100ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುವ ಸಂಸ್ಥೆಗಳಲ್ಲಿ 15 ಸಾವಿರ ರುಪಾಯಿಯೊಳಗೆ ಆದಾಯ ಸಿಬ್ಬಂದಿಯ ಇಪಿಎಫ್ (ಕಾರ್ಮಿಕ ಭವಿಷ್ಯ ನಿಧಿ) ಪಾಲನ್ನು ಸರ್ಕಾರವೇ ಪಾವತಿಸುವ ಬಗ್ಗೆ ಇರುವ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ. ಯಾರಿಗೆ ಕಡಿಮೆ ಸಂಬಳ ಬರುತ್ತಿದೆಯೋ ಅಂಥವರಿಗೆ ಈ ಯೋಜನೆಯು ಅನ್ವಯ ಆಗಲಿದೆ.
ಈ ಹಿಂದೆ ಸರ್ಕಾರ ಘೋಷಿಸಿದ್ದ ಯೋಜನೆಯ ವಿಸ್ತರಣೆಯ ಭಾಗದಂತೆ ಇದು ಗೋಚರಿಸುತ್ತಿದೆ. ಈ ಹಿಂದೆ, ಯಾವ ಕಂಪೆನಿಯಲ್ಲಿ ನೂರು ಮಂದಿ ತನಕ ಕಾರ್ಮಿಕರಿದ್ದಾರೋ ಮತ್ತು ಆ ಪೈಕಿ 90 ಪರ್ಸೆಂಟ್ ನಷ್ಟು ಮಂದಿ ತಿಂಗಳಿಗೆ 15 ಸಾವಿರಕ್ಕಿಂತ ಕಡಿಮೆ ದುಡಿಯುತ್ತಿರುತ್ತಾರೋ ಅಂಥವರ ಪಿ.ಎಫ್. ಪಾಲನ್ನು ಕೇಂದ್ರ ಸರ್ಕಾರ ಪಾವತಿ ಮಾಡುತ್ತದೆ ಎಂದು ಘೋಷಿಸಲಾಗಿತ್ತು.
ಸದ್ಯಕ್ಕೆ ಹೊಸ ಪ್ರಸ್ತಾಪ ಮಾತ್ರ ಇದೆ. ಇನ್ನೂ ಸಾಕಷ್ಟು ಮಾಹಿತಿ ಹೊರಬರಬೇಕಿದೆ ಎಂದು ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗಿದ್ದರೆ ಆ ಪ್ರಸ್ತಾಪ ಏನು ಎಂಬುದರ ವಿವರ ಹೀಗಿದೆ.
15 ಸಾವಿರದೊಳಗೆ ಆದಾಯ ಇರುವ ಎಲ್ಲರ ಪಿಎಫ್ ಪಾವತಿ
* 15 ಸಾವಿರ ರುಪಾಯಿಯೊಳಗೆ ಆದಾಯ ಇರುವ ಎಲ್ಲ ಕಾರ್ಮಿಕರ ಪಿಎಫ್ ಅನ್ನು ಪಾವತಿಸುವುದು. ಈಗಿರುವಂತೆ ನೂರು ಕಾರ್ಮಿಕರಲ್ಲಿ 90% ಮಂದಿಗೆ ಎಂಬ ಹದಿನೈದು ಸಾವಿರದೊಳಗೆ ವೇತನ ಇರಬೇಕು ಎಂಬ ನಿಯಮದಿಂದ ವಿನಾಯಿತಿ ನೀಡುವುದು.
* 200 ಮಂದಿಯಷ್ಟು ಕಾರ್ಮಿಕರನ್ನು ನೇಮಿಸಿಕೊಂಡಿದ್ದರು 90 ಪರ್ಸೆಂಟ್ ಮಂದಿ 15 ಸಾವಿರದೊಳಗೆ ಸಂಬಳ ಪಡೆಯುತ್ತಿದ್ದರೆ ಅಂತಹವರ ಪಿಎಫ್ ಮೊತ್ತವನ್ನೂ ಪಾವತಿಸುವುದು.
* 100 ಮಂದಿಯೊಳಗೆ ಸಿಬ್ಬಂದಿ ಇದ್ದು, ಅದರಲ್ಲಿ 90 ಪರ್ಸೆಂಟ್ ಬದಲಿಗೆ 60 ಪರ್ಸೆಂಟ್ ಮಂದಿಗೆ 15 ಸಾವಿರದೊಳಗೆ ಸಂಬಳ ಪಡೆಯುತ್ತಿದ್ದರೂ ಪಿಎಫ್ ಪಾವತಿಸುವುದು.
ಎಷ್ಟು ಮೊತ್ತ ಸರ್ಕಾರ ಪಾವತಿಸುತ್ತದೆ?
ಇನ್ನು ಉದ್ಯೋಗದಾತರು ಹಾಗೂ ಉದ್ಯೋಗಿಗಳು ಇಬ್ಬರದೂ ಸೇರಿ 24% ಪಿ.ಎಫ್. ಮೊತ್ತವನ್ನು ಸರ್ಕಾರವೇ ನಿಡುತ್ತದೋ ಅಥವಾ ಅದರಲ್ಲಿ ಸ್ವಲ್ಪ ಮೊತ್ತವನ್ನು ಮಾತ್ರ ನಿಡುತ್ತದೋ ಎಂಬುದು ತಿಳಿದುಬಂದಿಲ್ಲ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದಲ್ಲಿ ಮೂರು ತಿಂಗಳ ಅವಧಿಗೆ ಮಾತ್ರ.
ಎಲ್ಲ ವಲಯಕ್ಕೂ ಅನ್ವಯ
ಸರ್ಕಾರದಿಂದ ಮುಂದಿನ ಆರ್ಥಿಕ ಉತ್ತೇಜನ ಬಂದಲ್ಲಿ ಈ ಅಂಶ ಒಳಗೊಂಡಿರಲಿದೆ ಎಂಬುದನ್ನು ಅಧಿಕಾರಿಗಳು ಹೇಳುತ್ತಾರೆ. ಎಲ್ಲ ವಲಯದಲ್ಲೂ ಇದು ಅನ್ವಯಿಸಲಾಗುತ್ತದೆ. ಆದರೆ ಫಲಾನುಭವಿಗಳನ್ನು ನಿರ್ಧರಿಸುವಾಗ 15 ಸಾವಿರ ಮೊತ್ತವನ್ನು ನಿಗದಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಹಣಕಾಸು ಸಮಸ್ಯೆ ಇರುವ ಸಂಸ್ಥೆಗಳಿಗೆ ಅನುಕೂಲ
ಸದ್ಯಕ್ಕೆ ಜಾರಿಯಲ್ಲಿರುವ ಪ್ರಸ್ತಾಪದಿಂದ ಹನ್ನೊಂದು ಲಕ್ಷ ಮಂದಿಗೆ ಅನುಕೂಲ ಆಗಲಿದೆ. ಅದೇ ಇನ್ನಷ್ಟು ವಿನಾಯಿತಿ ನೀಡಿದರೆ ಕಡಿಮೆ ಸಂಬಳ ಪಡೆಯುವ ಇಪ್ಪತ್ತು ಲಕ್ಷ ಮಂದಿಗೆ ಸಹಾಯ ಆಗಲಿದೆ. ಇದು ಸಾಕಾ ಅಂದರೆ, ಕೆಲವರು ಇಲ್ಲ ಅನ್ನಬಹುದು. ಆದರೆ ತುಂಬ ಕಷ್ಟದಲ್ಲಿ ನಡೆಯುತ್ತಿರುವ, ಹಣದ ಸಮಸ್ಯೆ ಎದುರಿಸುತ್ತಿರುವ ಸಂಸ್ಥೆಗಳಿಗೆ ಖಂಡಿತಾ ಅನುಕೂಲ ಆಗಲಿದೆ.
More From GoodReturns

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

Pink Line Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲಿ ಆರಂಭ, ಹೊಸ ರೈಲಿನ ಆಗಮನ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು



Click it and Unblock the Notifications