ಭಾರತದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಿಸಲಿದ್ದಾರೆ. ಇದಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿದೆ. ಈ ನಡುವೆ ಎಲ್ಲಾ ವಲಯಗಳು ಬಜೆಟ್ ನಿರೀಕ್ಷೆಯನ್ನು ಹೊರಹಾಕಿದೆ. ಈ ನಡುವೆ ಉದ್ಯಮಗಳು ಮತ್ತು ಉದ್ಯಮ ತಜ್ಞರು ಕೂಡಾ ಬಜೆಟ್ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಹೆಚ್ಚಾಗಿ ಸಂಕಷ್ಟಕ್ಕೆ ಒಳಗಾಗಿರುವ ಈ ಸ್ಟಾರ್ಟ್ಅಪ್ಗಳು ಬಜೆಟ್ನಿಂದ ಕೆಲವು ಮಹತ್ತರವಾಗಿ, ಮಹತ್ವದ ನಿರೀಕ್ಷೆಯನ್ನು ಹೊಂದಿದೆ. ಜೊತೆಗೆ ಉದ್ಯಮದ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುವಂತೆ ಭಾರತೀಯ ಸ್ಟಾರ್ಟ್ಅಪ್ಗಳು ಸರ್ಕಾರಕ್ಕೆ ಮನವಿ ಮಾಡಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ಪರಿಣಾಮಗಳಿಂದ ಈಗಾಗಲೇ ತತ್ತರಿಸುತ್ತಿರುವ ಭಾರತೀಯ ಆರ್ಥಿಕತೆ ಮತ್ತು ಸ್ಟಾರ್ಟ್ಅಪ್ಗಳು ಮುಂಬರುವ ಬಜೆಟ್ನ ಕಾರಣದಿಂದಾಗಿ ಉತ್ತಮ ಬೆಳವಣಿಗೆ ಕಾಣುವ ಆಶಾದಾಯಕ ನಿರೀಕ್ಷೆಯನ್ನು ಹೊಂದಿದೆ. ಸ್ಟಾರ್ಟ್-ಅಪ್ ವ್ಯವಸ್ಥೆಯು ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಪ್ರಮುಖವಾಗಿ ಹೊಸ ಪಾಲಿಸಿ, ತೆರಿಗೆ ವಿನಾಯಿತಿ ನಿರೀಕ್ಷೆಯನ್ನು ಹೊಂದಿದೆ. ಆ ನಿರೀಕ್ಷೆಗಳು ಏನು ಎಂಬುವುದನ್ನು ತಿಳಿಯಲು ಮುಂದೆ ಓದಿ..
ಸ್ಟಾರ್ಟ್ಅಪ್-ಸ್ನೇಹಿ ಪಾಲಿಸಿ
ಕೇಂದ್ರ ಬಜೆಟ್ 2022-23 ರಲ್ಲಿ ಹೊಸ ಸ್ಟಾರ್ಟ್ಅಪ್-ಸ್ನೇಹಿ ಪಾಲಿಸಿ ಹಾಗೂ ತೆರಿಗೆ ಸಡಿಲಿಕೆ ಮಾಡುವುದು ಸಹಾಯಕ ಎಂದು ಸ್ಥಳೀಯ ಸ್ಟಾರ್ಟ್ಅಪ್ಗಳ ಗುಂಪು ಸಲಹೆ ನೀಡಿದೆ. ಸಣ್ಣ ಉದ್ಯಮಗಳಿಗೆ ಮತ್ತಷ್ಟು ಪ್ರಯೋಜನವನ್ನು ನೀಡುವ ಸಲುವಾಗಿ, ವ್ಯವಹಾರವನ್ನು ಸುಲಭಗೊಳಿಸಲು, ವೆಚ್ಚಗಳನ್ನು ಕಡಿತಗೊಳಿಸಲು ಮತ್ತು ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಕ್ರಮಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದೆ. ತಂತ್ರಜ್ಞಾನದ ಮೂಲಕ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಹೊಸ ಸುಧಾರಣೆಗಳು, ನೀತಿ ಹಾಗೂ ಬೆಂಬಲ ಕಾರ್ಯವಿಧಾನಗಳನ್ನು ಜಾರಿಗೆ ತರುವುದರಿಂದಾಗಿ ದೊಡ್ಡ ಆರ್ಥಿಕ ಪರಿಣಾಮವನ್ನು ಬೀರುತ್ತವೆ ಎಂದು ಒತ್ತಿ ಹೇಳಿದೆ. ಸ್ಟಾರ್ಟ್ಅಪ್ಗಳು ಪ್ರಗತಿಪರ ಬಜೆಟ್ ಅನ್ನು ಎದುರು ನೋಡುತ್ತಿದೆ. ಇದು ಭಾರತದಲ್ಲಿ ಸ್ಟಾರ್ಟ್ಅಪ್ಗಳ ಸಮಸ್ಯೆಗಳನ್ನು ಪರಿಹರಿಸುವ ದೇಶೀಯ ಉದ್ಯಮಿಗಳನ್ನು ಬೆಳೆಸಲು ಒತ್ತು ನೀಡಲಿದೆ ಎಂಬ ನಿರೀಕ್ಷೆ ಇದೆ. ಸರ್ಕಾರವು ಉದ್ಯಮಿಗಳಿಗೆ ಸರಳವಾದ ಕಾನೂನು, ಮಾನದಂಡಗಳನ್ನು ಜಾರಿಗೆ ತರಲು ಪ್ರಯತ್ನ ಮಾಡಬೇಕಾಗಿದೆ ಎಂದು ಸ್ಟಾರ್ಟ್ಅಪ್ಗಳ ಗುಂಪು ಸಲಹೆ ನೀಡಿದೆ.
ಸ್ಟಾರ್ಟ್ಅಪ್ಗಳಿಗೆ ಫಂಡ್ ಹೆಚ್ಚಳ ನಿರೀಕ್ಷೆ
ಸ್ಟಾರ್ಟ್ಅಪ್ಗಳಿಗಾಗಿ ಇರುವ ಫಂಡ್ಸ್ ಫಾರ್ ಸ್ಟಾರ್ಟ್ಅಪ್ (ಎಫ್ಎಫ್ಎಸ್) ಫಂಡ್ಗೆ ಸರ್ಕಾರ ನೀಡುವ ಕೊಡುಗೆಯನ್ನು ಹೆಚ್ಚಳ ಮಾಡಲು ಸ್ಟಾರ್ಟ್ಅಪ್ಗಳು ಬಯಸುತ್ತಿದೆ. ಈ ಫಂಡ್ ಹೆಚ್ಚಳ ಮಾಡಿದರೆ ಸ್ಟಾರ್ಟ್ಅಪ್ಗಳ ಬೆಳವಣಿಗೆಗೆ ಸಹಾಯ ಆಗಲಿದೆ. ಸುಲಭವಾದ ಸಾಲ ನೀಡಿಕೆ ಪ್ರಕ್ರಿಯೆ, ತೆರಿಗೆ ನಿಯಮ ಸರಳ ಮಾಡುವುದು, ಕಾಗದರಹಿತ ವಹಿವಾಟು ಮೂಲಕ ಸರ್ಕಾರವು ಸ್ಟಾರ್ಟ್ಅಪ್ಗಳು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕಾಗಿದೆ.
ಇಜಿಎಲ್ಜಿಎಸ್ ಕಾರ್ಯಕ್ರಮ ವಿಸ್ತರಣೆ
ಮುಂದಿನ ಆರ್ಥಿಕ ವರ್ಷದ ಬಹುಪಾಲು ಅವಧಿಗೆ, ಇಜಿಎಲ್ಜಿಎಸ್ (ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್) ಅನ್ನು ವಿಸ್ತರಣೆ ಮಾಡುವಂತೆ ಸರ್ಕಾರ ಗಮನ ಹರಿಸಲಿದೆ ಎಂಬ ಭರವಸೆಯನ್ನು ಸ್ಟಾರ್ಟ್ಅಪ್ಗಳು ಹೊಂದಿದೆ. ಈ ಕಾರ್ಯಕ್ರಮಗಳಲ್ಲಿನ ಬಡ್ಡಿದರದ ಮೇಲೆ ನಿರ್ಬಂಧವಿರಬಾರದು, ಏಕೆಂದರೆ ಇದು ಮೈಕ್ರೋ-ಸ್ಕೇಲ್ ಉದ್ಯಮಗಳಿಗೆ ಹಣವು ಲಭ್ಯವಾಗುವಂತೆ ಮಾಡಲು ಸಹಕಾರಿ ಎಂದು ಗುಂಪು ಹೇಳಿಕೊಂಡಿದೆ. ಬಡ್ಡಿಯ ಮೇಲಿನ ಮಿತಿಯು ದೊಡ್ಡ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ, ಆದರೆ ಸಣ್ಣ ವ್ಯವಹಾರಗಳು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ವಿವರಿಸಿದೆ. ಭಾಷೆ, ಸಾಕ್ಷರತೆ, ಭೌಗೋಳಿಕತೆ ಅಥವಾ ಆದಾಯದ ಮೂಲವನ್ನು ಲೆಕ್ಕಿಸದೆ ಮುಂಬರುವ ಬಜೆಟ್ನಲ್ಲಿ ಸಾಲ ಪಡೆಯಲು ಮುಂದಾಗುವ ಸ್ಟಾರ್ಟ್ಅಪ್ಗಳನ್ನು ಕೇಂದ್ರ ಸರ್ಕಾರ ಬೆಂಬಲಿಸಬೇಕು ಎಂದು ಸ್ಟಾರ್ಟ್ಅಪ್ಗಳ ಗುಂಪು ಹೇಳಿದೆ.
"ಇಎಸ್ಒಪಿ ಆದಾಯದ ಮೇಲಿನ ತೆರಿಗೆ ತೆಗೆಯಿರಿ"
ಕಳೆದ ವರ್ಷ, ಸರ್ಕಾರವು ಇಎಸ್ಒಪಿಗಳನ್ನು ಉತ್ತೇಜಿಸಲು ಸ್ಟಾರ್ಟ್ಅಪ್ಗಳಿಗೆ ತೆರಿಗೆ ವಿನಾಯಿತಿ ಕ್ಲೈಮ್ ಮಾಡುವ ಗಡುವನ್ನು ಒಂದು ವರ್ಷದವರೆಗೆ ವಿಸ್ತರಿಸಿತು. ಅಂದರೆ ಮಾರ್ಚ್ 31, 2022 ರವರೆಗೆ ವಿಸ್ತಾರ ಮಾಡಲಾಗಿದೆ. ಅದರ ಹೊರತಾಗಿ, ಹಣಕಾಸು ಉತ್ತೇಜನಕ್ಕಾಗಿ ಸ್ಟಾರ್ಟ್ಅಪ್ ಹೂಡಿಕೆಗಳಿಗೆ ಬಂಡವಾಳ ಲಾಭದ ವಿನಾಯಿತಿಯನ್ನು ಸರ್ಕಾರವು ಒಂದು ವರ್ಷದವರೆಗೆ ವಿಸ್ತರಿಸಿದೆ. ಅಂದರೆ ಅದು ಕೂಡಾ ಮಾರ್ಚ್ 31, 2022 ರವರೆಗೆ ವಿಸ್ತಾರ ಮಾಡಲಾಗಿದೆ. ರಾಷ್ಟ್ರದ ಅನೇಕ ಸ್ಟಾರ್ಟ್ಅಪ್ಗಳು ಹಿಂದಿನ ವರ್ಷದಲ್ಲಿ ಉದ್ಯೋಗಿಗಳ ಸ್ಟಾಕ್ ಮಾಲೀಕತ್ವದ ಯೋಜನೆಗಳನ್ನು (ಇಎಸ್ಒಪಿ) ಖರೀದಿ ಮಾಡುವಂತೆ ತಮ್ಮ ಉದ್ಯೋಗಿಗಳಿಗೆ ಹೇಳಿದೆ. ಈ ಆಯ್ಕೆಯ ಮೂಲಕ ತೆರಿಗೆ ಪಾವತಿಗಳನ್ನು ಮುಂದೂಡುವುದು, ಹಾಗೆಯೇ ಕೆಲವು ಇಎಸ್ಒಪಿ ಆದಾಯದ ಮೇಲಿನ ತೆರಿಗೆಯನ್ನು ತೆಗೆದುಹಾಕುವುದು ಮುಂದಿನ ಬಜೆಟ್ನಲ್ಲಿ ಇದ್ದರೆ ಅದು ಸ್ವಾಗತಾರ್ಹ ವಿಚಾರವಾಗಿದೆ ಎಂದು ಸ್ಟಾರ್ಟ್ಅಪ್ ಗುಂಪು ತಿಳಿಸಿದೆ.
ಎಲೆಕ್ಟ್ರಿಕ್ ಕಾರ್ ಸ್ನೇಹಿ ವ್ಯವಸ್ಥೆ
ಸ್ಥಳೀಯ ಎಲೆಕ್ಟ್ರಿಕ್ ಕಾರು ತಯಾರಿಕೆಯನ್ನು ಉತ್ತೇಜಿಸಲು, ಹಣಕಾಸು ಹರಿವು ಸರಾಗಗೊಳಿಸಲು ಮತ್ತು ಇವಿ-ಸ್ನೇಹಿ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರವು ಹೊಸ ಸುಧಾರಣೆಯನ್ನು ತರುವ ನಿರೀಕ್ಷೆಯನ್ನು ಸ್ಟಾರ್ಟ್ಅಪ್ಗಳು ಹೊಂದಿದೆ. ದೇಶದಲ್ಲಿ ಇವಿ ಅನ್ನು ಪ್ರಚಾರ ಮಾಡಲು ಮತ್ತು ವಿಸ್ತರಿಸಲು ಇದು ಉತ್ತಮ ಹೆಜ್ಜೆ ಎಂದು ನಿರೀಕ್ಷಿಸಲಾಗಿದೆ. ಇವಿ ಸೆಕ್ಟರ್ ಸ್ಟಾರ್ಟ್ಅಪ್ಗಳು ಇವಿ ಖರೀದಿ ಮತ್ತು ಬಾಡಿಗೆಗಳ ಮೇಲಿನ ಜಿಎಸ್ಟಿ ಅನ್ನು 5% ರಿಂದ 2% ಕ್ಕೆ ಇಳಿಸಲು ಸರ್ಕಾರವನ್ನು ಒತ್ತಾಯಿಸುತ್ತಿವೆ. ಜಿಎಸ್ಟಿ ಇಳಿಕೆಯಾದರೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ಗ್ರಾಹಕರು ಮುಂದೆ ಬರುತ್ತಾರೆ ಎಂಬುವುದು ಈ ವಲಯದ ಅಭಿಪ್ರಾಯವಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications