ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ತನ್ನ ನಿಯಮವನ್ನು ಬಿಗಿಗೊಳಿಸಿದೆ. ನಿರ್ದಿಷ್ಟ ಕಾರಣಗಳಿಂದಾಗಿ ಕೆಲವು ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಪಾವತಿಯನ್ನು ಸ್ಥಗಿತಗೊಳಿಸಿದೆ. ಅಷ್ಟು ಮಾತ್ರವಲ್ಲದೆ ಆ ಪಿಂಚಣಿದಾರರಿಗೆ ಶೋಕಾಸ್ ನೋಟಿಸ್ ಅನ್ನು ಕೂಡಾ ಜಾರಿ ಮಾಡಿದೆ. ಈ ಹಿಂದೆ ಪಾವತಿ ಮಾಡಲಾದ ಪಿಂಚಣಿಯನ್ನು ಮರುಪಾವತಿ ಮಾಡಿ ಎಂದು ಕೂಡಾ ನೋಟಿಸ್ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಅನೇಕ ಪಿಂಚಣಿದಾರರು ಯಾವುದೇ ಸೂಚನೆ ನೀಡದೆಯೇ ಜನವರಿ 2023ರಿಂದ ಪಿಂಚಣಿ ಪಡೆಯುತ್ತಿಲ್ಲ. ತಮ್ಮ ಪಿಂಚಣಿಯನ್ನು ಮತ್ತೆ ಪಡೆಯುವುದು ಹೇಗೆ ಎಂಬುವುದನ್ನು ತಿಳಿಯಲು ಕಾನೂನು ಆಯ್ಕೆಗಳನ್ನು ನೋಡುತ್ತಿದ್ದಾರೆ. ಪಿಂಚಣಿದಾರರ ಹಕ್ಕುಗಳ ಕಾರ್ಯಕರ್ತ ಪರ್ವೀನ್ ಕೊಹ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪಿಂಚಣಿದಾರರ ಹಕ್ಕುಗಳ ಕಾರ್ಯಕರ್ತ ಪರ್ವೀನ್ ಕೊಹ್ಲಿ ತಮ್ಮ ಸೇವೆಯ ಅವಧಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಇಪಿಎಫ್ ಯೋಜನೆ, 1952 ರ ಸೆಕ್ಷನ್ 26 (6) ರ ಅಡಿಯಲ್ಲಿ ಜಂಟಿ ಆಯ್ಕೆಯನ್ನು ಬಳಸಿದ್ದಾರೆ. ಇದನ್ನು ನಿವೃತ್ತಿ ನಿಧಿ ವ್ಯವಸ್ಥಾಪಕರು ಅನುಮೋದಿಸಿದ್ದಾರೆ. ನವೆಂಬರ್ 16, 1995 ರಿಂದ ನಿಜವಾದ ಸಂಬಳದ ಮೇಲೆ ಶೇಕಡ 8.33 ರ ದರದಲ್ಲಿ ವ್ಯತ್ಯಾಸದ ಮೊತ್ತವು ಹೆಚ್ಚಿನ ಪಿಂಚಣಿಗಾಗಿ ಅವರ ನಿವೃತ್ತಿಯಾಗಿದೆ.
ಪಿಂಚಣಿದಾರರ ಹಕ್ಕುಗಳ ಕಾರ್ಯಕರ್ತ ಪರ್ವೀನ್ ಕೊಹ್ಲಿ ಹೇಳುವುದೇನು?
"ಇಪಿಎಫ್ಒ ಈ ವರ್ಷದ ಜನವರಿಯಲ್ಲಿ 30,592 ರೂಪಾಯಿಗಳ ಮಾಸಿಕ ಪಿಂಚಣಿಗಾಗಿ ನನ್ನ ಪಿಪಿಒ ಅನ್ನು ರದ್ದುಗೊಳಿಸಿದೆ. ಮತ್ತು ಹೊಸ ಪಿಪಿಒ ಅನ್ನು ಬಿಡುಗಡೆ ಮಾಡಿದೆ. ಹಾಗೆಯೇ ಅವರ ಪಿಂಚಣಿಯು ತಿಂಗಳಿಗೆ 2,372 ರೂ ಆಗಿರುತ್ತದೆ. ಇದು ನನ್ನ ಸಾಂವಿಧಾನಿಕ ಹಕ್ಕಿಗೆ ವಿರುದ್ಧವಾಗಿದೆ. ಇದು ನಮ್ಮ ನಂಬಿಕೆಯನ್ನು ಉಲ್ಲಂಘನೆ ಮಾಡಿದಂತಾಗಿದೆ," ಎಂದು ತಿಳಿಸಿದ್ದಾರೆ.
"ಇಪಿಎಫ್ಒ ಆಗಲಿ ಅಥವಾ ಉದ್ಯೋಗಿಗಳಲ್ಲಿ ಆಗಲಿ ನಾವು ಎಂದಿಗೂ ಕೂಡಾ ಅಧಿಕ ಪಿಂಚಣಿ ಆಯ್ಕೆ ನಮಗೆ ಬೇಕೆಂದು ಕೇಳಿಲ್ಲ. ಆರ್ಸಿ ಗುಪ್ತಾ ಪ್ರಕರಣ 2006ರಲ್ಲಿ ಸುಪ್ರೀಂ ಕೋರ್ಟ್ ಹೆಚ್ಚಿನ ಪಿಂಚಣಿಗಾಗಿ ಕಟ್ ಆಫ್ ಡೇಟ್ ಇರುವಂತಿಲ್ಲ ಎಂದು ತಿಳಿಸಿದೆ. ಅದಾದ ಬಳಿಕ ಇಪಿಎಫ್ಒ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಿದೆ. ನಾನು ಅದಕ್ಕೆ ಅರ್ಜಿ ಸಲ್ಲಿಸಿದ್ದೇನೆ. ವ್ಯತ್ಯಾಸವಿರುವ ಮೊತ್ತವನ್ನು ಪಾವತಿಸಿದ್ದೇನೆ," ಎಂದು ನೀಲಮ್ ಗುಪ್ತಾ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ನೀಲಮ್ ಗುಪ್ತಾ ಫೆಬ್ರವರಿ 2013ರಲ್ಲಿ ನಿವೃತ್ತಿ ಹೊಂದಿದ್ದಾರೆ. ಅವರಿಗೂ ಕೂಡಾ ಈ ಹಿಂದೆ ಇಂತಹುದ್ದೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ನೀಲಮ್ ಗುಪ್ತಾರಿಗೆ ಪಿಂಚಣಿ ನೀಡುವುದನ್ನು ಇಪಿಎಫ್ಒ ಸ್ಥಗಿತ ಮಾಡಿದೆ. ಜನವರಿ ತಿಂಗಳಿನಿಂದ ಮಾಸಿಕ ಪಿಂಚಣಿ 9,408 ರೂಪಾಯಿಯನ್ನು ಪಾವತಿ ಮಾಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.
"ದಾಖಲೆಯ ಪ್ರಕಾರ, ನೀವು ನಿವೃತ್ತಿಯ ದಿನಾಂಕದ ನಂತರ ನಿಮ್ಮ ಆಯ್ಕೆಯನ್ನು ಸಲ್ಲಿಸಿದ್ದೀರಿ. ಆದ್ದರಿಂದ, ನೀವು ಹೆಚ್ಚಿನ ಪಿಂಚಣಿಗೆ ಅರ್ಹರಲ್ಲ ಮತ್ತು ನಿಮ್ಮ ಪಿಂಚಣಿಯನ್ನು ಕನಿಷ್ಠ ವೇತನದ ಮೇಲೆ ನೀಡಲಾಗುವ ಪಿಂಚಣಿಗೆ ಬದಲಾವಣೆ ಮಾಡಲಾಗುತ್ತದೆ. ಇದಲ್ಲದೆ, ಹೆಚ್ಚುವರಿ ಪಿಂಚಣಿ ಮೊತ್ತದ ವಸೂಲಾತಿಯನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು," ಎಂದು ಭವಿಷ್ಯ ನಿಧಿ ಸಂಸ್ಥೆ ಇಪಿಎಫ್ಒ ಸೂಚನೆ ತಿಳಿಸಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?



Click it and Unblock the Notifications