ದೇಶದಲ್ಲಿ ಹೊಸ ತೆರಿಗೆ ಪಾವತಿ ವ್ಯವಸ್ಥೆಯಡಿ 2024-25ರ ಹಣಕಾಸು ವರ್ಷದಲ್ಲಿ ಸಾಮಾನ್ಯ ಅಥವಾ ವೈಯಕ್ತಿಕ ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡುವಾಗ ವಾರ್ಷಿಕ 7 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. 2023ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂಲ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಹಾಗೂ ತೆರಿಗೆ ರಿಯಾಯಿತಿ(ರಿಬೆಟ್)ಯನ್ನು 5ರಿಂದ 7 ಲಕ್ಷಕ್ಕೆ ಏರಿಸಿದ್ದಾರೆ.
ಹೊಸ ತೆರಿಗೆ ವ್ಯವಸ್ಥೆಯಡಿ ವೇತನದಾರರು ಹಾಗೂ ಪಿಂಚಣಿದಾರರ ವರ್ಗದಲ್ಲಿ 50,000 ರೂ. ಪ್ರಮಾಣಿತ ತೆರಿಗೆ ಕಡಿತ ನೀಡಲಾಗಿದ್ದು, 2023-24ರ ಆರ್ಥಿಕ ವರ್ಷದಲ್ಲಿ 7.5 ಲಕ್ಷ ರೂ.ವರೆಗೆ ಆದಾಯ ಗಳಿಸುವ ವ್ಯಕ್ತಿಗಳು 2024-25ನೇ ಸಾಲಿನಲ್ಲಿ ಪಾವತಿಸಬೇಕಾದ ತೆರಿಗೆ ಮೊತ್ತ ಶೂನ್ಯವಾಗಿರುತ್ತದೆ. ಹಾಗಾದರೆ, ನರೇಂದ್ರ ಮೋದಿ ಸರ್ಕಾರ ಘೋಷಿಸಿರುವ ತೆರಿಗೆ ಪರಿಹಾರ ಕ್ರಮಗಳಿಂದ ಎಷ್ಟು ಜನರಿಗೆ ಪ್ರಯೋಜನವಾಗುತ್ತದೆ? ಹಾಗಾದರೆ, ಆ ಕುರಿತ ಅಧಿಕೃತ ಮಾಹಿತಿ ಏನು ತೋರಿಸುತ್ತದೆ ಎಂಬುದನ್ನು ನೋಡೋಣ.
ಸರ್ಕಾರವು ಫೆ13ರಂದು ಲೋಕಸಭೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ 5 ಲಕ್ಷದವರೆಗೆ ಆದಾಯ ಹೊಂದಿರುವವರು ಸುಮಾರು 4.1 ಕೋಟಿ ಜನರಿದ್ದಾರೆ. ಹಾಗೆಯೇ 5ರಿಂದ 10 ಲಕ್ಷದ ಆದಾಯ ಮಿತಿಯಲ್ಲಿ ಒಟ್ಟು 1.4 ಕೋಟಿ ತೆರಿಗೆ ಪಾವತಿದಾರರು ಇದ್ದು, 2021-22 ಅವಧಿಗೆ ಒಟ್ಟು 6.3 ಕೋಟಿ ಮಂದಿ ರಿಟರ್ನ್ಸ್ ಫೈಲ್ ಮಾಡಿದ್ದಾರೆ.

ಆದರೆ, ಸರ್ಕಾರವು ದೇಶದಲ್ಲಿ 0-7 ಲಕ್ಷ ಆದಾಯದ ವ್ಯಾಪ್ತಿಯಲ್ಲಿ ನಿಖರವಾಗಿ ಎಷ್ಟು ಮಂದಿಯಿದ್ದಾರೆ ಎಂಬ ಅಂಕಿ-ಅಂಶವನ್ನು ಹಂಚಿಕೊಂಡಿಲ್ಲ. ಹೀಗಿರುವಾಗ, 2024-25ರಲ್ಲಿ ಸುಮಾರು 4 ಕೋಟಿಗೂ ಅಧಿಕ ತೆರಿಗೆದಾರರು 7 ಲಕ್ಷ ರೂ. ವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ ನೀತಿಯ ಲಾಭ ಪಡೆಯಲಿದ್ದಾರೆ. ಅಂದರೆ, ಈ ವರ್ಗದ ವ್ಯಾಪ್ತಿಯಲ್ಲಿ 2024-25ಕ್ಕೆ ವಾರ್ಷಿಕ 7 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿಲ್ಲದ ತೆರಿಗೆದಾರರು ಸರ್ಕಾರಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ.
2020-21 ಹಾಗೂ 2021-22ರಲ್ಲಿ ಒಟ್ಟು ಇರುವ ಸಾಮಾನ್ಯ ಅಥವಾ ವೈಯಕ್ತಿಕ ತೆರಿಗೆದಾರರು
ವೈಯಕ್ತಿಕ ಆದಾಯ ತೆರಿಗೆ(ರೂ.) 2020-21 2021-22
0-5 ಲಕ್ಷದವರೆಗೆ 46327410 41160543
5-10 ಲಕ್ಷ 11228574 14074602
10ಲಕ್ಷ ಮೇಲ್ಪಟ್ಟು 5411934 8103067
2021-22 ಆರ್ಥಿಕ ವರ್ಷದ ರಿಟರ್ನ್ಸ್ ಫೈಲಿಂಗ್ ದಿನಾಂಕದ ಗಡುವನ್ನು 2022ರ ಡಿ.31ರವರೆಗೆ ವಿಸ್ತರಿಸಿದ್ದ ಕಾರಣ 2022-23ರ ಅವಧಿಯ ಆದಾಯ ತೆರಿಗೆ ಪಾವತಿದಾರರ ಡೇಟಾವನ್ನು ಇನ್ನೂ ಕ್ರೋಢೀಕರಿಸಲಾಗಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ವೆಬ್ಸೈಟ್ನಲ್ಲಿ ಲಭ್ಯವಾಗಿರುವ ಇತ್ತೀಚಿನ ಮಾಹಿತಿ ಪ್ರಕಾರ 2022-23ರ ಅವಧಿಗೆ 7,54,79,837 ತೆರಿಗೆದಾರರು ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡಿದ್ದಾರೆ. 2023ರ ಫೆ.12ರವರೆಗೆ ಒಟ್ಟು 6.96 ಕೋಟಿ ಮಂದಿಯ ಐಟಿಆರ್ಎಸ್ ಪರಿಶೀಲನೆ ಕಾರ್ಯ ಮಾಡಲಾಗಿದೆ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications