ಗಳಲ್ಲಿ ಸಪೋರ್ಟ್ ಮಾಡುವಂತಹ ಬೆಂಬಲವನ್ನು ಹಿಂಪಡೆಯುತ್ತಿರುವುದರಿಂದ ವಾಟ್ಸ್ ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ.
ಈ ಮೊಬೈಲ್ಗಳಲ್ಲಿ ವಾಟ್ಸ್ ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ
ವಾಟ್ಸ್ ಆ್ಯಪ್ FAQ(ಪದೇ ಪದೇ ಕೇಳಲಾದ ಪ್ರಶ್ನೆಗಳು) ವಿಭಾಗದ ಮಾಹಿತಿಯ ಪ್ರಕಾರ ಆ್ಯಂಡ್ರಾಯ್ಡ್ 2.3.7 ಆಪರೇಟಿಂಗ್ ಸಿಸ್ಟಮ್ನಲ್ಲಿ ಹಾಗೂ ಐಒಎಸ್ 7 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಐಫೋನ್ಗಳು ಮುಂದಿನ ದಿನಗಳಲ್ಲಿ ವಾಟ್ಸ್ ಆ್ಯಪ್ಗೆ ಸಹಕರಿಸುವುದಿಲ್ಲ. ಅಂದರೆ ಈ ಮೊಬೈಲ್ಗಳು ವಾಟ್ಸ್ ಆ್ಯಪ್ಗೆ ಸಪೋರ್ಟ್ ಮಾಡುವುದಿಲ್ಲ.
ಹೊಸ ಖಾತೆಯನ್ನು ರಚಿಸಲು ಸಾಧ್ಯವಿಲ್ಲ!
ಹಳೆಯ ಮೊಬೈಲ್ಗಳಲ್ಲಿ ವಾಟ್ಸ್ ಆ್ಯಪ್ ಸಪೋರ್ಟ್ ಮಾಡುವುದಿಲ್ಲ. ಇದಲ್ಲದೆ, ಹಳೆಯ ಆವೃತ್ತಿಯ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್ಗಳಲ್ಲಿ ಹೊಸದಾಗಿ ಖಾತೆಯನ್ನು ರಚಿಸಲು ಸಾಧ್ಯವಿಲ್ಲ. ಫೆಬ್ರವರಿ 1, 2020ರ ನಂತರ ಸದ್ಯ ಇರುವಂತಹ ಖಾತೆಯನ್ನು ಮರು ಪರಿಶೀಲಿಸಲು(Re-verify) ಸಾಧ್ಯವಿಲ್ಲ ಎಂದು FAQ ಹೇಳಿದೆ.
ವಿಂಡೋಸ್ ಫೋನ್ಗಳಲ್ಲಿ ಇದೇ ವರ್ಷ ಕೊನೆ!
ಡಿಸೆಂಬರ್ 31, 2019ರಿಂದ ಎಲ್ಲಾ ವಿಂಡೋಸ್ ಫೋನ್ಗಳಲ್ಲಿ ಕಾರ್ಯ ನಿರ್ವಹಣೆಗೆ ನೀಡಿದ್ದ ಬೆಂಬಲವನ್ನು ವಾಟ್ಸ್ ಆ್ಯಪ್ ಹಿಂಪಡೆದುಕೊಳ್ಳಲಿದೆ. ಅಂದರೆ, ನಂತರದ ದಿನಗಳಲ್ಲಿ ವಿಂಡೋಸ್ ಫೋನ್ಗಳಲ್ಲೂ ವಾಟ್ಸ್ ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications