ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಟಾಟಾ ಮೋಟಾರ್ಸ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಸಹಯೋಗದಲ್ಲಿ ಮಂಗಳವಾರ ವಿಧಾನಸೌಧದಿಂದ 100 ನಾನ್-ಎಸಿ ಎಲೆಕ್ಟ್ರಿಕ್ ಬಸ್ಗಳಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಮತ್ತು ವಾಹನ ಮಾಲಿನ್ಯವನ್ನು ತಡೆಗಟ್ಟಲು ಇ-ಬಸ್ ಅನ್ನು ಆರಂಭಿಸಲಾಗಿದೆ.
ಬಿಎಂಟಿಸಿಯು ವಾಹನ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ 921 ಇ-ಬಸ್ಗಳನ್ನು ನಿಯೋಜಿಸುವ ಭಾಗವಾಗಿ 100 ನಾನ್-ಎಸಿ ಎಲೆಕ್ಟ್ರಿಕ್ ಬಸ್ಗಳಿಗೆ ಈಗ ಚಾಲನೆ ನೀಡಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಇ-ಬಸ್ಗಳ ಸಾಮರ್ಥ್ಯವು ಏಪ್ರಿಲ್ 2024 ರ ವೇಳೆಗೆ 1,751 ಕ್ಕೆ ತಲುಪಲಿದೆ.

ಸಾರಿಗೆ ಒಕ್ಕೂಟದ ಬಹಿಷ್ಕಾರ
ಅನಂತ ಸುಬ್ಬರಾವ್ ನೇತೃತ್ವದ ಬಿಎಂಟಿಸಿಯ ಮಾನ್ಯತೆ ಪಡೆದ ಸಾರಿಗೆ ಒಕ್ಕೂಟದ ಬಹಿಷ್ಕಾರದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಇತರ ಗಣ್ಯರು ಬಸ್ಗಳಿಗೆ ಚಾಲನೆ ನೀಡಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ ಅವರು ಅಧಿಕಾರ ವಹಿಸಿಕೊಂಡ ನಂತರ ನೌಕರರ ಕುಂದುಕೊರತೆಗಳನ್ನು ಪರಿಹರಿಸಿಲ್ಲ ಎಂದು ಸಂಘ ಆರೋಪಿಸಿದೆ.
ಯಾವೆಲ್ಲ ಮಾರ್ಗದಲ್ಲಿ ಬಸ್ ಸಂಚಾರ?
834 ಟ್ರಿಪ್ಗಳ ಒಟ್ಟು 113 ವೇಳಾಪಟ್ಟಿಗಳೊಂದಿಗೆ 19 ಮಾರ್ಗಗಳಲ್ಲಿ ಬಸ್ಗಳನ್ನು ನಿಯೋಜಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ (ಕೆಬಿಎಸ್) ನಿಂದ ಕೋರಮಂಗಲ, ಬನಶಂಕರಿ ಟಿಟಿಎಂಸಿಯಿಂದ ಹಾರೋಹಳ್ಳಿ, ಶಿವಾಜಿನಗರದಿಂದ ಕಾಡುಗೋಡಿ, ಕೆಬಿಎಸ್ನಿಂದ ಸರ್ಜಾಪುರ, ಕೆಬಿಎಸ್ನಿಂದ ಆನೇಕಲ್, ಕೆಬಿಎಸ್ನಿಂದ ಅತ್ತಿಬೆಲೆ, ಕೆಬಿಎಸ್ನಿಂದ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ ಸೇರಿದಂತೆ ಕೆಲವು ಮಾರ್ಗಗಳಲ್ಲಿ ಈ ಬಸ್ ಸಂಚಾರ ಮಾಡಲಿದೆ.
ಟಾಟಾ ಮೋಟಾರ್ಸ್ನಿಂದ ಗ್ರಾಸ್ ಕಾಸ್ಟ್ ಕಾಂಟ್ರಾಕ್ಟಿಂಗ್ (ಜಿಸಿಸಿ) ಮಾದರಿಯ ಆಧಾರದ ಮೇಲೆ ಪ್ರತಿ ಕಿ.ಮೀಗೆ 40 ರೂಪಾಯಿ ದರದಲ್ಲಿ ಬಸ್ಗಳನ್ನು ಖರೀದಿಸಲಾಗಿದೆ ಎಂದು ರೆಡ್ಡಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. "ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಬಸ್ಗಳನ್ನು ಖರೀದಿಸಿಲ್ಲ. ಇದರ ಪರಿಣಾಮವಾಗಿ, ಎಲ್ಲಾ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಸಾರ್ವಜನಿಕ ಸಾರಿಗೆಯ ಬೇಡಿಕೆಯನ್ನು ಪೂರೈಸಲು ಈ ವರ್ಷ 5,000 ಬಸ್ಗಳನ್ನು ಖರೀದಿಸಲಿವೆ," ಎಂದು ಹೇಳಿದರು.
ನೇಮಕಾತಿ ಮಾಡುವ ಭರವಸೆ
"ವಿಶೇಷವಾಗಿ ಶಕ್ತಿ ಯೋಜನೆಯ ನಂತರ ಈ ಬಸ್ಗಳ ಬೇಡಿಕೆ ಅಧಿಕವಾಗಿದೆ. 2016 ರಿಂದ, ಸುಮಾರು 13,888 ಉದ್ಯೋಗಿಗಳು ನಿವೃತ್ತರಾಗಿದ್ದಾರೆ. ಆದರೆ ಯಾವುದೇ ನೇಮಕಾತಿ ನಡೆದಿಲ್ಲ. ಈಗ ಮುಖ್ಯಮಂತ್ರಿಗಳು ಎಲ್ಲಾ ನಿಗಮಗಳಲ್ಲಿ ಸುಮಾರು 9,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುಮೋದನೆ ನೀಡಿದ್ದಾರೆ. ಮಾರ್ಚ್ 2024 ರ ವೇಳೆಗೆ, ನಾವು ನೇಮಕಾತಿಯನ್ನು ಪೂರ್ಣಗೊಳಿಸುತ್ತೇವೆ ಮತ್ತು ಬಸ್ಗಳನ್ನು ಖರೀದಿಸುತ್ತೇವೆ," ಎಂದು ವಿವರಿಸಿದರು.
ಯಾವೆಲ್ಲ ಪ್ರದೇಶದಲ್ಲಿ ಚಾರ್ಜಿಂಗ್ ಪಾಯಿಂಟ್?
ಮಂಗಳವಾರ ಹೊಸದಾಗಿ ಸೇರ್ಪಡೆಗೊಂಡ ಇ-ಬಸ್ಗಳು 12 ಮೀಟರ್ ಉದ್ದ ಮತ್ತು 400 ಎಂಎಂ ನೆಲದ ಎತ್ತರವನ್ನು ಹೊಂದಿವೆ. ಪ್ರತಿ ಚಾರ್ಜ್ಗೆ ಬಸ್ಗಳು 200 ಕಿಮೀ ದೂರವನ್ನು ಕ್ರಮಿಸಬಹುದಾಗಿದೆ. ಪ್ರಸ್ತುತ ಕೆಬಿಎಸ್, ಕೆಆರ್ ಮಾರುಕಟ್ಟೆ, ಶಿವಾಜಿನಗರ, ಬನ್ನೇರುಘಟ್ಟ ಟಿಟಿಎಂಸಿ, ಬಿಟಿಎಂ ಲೇಔಟ್, ಹೆಬ್ಬಾಳ ಮತ್ತು ಬಾಗಲಗುಂಟೆ ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಪಾಯಿಂಟ್ಗಳು ಲಭ್ಯವಿವೆ. ಇ-ಬಸ್ 35 ಪ್ರಯಾಣಿಕರ ಆಸನ ಸಾಮರ್ಥ್ಯ, ಪ್ಯಾನಿಕ್ ಬಟನ್ ಮತ್ತು ವೀಲ್ಚೇರ್ ರಾಂಪ್ ಫೀಚರ್ ಅನ್ನು ಹೊಂದಿದೆ.
ಇದೇ ವೇಳೆ ಮಾತನಾಡಿದ ಸಾರಿಗೆ ಸಂಘದ ಅಧ್ಯಕ್ಷ ಸುಬ್ಬರಾವ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ನೀವು ನೌಕರರ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಸಂಘವನ್ನು ಭೇಟಿ ಮಾಡಿಲ್ಲ. ನೀವು ಒಕ್ಕೂಟವನ್ನು ವಿರೋಧಿಸುವುದರಿಂದ ಮತ್ತು ನಾವು ಬೇಕಾಗಿಲ್ಲದ ಕಾರಣ, ನಿಮ್ಮ ಕಾರ್ಯಕ್ರಮಗಳು ನಮಗೆ ಅಗತ್ಯವಿಲ್ಲ ಎಂದು ನಾವು ನಿರ್ಧರಿಸಿದ್ದೇವೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಮ್ಮ ಒಕ್ಕೂಟದ ಕರಪತ್ರಗಳನ್ನು ನೌಕರರ ನಡುವೆ ಹಂಚಿದ್ದಕ್ಕಾಗಿ ನೀವು ನಿಯಮ 23 ರ ಅಡಿಯಲ್ಲಿ ನಮ್ಮ ವಿರುದ್ಧ ವಿಚಾರಣೆಯನ್ನು ಸಹ ಪ್ರಾರಂಭಿಸಿದ್ದೀರಿ. ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಕಾರ್ಮಿಕ ಸಂಘದ ಸದಸ್ಯನನ್ನು ಅಮಾನತುಗೊಳಿಸಲಾಗಿದೆ. ವ್ಯಾಪಾರ ಒಪ್ಪಂದಗಳನ್ನು ಉಲ್ಲಂಘಿಸುವ ಮೂಲಕ ನೀವು ನೌಕರರು ಮತ್ತು ನಿಗಮದ ನಡುವಿನ ಸಂಬಂಧವನ್ನು ಹಾಳು ಮಾಡಿದ್ದೀರಿ," ಎಂದು ಆರೋಪಿಸಿದರು. ಸರ್ಕಾರವು ವ್ಯವಸ್ಥಾಪಕ ನಿರ್ದೇಶಕರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
More From GoodReturns

LPG Gas Cylinder: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ, ಹೋಟೆಲ್ ಉದ್ಯಮಕ್ಕೆ ಅಡ್ಡಿ; ಪ್ರಧಾನಿಗೆ ಪತ್ರ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Tejasvi Surya: ಹೋಟೆಲ್ ಉದ್ಯಮದ ಬೆಂಬಲಕ್ಕೆ ನಿಂತ ತೇಜಸ್ವಿ ಸೂರ್ಯ; LPG ಗ್ಯಾಸ್ ಪೂರೈಸುವಂತೆ ಮನವಿ

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ



Click it and Unblock the Notifications