"ಸಾಲ ಮಾಡಿಯಾದರೂ ತುಪ್ಪ ತಿನ್ನು" ಎಂದಿದ್ದಾನೆ ಚಾರ್ವಾಕ. ಸಾಲ ಮಾಡಿಯಾದರೂ ಸರಿ, ಸುಖವಾಗಿರಬೇಕು ಎಂಬುದು ಅದರರ್ಥ. ನೀವು ಎಂಥ ಸಾಲ ಮಾಡ್ತೀರಿ? ಪರ್ಸನಲ್ ಲೋನ್, ಗೋಲ್ಡ್ ಲೋನ್, ಅಡಮಾನ ಸಾಲ, ಕಾರು ಸಾಲ, ಗೃಹ ಸಾಲ.... ನಿಲ್ಲಿಸಿ. ಗೃಹ ಸಾಲ ಅಂದಾಕ್ಷಣ ಲಕ್ಷಗಟ್ಟಲೆ ಹಣ ಕಣ್ಣುಮುಂದೆ ಬರುತ್ತದೆ.
ಯಾರ್ಯಾರೋ ನೀಡಿದ ಸಲಹೆಗಳು, ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಮಿಥ್ಯೆಗಳು, ಆ ಬ್ಯಾಂಕ್ ಹಾಗೆ- ಈ ಬ್ಯಾಂಕ್ ನಲ್ಲಿ ಹೀಗೆ... ಅಂತೂ ನಾನಾ ಬಗೆಯ ಮಾತುಗಳು. ಮನೆ ನಿರ್ಮಾಣದ ಅಥವಾ ಮನೆ ಖರೀದಿ ಸಲುವಾಗಿ ಸಾಲ ಮಾಡುತ್ತಿರುವವರು ಕಡ್ಡಾಯವಾಗಿ ಕೆಲವು ವಿಚಾರ ತಿಳಿದಿರಬೇಕು. ಅದರಲ್ಲೂ ಮುಖ್ಯವಾಗಿ ಈ ಐದು ಮಿಥ್ಯೆಗಳನ್ನು ತಿಳಿದುಕೊಳ್ಳಿ.
ಮಿಥ್ಯೆ ಒಂದು: ಕಡಿಮೆ ಬಡ್ಡಿದರದ ಸಾಲವು ಅತ್ಯುತ್ತಮವಾದುದು
ಎಲ್ಲರಿಗೂ ಕಡಿಮೆ ಬಡ್ಡಿ ದರದ ಗೃಹಸಾಲ ಪಡೆಯಬೇಕು ಎಂಬುದೇ ಇಚ್ಛೆ. ಆದರೆ ವಾಸ್ತವದಲ್ಲಿ ಅದು ಸಾಧ್ಯ ಇಲ್ಲ. ಸಾಲ ನೀಡುವವರು ಹಲವು ಅಂಶಗಳನ್ನು ಗಮನಿಸಿ, ಬಡ್ಡಿ ದರವನ್ನು ನಿರ್ಧರಿಸುತ್ತಾರೆ. ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್, ಆದಾಯ, ಸಾಲ ಮರುಪಾವತಿ ವಿಚಾರದಲ್ಲಿ ಅವರ ನಡವಳಿಕೆ ಮುಂತಾದವು ಮುಖ್ಯವಾಗುತ್ತದೆ. ಕಡಿಮೆ ಬಡ್ಡಿ ದರ ಅಂದಾಕ್ಷಣ ಆಕರ್ಷಕ ಎನಿಸಬಹುದು. ಅದರರ್ಥ ಏನೆಂದರೆ ಆರಂಭದಲ್ಲಿ ನಿಮ್ಮ ಡೌನ್ ಪೇಮೆಂಟ್- ಹೂಡಿಕೆ ತುಂಬ ಹೆಚ್ಚು ಬೇಕಾಗುತ್ತದೆ. ಆಸ್ತಿ ಮೌಲ್ಯವನ್ನು ಕಡಿಮೆ ಬೆಲೆಗೆ ಲೆಕ್ಕ ಹಾಕುವುದರಿಂದ ಎಂಬತ್ತು ಪರ್ಸೆಂಟ್ ನಷ್ಟು ಸಾಲ ಕೂಡ ನಿಮಗೆ ಸಿಗದಿರಬಹುದು.
ಮಿಥ್ಯೆ ಎರಡು: ಕಡಿಮೆ ಅವಧಿಯ ಸಾಲವನ್ನು ಆರಿಸಿಕೊಳ್ಳುವುದು ಅತ್ಯುತ್ತಮ
ಗೃಹ ಸಾಲ ಇರುವುದೇ ದೀರ್ಘಾವಧಿಗೆ. ಸಾಲ ಪಡೆಯುವವರು ಇಪ್ಪತ್ತು ವರ್ಷಗಳ ಕಾಲ ಸಾಲ ತೀರಿಸುತ್ತಲೇ ಇರುತ್ತಾರೆ. ಮೊದಲ ಬಾರಿಗೆ ಸಾಲ ಪಡೆಯುವವರು ಕಡಿಮೆ ಅವಧಿಯದೇ ಉತ್ತಮ ಎಂದು ಭಾವಿಸುತ್ತಾರೆ. ಕಡಿಮೆ ಅವಧಿಯ ಸಾಲಕ್ಕೆ ಹೆಚ್ಚಿನ ಇಎಂಐ ಪಾವತಿಸಬೇಕಾಗುತ್ತದೆ. ಇದರಿಂದ ಸಹಜವಾಗಿಯೇ ತಿಂಗಳ ಬಜೆಟ್ ಮೇಲೆ ಪರಿಣಾಮ ಆಗುತ್ತದೆ. ಹಣಕಾಸಿನ ತುರ್ತಿಗೆ ಏನೂ ಉಳಿತಾಯ ಮಾಡಲು ಸಾಧ್ಯವಾಗಲ್ಲ. ಆದ್ದರಿಂದ ಕಡಿಮೆ ಅವಧಿಯ ಸಾಲ ತೆಗೆದುಕೊಂಡರೆ ಶೀಘ್ರವಾಗಿ ಸಾಲದಿಂದ ಬಿಡುಗಡೆ ಪಡೆಯಬಹುದು; ಆದರೆ ಅದು ಸೂಕ್ತ ಆಯ್ಕೆ ಅಲ್ಲ. ಆ ಕಾರಣಕ್ಕೆ ಮಧ್ಯಮ ಅವಧಿಯ, ಮಧ್ಯಮ ಪ್ರಮಾಣದ ಬಡ್ಡಿ ದರದ ಹಾಗೂ ಕೈಗೆಟುಕುವ ಇಎಂಐ ಪಾವತಿಯನ್ನು ಆರಿಸಿಕೊಳ್ಳುವುದು ಅತ್ಯುತ್ತಮ.
ಮಿಥ್ಯೆ ಮೂರು: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಅರ್ಜಿ ತಿರಸ್ಕೃತ ಆಗುತ್ತದೆ
ಗೃಹ ಸಾಲ ಪಡೆಯುವ ಸಂದರ್ಭದಲ್ಲಿ ನಿಮ್ಮ ಬಳಿ ಕ್ರೆಡಿಟ್ ಸ್ಕೋರ್ ಬಗ್ಗೆ ವಿಚಾರಿಸಲಾಗುತ್ತದೆ. ಹಲವರ ನಂಬಿಕೆ ಏನೆಂದರೆ, ಒಂಬೈನೂರಕ್ಕೆ ಏಳುನೂರಾ ಐವತ್ತಕ್ಕಿಂತ ಕಡಿಮೆ ಸ್ಕೋರ್ ಇದ್ದರೆ ತಾನಾಗಿಯೇ ಅರ್ಜಿ ತಿರಸ್ಕೃತವಾಗುತ್ತದೆ ಅಂದುಕೊಂಡಿರುತ್ತಾರೆ. ಆ ಕಾರಣಕ್ಕೆ ಲೋನ್ ಗೆ ಅಪ್ಲೈ ಕೂಡ ಮಾಡಲ್ಲ. ಬ್ಯಾಂಕ್ ಗಳು ಕ್ರೆಡಿಟ್ ಸ್ಕೋರ್ ಅನ್ನು ಕಠಿಣವಾಗಿ ಗಮನಿಸುವುದು ಹೌದು. ಆದರೆ ಹೌಸಿಂಗ್ ಫೈನಾನ್ಸ್ ಕಂಪೆನಿಗಳಲ್ಲಿ ಸಾಲಕ್ಕೆ ಪ್ರಯತ್ನಿಸಬಹುದು. ಈ ಹೌಸಿಂಗ್ ಫೈನಾನ್ಸ್ ಕಂಪೆನಿಯವರು ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ವಿನಾಯಿತಿ ನೀಡುತ್ತಾರೆ. ಆದರೆ ಇವರ ಬಳಿ ಬಡ್ಡಿ ದರ ಹೆಚ್ಚಿರುತ್ತದೆ.
ಮಿಥ್ಯೆ ನಾಲ್ಕು: ಬದಲಾಗುವ ಬಡ್ಡಿದರಕ್ಕಿಂತ ನಿಶ್ಚಿತ ಬಡ್ಡಿ ದರ ಉತ್ತಮ
ಸಾಲ ಪಡೆಯುವವರ ಪೈಕಿ ಬಹುತೇಕರು ಬದಲಾಗುವ ಬಡ್ಡಿ ದರಕ್ಕಿಂತ ನಿಶ್ಚಿತ ಬಡ್ಡಿ ದರವನ್ನೇ ಆರಿಸಿಕೊಳ್ಳುತ್ತಾರೆ. ಏಕೆಂದರೆ ಮಾರುಕಟ್ಟೆ ಹೀಗೇ ಅಂತ ಹೇಳಲು ಸಾಧ್ಯವಿಲ್ಲ ಎಂಬುದು ಅವರ ಮಾತು. ಸಾಮಾನ್ಯವಾಗಿ ಫಿಕ್ಸೆಡ್ ಬಡ್ಡಿ ದರಕ್ಕಿಂತ ಫ್ಲೋಟಿಂಗ್ ದರವು ಒಂದೂವರೆಯಿಂದ ಎರಡು ಪರ್ಸೆಂಟ್ ಕಡಿಮೆ ಇರುತ್ತದೆ. ಅದರ ಪರಿಣಾಮವಾಗಿ ಒಟ್ಟಾರೆ ಸಾಲ ಮರುಪಾವತಿ ಅವಧಿಯಲ್ಲಿ ದೊಡ್ಡ ಮಟ್ಟದ ಉಳಿತಾಯ ಆಗುತ್ತದೆ. ಒಂದು ವೇಳೆ ಬಡ್ಡಿ ದರದಲ್ಲಿ ಏರಿಳಿತವಾದರೂ ಅದರ ಪರಿಣಾಮ ದೀರ್ಘಾವಧಿಯದ್ದಾಗಿರುವುದಿಲ್ಲ. ಬದಲಾಗುವ ಬಡ್ಡಿ ದರ ಆರಿಸಿಕೊಂಡರೆ ನಿಶ್ಚಿತ ಬಡ್ಡಿ ದರಕ್ಕಿಂತ ಹೆಚ್ಚು ಉಳಿತಾಯ ಮಾಡಬಹುದು.
ಮಿಥ್ಯೆ ಐದು: ಅವಧಿಗೆ ಮುನ್ನವೇ ಸಾಲ ಮರುಪಾವತಿ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ
ಈ ಹಿಂದೆ ಗೃಹ ಸಾಲವನ್ನು ಮುಂಚಿತವಾಗಿಯೇ ಮರು ಪಾವತಿಸಿದರೆ ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ ಬದಲಾವಣೆ ಆಗಿದೆ. ಬದಲಾಗುವ ಬಡ್ಡಿ ದರಕ್ಕೆ ಪಡೆದ ಸಾಲವನ್ನು ಅವಧಿಗೆ ಪೂರ್ವವಾಗಿ ಮರುಪಾವತಿಸಿದರೆ ದಂಡ ಹಾಕುವುದಕ್ಕೆ ಬ್ಯಾಂಕ್ ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪೆನಿಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಬಂಧನೆಗಳನ್ನು ವಿಧಿಸಿದೆ. ನಿರ್ದಿಷ್ಟ ಅವಧಿ (ಮಾಮೂಲಿಯಾಗಿ ಐದು ವರ್ಷ) ನಂತರ ಅವಧಿ ಪೂರ್ವ ಮರುಪಾವತಿ ಮಾಡಿದರೆ ಯಾವುದೇ ಶುಲ್ಕ ಸಂಗ್ರಹಿಸುವುದಿಲ್ಲ. ಆದ್ದರಿಂದ ದಂಡ ಶುಲ್ಕದ ಬಗ್ಗೆ ತೀರಾ ಆಲೋಚನೆ ಮಾಡುವ ಅಗತ್ಯ ಇಲ್ಲದೆ ಅವಧಿಪೂರ್ವವಾಗಿಯೇ ಸಾಲ ಮರುಪಾವತಿಸಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications