ಬ್ಲ್ಯೂ ಅಮೋನಿಯಾವನ್ನು ಸೌದಿ ಅರೇಬಿಯಾದಿಂದ ಜಪಾನ್ ಗೆ ರವಾನಿಸಲಾಗುತ್ತಿದೆ. ಇದು ವಿಶ್ವದಲ್ಲೇ ಮೊದಲು. ಇದನ್ನು ಜಪಾನ್ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಗಾಗಿ ಬಳಸಲಾಗುತ್ತಿದೆ. ಇದರಿಂದ ಇಂಗಾಲದ ಹೊರಸೂಸುವಿಕೆ ಇರುವುದಿಲ್ಲ. ಭಾನುವಾರದಂದು ಈ ಬಗ್ಗೆ ಸೌದಿ ಅರಾಮ್ಕೋ ಘೋಷಣೆ ಮಾಡಿದೆ.
ಮೊದಲಿಗೆ ಹೈಡ್ರೋಕಾರ್ಬನ್ ಅನ್ನು ಹೈಡ್ರೋಜನ್ (ಜಲಜನಕ) ಆಗಿ ಪರಿವರ್ತಿಸಿ, ಆ ನಂತರ ಅಮೋನಿಯಾವಾಗಿ ಮಾಡಲಾಗಿದೆ ಮತ್ತು ಕಾರ್ಬನ್ ಡೈ ಆಕ್ಸೈಡ್ ಉಪ ಉತ್ಪನ್ನಗಳನ್ನು ಹಿಡಿದಿಟ್ಟು, ಇಂಧನವನ್ನು ಉತ್ಪಾದಿಸಿದೆ. ಮೊದಲಿಗೆ 40 ಟನ್ ಬ್ಲ್ಯೂ ಅಮೋನಿಯಾವನ್ನು ಜಪಾನ್ ಸ್ವೀಕರಿಸಲಿದೆ ಎಂದು ಅರಾಮ್ಕೋ ಹೇಳಿದೆ.
ಕಾರ್ಬನ್ ಹೊರಸೂಸುವಿಕೆ ಇಲ್ಲದೆ ಅಮೋನಿಯಾವನ್ನು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಬಳಸಬಹುದು. ಇದರರ್ಥ ಏನೆಂದರೆ, ಕೈಗೆಟುಕುವ ದರದಲ್ಲಿ ಹಾಗೂ ನಂಬಿಕೆ ಇಡಬಹುದಾದ ಭವಿಷ್ಯದ ಕಡಿಮೆ ಕಾರ್ಬನ್ ಇಂಧನ ಇದು ಎಂದು ಸೌದಿ ಅರೇಬಿಯಾದ ಸರ್ಕಾರಿ ಕಂಪೆನಿ ಅರಾಮ್ಕೋ ತಿಳಿಸಿದೆ.

ಹೈಡ್ರೋಜನ್ ಬಳಕೆಯಲ್ಲಿ ವಿಶ್ವದ ಮುಂಚೂಣಿ ಸ್ಥಾನದಲ್ಲಿ ನಿಲ್ಲಬೇಕು ಎಂಬುದು ಜಪಾನ್ ಗುರಿ. ಇದು ಅಮೋನಿಯಾದಲ್ಲಿ ಇರುತ್ತದೆ. ಪ್ಯಾರಿಸ್ ಒಪ್ಪಂದದಂತೆ 2030ರ ಹೊತ್ತಿಗೆ ಗ್ರೀನ್ ಹೌಸ್ ಅನಿಲ ಹೊರಸೂಸುವಿಕೆ 26% ಕಡಿಮೆ ಮಾಡುವ ಗುರಿಯನ್ನು ಜಪಾನ್ ಹಾಕಿಕೊಂಡಿದೆ.
ಬ್ಲ್ಯೂ ಅಮೋನಿಯಾವನ್ನು ಹಸಿರು ಜಲಜನಕ (ಹೈಡ್ರೋಜನ್) ಎನ್ನಲಾಗುತ್ತದೆ. ವಿಶ್ವದಲ್ಲೇ ಅತಿ ದೊಡ್ಡ ತೈಲ ಉತ್ಪಾದಕ ಸೌದಿ ಅರೇಬಿಯಾಗೆ ಈಗ ತನ್ನ ಹಣೆಪಟ್ಟಿಯಾದ 'ಡರ್ಟಿ ಎನರ್ಜಿ ಎಕ್ಸ್ ಪೋರ್ಟರ್' ಎಂಬುದನ್ನು ಕಳಚಿಕೊಳ್ಳಬೇಕಿದೆ. ಯುಎಸ್ ನ ಏರ್ ಪ್ರಾಡಕ್ಟ್ಸ್ ಅಂಡ್ ಕೆಮಿಕಲ್ಸ್ ಜತೆಗೆ ಸೌದಿ ಮೂಲಕದ ಎಸಿಡಬ್ಲ್ಯುಎ ಪವರ್ ಇಂಟರ್ ನ್ಯಾಷನಲ್ ಕಳೆದ ಜುಲೈನಲ್ಲಿ ಒಪ್ಪಂದ ಮಾಡಿಕೊಂಡಿದೆ.
ಅದರ ಪ್ರಕಾರ ಭವಿಷ್ಯದಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಹೈಡ್ರೋಜನ್ ಆಧಾರಿತ ಅಮೋನಿಯಾ ಘಟಕವನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿವೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications