ಬಾಡಿಗೆ ವಸತಿಗಳಲ್ಲಿ ಉಳಿದುಕೊಂಡಿರುವ ಮತ್ತು ಸ್ಥಳಾಂತರಗೊಳ್ಳುವಾಗ ಆ ಮನೆಯ ಗೃಹಜ್ಯೋತಿಯಿಂದ ಹೊರಗುಳಿದು ಹೊಸ ಮನೆಯ ಗೃಹಜ್ಯೋತಿಯ ಫಲಾನುಭವಿಯಾಗಲು ನಿಮಗೆ ಸಾಧ್ಯವಾಗುತ್ತಿಲ್ಲವೇ?. ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ನ್ಯೂಸ್ ರಾಜ್ಯ ಸರ್ಕಾರವು ಸೇವಾ ಸಿಂಧು ಪೋರ್ಟಲ್ನಲ್ಲಿ ಆನ್ಲೈನ್ 'ಡಿಲಿಂಕಿಂಗ್' ಆಯ್ಕೆಗೆ ಈಗ ಅವಕಾಶ ನೀಡಿದೆ.
ಯೋಜನೆಯಿಂದ ಆಧಾರ್ ಸಂಖ್ಯೆಯನ್ನು ಡಿಲಿಂಕ್ ಮಾಡಲು ಮತ್ತು ಹೊಸ ಮನೆಗಳಿಗೆ ಗೃಹ ಜ್ಯೋತಿಯ ಪ್ರಯೋಜನವನ್ನು ಪಡೆಯಲು ಯಾವುದೇ ಆಯ್ಕೆಯಿಲ್ಲದ ಕಾರಣ ಕರ್ನಾಟಕದಾದ್ಯಂತ ಬಾಡಿಗೆದಾರರು ಒಂದು ಮನೆಗೆ ಅವರೇ ಎಂಬಂತೆ ಫಿಕ್ಸ್ ಆದಂತೆ ಆಗಿತ್ತು. ಬೇರೆಯವರು ಮನೆಯಲ್ಲಿದ್ದರೂ ಇನ್ನೊಬ್ಬರು ಬಾಡಿಗೆದಾರರು ಎಂಬಂತೆ ಸೂಚಿಸುತ್ತಿತ್ತು.

ಸಮಸ್ಯೆ ಮತ್ತು ಗೊಂದಲದ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜನವರಿ 18, 2024 ರ ಆವೃತ್ತಿಯಲ್ಲಿ 'ನಿಮ್ಮ ಮನೆಯನ್ನು ಬದಲಾಯಿಸುವುದೇ? ಗೃಹ ಜ್ಯೋತಿ ಮರು-ನೋಂದಣಿ ಸಂಕಟ' ಎಂದು ವರದಿಯನ್ನು ಮಾಡಿತ್ತು. ಹಾಗೆಯೇ ಹಲವಾರು ಮಾಧ್ಯಮಗಳು ವರದಿಯನ್ನು ಮಾಡಿತ್ತು.
ಈಗ ಮಾಧ್ಯಮಗಳ ವರದಿಯನ್ನು ಗಮನಿಸಿರುವ ಬೆಸ್ಕಾಂ ಬಾಡಿಗೆದಾರರು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಮ್ಗಳು) ನ್ಯಾಯವ್ಯಾಪ್ತಿಯ ವಿಭಾಗೀಯ ಕಚೇರಿಗಳಿಗೆ ಭೇಟಿ ನೀಡುವಂತೆ ಸೂಚಿಸಿದೆ. ಅವರ ಗೃಹ ಜ್ಯೋತಿ ಸಂಪರ್ಕಗಳಿಂದ ತಮ್ಮ ಆಧಾರ್ ಸಂಖ್ಯೆಯನ್ನು ತಾವೇ ಡಿಲಿಂಕ್ ಮಾಡುವ ಆಯ್ಕೆಯನ್ನು ನೀಡಿದೆ. ಆದರೆ ಈ ಕ್ರಮವು ವಿಭಾಗೀಯ ಕಚೇರಿಗಳಲ್ಲಿ ಅವ್ಯವಸ್ಥೆಗೆ ಮತ್ತಷ್ಟು ದಾರಿ ಮಾಡಿಕೊಟ್ಟಿತು.
ಬುಧವಾರ ಅಧಿಕೃತ ಸುತ್ತೋಲೆಯಲ್ಲಿ, ಇಂಧನ ಇಲಾಖೆಯು, "ಗ್ರಾಹಕರು ಸೇವಾ ಸಿಂಧು ಪೋರ್ಟಲ್ಗೆ ಭೇಟಿ ನೀಡುವ ಮೂಲಕ ಗೃಹ ಜ್ಯೋತಿ ಅಡಿಯಲ್ಲಿ ತಮ್ಮ ನೋಂದಣಿಯನ್ನು ಡಿಲಿಂಕ್ ಮಾಡಬಹುದು," ಎಂದು ತಿಳಿಸಿದೆ. ಗ್ರಾಹಕರು/ಬಾಡಿಗೆದಾರರು ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿದ ಅದೇ ಪೋರ್ಟಲ್ಗೆ ಭೇಟಿ ನೀಡಬೇಕು. ಅವರ ಆಧಾರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಬೇಕು ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.
ಇಲಾಖೆಯು ಆನ್ಲೈನ್ ಸೌಲಭ್ಯವನ್ನು ಘೋಷಿಸಿದ್ದರೂ, ಸೇವಾ ಸಿಂಧು ಪೋರ್ಟಲ್ ಇನ್ನೂ ಡಿಲಿಂಕಿಂಗ್ ಅನ್ನು ಆರಂಭ ಮಾಡಿಲ್ಲ. ಇದು ಒಂದೆರಡು ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆನ್ಲೈನ್ ವಿಧಾನಗಳ ಮೂಲಕ ಗ್ರಾಹಕರನ್ನು ಡಿಲಿಂಕ್ ಮಾಡಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಇಲಾಖೆ ಎಲ್ಲಾ ಎಸ್ಕಾಮ್ಗಳನ್ನು ತಿಳಿಸಿದೆ.
ಈ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠವಾಗಿ 200 ಯೂನಿಟ್ವರೆಗೆ ಉಚಿತವಾಗಿ ವಿದ್ಯುತ್ ಅನ್ನು ನೀಡಲಾಗುತ್ತದೆ. ಸರಾಸರಿ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಮಾಸಿಕವಾಗಿ 500ರಿಂದ 1200 ರೂಪಾಯಿ ವಿದ್ಯುತ್ ಬಿಲ್ ಬರುವವರಿಗೆ ಇದು ಲಾಭವಾಗಲಿದೆ. ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಮಂಗಳೂರುಒನ್, ವಿದ್ಯುತ್ ಇಲಾಖೆ ಕಚೇರಿಗಳಲ್ಲಿ ಕೂಡ ಅರ್ಜಿಯನ್ನು ನೋಂದಣಿ ಮಾಡಲಾಗುತ್ತಿದೆ. ಇನ್ನು ಕೆಲವು ನಕಲಿ ಸೈಟ್ಗಳು ಕೂಡಾ ಕಾಣಿಸಿಕೊಂಡಿದ್ದು ಈ ಬಗ್ಗೆ ಜಾಗರೂತರಾಗಿರುವಂತೆ ಸರ್ಕಾರವು ಈಗಾಗಲೆ ತಿಳಿಸಿದೆ.


Click it and Unblock the Notifications